ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
2012 ಡಿಸೆಂಬರ್ 11ರಂದು ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಸಾಮಾಜಿಕ ನ್ಯಾಯವಾದ ನ್ಯಾಯಮೂರ್ತಿ ಎ. ಜೆ. ಸದಾಶಿವ ರವರ ಆಯೋಗದ ವರದಿ ಜಾರಿಗೆ ಆಗ್ರಹಿಸಿದಾಗ ಚಳುವಳಿಗಾರರ ಮೇಲೆ ಕ್ಷುಲ್ಲಕ ನೆಪಮಾಡಿಕೊಂಡು ಮಾರಣಾಂತಿಕ ಹಲ್ಲೆ ಮಾಡಿದ ಅಮಾನವೀಯ ಘಟನೆ ಖಂಡಿಸಿ ಕಳೆದ ವರ್ಷ 8 ವರ್ಷದಿಂದ ಈ ದಿನವನ್ನು ಮಾದಿಗರ ಕರಾಳ ದಿನವನ್ನಾಗಿ ಆಚರಿಸಲಾಗುತ್ತಿದೆ. ಈ ಬಾರಿ ಶಿವಮೊಗ್ಗ ಜಿಲ್ಲೆಯಲ್ಲಿ 9ನೇ ವರ್ಷದ ಕರಾಳ ದಿನವನ್ನಾಗಿ ಆಚರಣೆ ಮಾಡಲಾಯಿತು.
ಮಾದಿಗ ಮೀಸಲಾತಿ ಹೋರಾಟ ಶಿವಮೊಗ್ಗ ಜಿಲ್ಲಾ ಸಮಿತಿ ವತಿಯಿಂದ ಏರ್ಪಡಿಸಲಾಗಿದ್ದ ಕಾಯ೯ಕ್ರಮವನ್ನು ರಾಜ್ಯ ಗೌರವಾಧ್ಯಕ್ಷ ಮಾರೆಪ್ಪ ತಮಟೆ ಬಡಿಯುವುದರ ಮೂಲಕ ಉದ್ಘಾಟನೆ ಮಾಡಿದರು.
ಈ ಸಂದರ್ಭದಲ್ಲಿ ಆರ್.ಕೆ. ನಿರಂಜನ್ ಮೂತಿ೯ ಪ್ರಾಸ್ತಾವಿಕ ಭಾಷಣ ಮಾಡಿದರು. ರಾಜ್ಯಾಧ್ಯಕ್ಷರಾದ ಪರಶುರಾಮ ಮರೇಗುದ್ದಿ, ಭಾನುಪ್ರಸಾದ್. ಬಿ.ಎ. ರಂಗಪ್ಪ, ಆರ್. ಶ್ರೀಧರ್, ಎಲ್. ಸುನಿಲ್, ಎನ್. ಮಲ್ಲೇಶ್, ವೆಂಕಟೇಶ್ ಇತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post