ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಗೋವಿಗೆ ಮೇವು ನೀಡುವುದು ಪವಿತ್ರ ಕೆಲಸವಾಗಿದ್ದು, ಸಂಘ-ಸಂಸ್ಥೆಗಳು ಲಾಕ್ಡೌನ್ ಸಂದರ್ಭದಲ್ಲಿ ಇದನ್ನು ತಮ್ಮ ಕರ್ತವ್ಯವೆಂದು ಭಾವಿಸಿ, ಸೇವೆ ಸಲ್ಲಿಸಬೇಕಿದೆ ಎಂದು ಭಾವುಸಾರ ಕ್ಷತ್ರಿಯ ಯುವಕ ಸಂಘದ ಅಧ್ಯಕ್ಷ ವಿನಯ್ ತಾಂದ್ಲೆ ಹೇಳಿದ್ದಾರೆ.
ಇಂದು ಅಬ್ಬಲಗೆರೆ ಸಮೀಪವಿರುವ ಜ್ಞಾನೇಶ್ವರಿ ಗೋಶಾಲೆಗೆ ಮೇವು ನೀಡಿ ಮಾತನಾಡಿದ ಅವರು, ಗೋ ತಾಯಿಗೆ ಮೇವನ್ನು ಒದಗಿಸಿದರೆ ನಮ್ಮ ಕುಟುಂಬಕ್ಕೂ ಶ್ರೇಯಸ್ಸು ಲಭ್ಯವಾಗುತ್ತದೆ. ಗೋವು ಮತ್ತು ಭೂಮಿಗೆ ಭಾರತದಲ್ಲಿ ಹಿಂದಿನ ಕಾಲದಿಂದಲೂ ಪೂಜ್ಯ ಸ್ಥಾನ ನೀಡಲಾಗಿದೆ. ಇವೆರಡನ್ನೂ ಪೂಜಿಸಿ ಸೇವೆ ಸಲ್ಲಿಸಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಲಾಕ್ಡೌನ್ ಸಂದರ್ಭದಲ್ಲಿ ಗೋವುಗಳಿಗೆ ಮೇವು ಕೊರತೆ ಉಂಟಾಗಬಹುದೆಂಬ ನಿಟ್ಟಿನಲ್ಲಿ ಭಾವಸಾರ ಕ್ಷತ್ರಿಯ ಯುವಕ ಸಂಘದ ವತಿಯಿಂದ ಹಿಂಡಿ-ಬೂಸಾ, ಮೇವು ನೀಡುವ ಮೂಲಕ ಸೇವೆ ಮಾಡುತ್ತಿದ್ದೇವೆ. ಗೋ ದಾನಕ್ಕೆ ನಮ್ಮ ದೇಶದಲ್ಲಿ ಅತ್ಯಂತ ಮಹತ್ವವಿದ್ದು, ಎಲ್ಲರೂ, ಈ ಸೇವೆ ಮಾಡಿ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಭಾವಸಾರ ಕ್ಷತ್ರಿಯ ಸೊಸೈಟಿಯ ಅಧ್ಯಕ್ಷ ಗಿರೀಶ್ ನಾಜರೆ, ಮಾಜಿ ಅಧ್ಯಕ್ಷ ರಾಕೇಶ್ ಸಾಕ್ರೆ, ಯುವಕ ಸಂಘದ ಪ್ರಧಾನ ಕಾರ್ಯದರ್ಶಿ ಸಚಿನ್ ಬೇದ್ರೆ, ಯುವಕ ಸಂಘದ ಉಪಾಧ್ಯಕ್ಷ ಮಂಜುನಾಥ್ ಬೇದ್ರೆ, ದತ್ತಾತ್ರೇಯ, ಖಜಾಂಚಿ ಕಿರಣ್ ಬಾಂಬೋರೆ, ಯುವಕ ಸಂಘದ ಪ್ರಮುಖರಾದ ಸುಬ್ಬು, ಹರೀಶ್ ಉತ್ತರಕರ್, ಶಾಮರಾವ್, ಪ್ರಶಾಂತ್ ರಾಘವೇಂದ್ರ ರಂಗದೊಳ್, ನಿತೀಶ್, ವಿಜಯ್, ಭರತ್ ಸೇರಿದಂತೆ ಹಲವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post