No Result
View All Result
HOSMAT Hospitals Partners with South United Football Club as Official Sports Medicine & Medical Services Leader
English Articles

HOSMAT Hospitals Partners with South United Football Club as Official Sports Medicine & Medical Services Leader

by ಕಲ್ಪ ನ್ಯೂಸ್
February 15, 2026
0

Kalpa Media House  |  Bengaluru  | HOSMAT Hospitals, a recognised leader in orthopaedics, trauma and sports medicine for over three...

Read moreDetails
Saptavarna Sangeetham “Rainbow of music” Swarathmika

Saptavarna Sangeetham “Rainbow of music” Swarathmika

February 14, 2026
60% of Indians have received an invite to a dating app or site later found to be fake

60% of Indians have received an invite to a dating app or site later found to be fake

February 12, 2026
Tata Motors Indonesia Secures its Biggest Order for 70,000 Yodha and Ultra T.7 Vehicles for Deployment

Tata Motors Indonesia Secures its Biggest Order for 70,000 Yodha and Ultra T.7 Vehicles for Deployment

February 12, 2026
20,000+ runners participated in the 8th Edition of Manipal Marathon

20,000+ runners participated in the 8th Edition of Manipal Marathon

February 12, 2026
  • Advertise With Us
  • Grievances
  • About Us
  • Contact Us
Monday, February 16, 2026
Follow Us
kalpa.news
">
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಶಿವಮೊಗ್ಗ

ಸೀಮಿತ ಜಗತ್ತಿನಲ್ಲಿ ಎಲ್ಲೆಯಿಲ್ಲದ ಅಭಿವೃದ್ಧಿ ಅಪಾಯಕಾರಿ: ಕೃಪಾಕರ-ಸೇನಾನಿ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
March 4, 2021
in ಶಿವಮೊಗ್ಗ
0
ಸೀಮಿತ ಜಗತ್ತಿನಲ್ಲಿ ಎಲ್ಲೆಯಿಲ್ಲದ ಅಭಿವೃದ್ಧಿ ಅಪಾಯಕಾರಿ: ಕೃಪಾಕರ-ಸೇನಾನಿ
Share on FacebookShare on TwitterShare on WhatsApp

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಶಂಕರಘಟ್ಟ: ತನ್ನದೇ ಮಿತಿಯಿರುವ ಜಗತ್ತಿನಲ್ಲಿ ಮಾನವನು ಕೊನೆಯಿಲ್ಲದ ಅಭಿವೃದ್ಧಿ ಸಾಧಿಸಲು ಹಪಹಪಿಸುತ್ತಿರುವುದು ಪ್ರಕೃತಿ ಮತ್ತು ಅರಣ್ಯಸಂಪತ್ತಿಗೆ ಮಾರಕವಾಗಿ ಪರಿಣಮಿಸುತ್ತಿದೆ ಎಂದು ಖ್ಯಾತ ವನ್ಯಜೀವಿ ಚಲನಚಿತ್ರಕಾರರು ಮತ್ತು ತಜ್ಞರಾದ ಕೃಪಾಕರ-ಸೇನಾನಿ ಆಭಿಪ್ರಾಯಪಟ್ಟರು.

ಕುವೆಂಪು ವಿವಿಯ ವನ್ಯಜೀವಿ ಮತ್ತು ನಿರ್ವಹಣೆ ವಿಭಾಗವು ಮಾ.1ರಿಂ 3ರವರೆಗೆ ವಿವಿಯಲ್ಲಿ ಆಯೋಜಿಸಿರುವ ವಿಶ್ವ ವನ್ಯಜೀವಿ ದಿನಾಚರಣೆ ಹಾಗೂ ಉಪನ್ಯಾಸ ಸರಣಿಯ ಉದ್ಘಾಟನಾ ಸಮಾರಂಭವನ್ನು ಪ್ರೊ. ಹಿರೇಮಠ್ ಸಭಾಂಗಣದಲ್ಲಿ ನೆರವೇರಿಸಿ ಅವರು ಮಾತನಾಡಿದರು.


ಇಂದಿನ ಎಲ್ಲ ಆರ್ಥಿಕ ಯೋಜನೆಗಳು, ನೀತಿ-ನಿರೂಪಣೆಗಳು ಯಾಂತ್ರಿಕ, ಪ್ರಾಪಂಚಿಕ ಅಭಿವೃದ್ಧಿಯನ್ನು ಗುರಿಯಾಗಿಸಿಕೊಂಡು ರೂಪುಗೊಳ್ಳುತ್ತಿವೆ. ಮತ್ತಷ್ಟು ಬಳಸಿ ಎಂಬ ಕೊಳ್ಳುಬಾಕತನವನ್ನು ಪ್ರೇರೇಪಿಸುತ್ತಿರುವ ಈ ಪ್ರವೃತ್ತಿಯ ಪರಿಸರ ಸಂರಕ್ಷಣೆಗೆ ಸವಾಲಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಕೃಪಾಕರ್ ಮತ್ತು ಸೇನಾನಿ ತಂಡವು ಖ್ಯಾತ ಡಿಸ್ಕವರಿ ಚಾನೆಲ್‌ಗೆ ನಿರ್ಮಿಸಿ, ಪ್ರದರ್ಶಿಸುತ್ತಿರುವ ವೈಲ್ಡ್ ಡಾಗ್ಸ್ ಕಾರ್ಯಕ್ರಮ ಸರಣಿ ಕುರಿತು ಮಾತನಾಡಿದ ಅವರು, ಕಾಡು ನಾಯಿಗಳು ಮಾನವ ವಿರೋಧಿ ಎಂಬ ತಪ್ಪುಕಲ್ಪನೆಗಳಿವೆ. ಅದು ತಪ್ಪು. ಆಫ್ರಿಕಾದ ಸವನ್ನಾ ಹುಲ್ಲುಗಾವಲ್ಲಿನ ಪ್ರಾಣಿಗಳ ಕುರಿತ ಕಾರ್ಯಕ್ರಮ ಚಿತ್ರೀಕರಿಸುವುದಕ್ಕಿಂತ ಭಾರತದಲ್ಲಿ ಅದು ಹೆಚ್ಚು ಕಷ್ಟಕರವಾದದ್ದಾಗಿದೆ. ಇಲ್ಲಿನ ನೀಲಗಿರಿ ಬೆಟ್ಟಗಳು, ಎಂ.ಎಂ. ಹಿಲ್ಸ್, ವಯನಾಡ್‌ನ ದಟ್ಟ ಮಾದರಿಯ ಕಾಡುಗಳಲ್ಲಿ ವಿಡಿಯೋ ಚಿತ್ರಿಕರಣ ಮತ್ತು ವನ್ಯಜೀವಿಗಳ ಅಧ್ಯಯನ ಬಹಳಷ್ಟು ಸವಾಲಿನದ್ದಾಗಿದೆ ಎಂದು ಹೇಳಿದರು.
ಮಾನವನ ಅಗತ್ಯಕ್ಕೆ ತಕ್ಕಂತೆ ಅರಣ್ಯ, ಅರ್ಥಿಕ ನೀತಿಗಳು ರೂಪುಗೊಳ್ಳುತ್ತಿರುವುದು ಪಶ್ಚಿಮ ಘಟ್ಟಗಳ ಸಾಲು ಸೇರಿದಂತೆ ದಟ್ಟ ಅರಣ್ಯಗಳು ಛಿದ್ರವಾದ ಸ್ಥಿತಿಗೆ ತಲುಪಿವೆ. ಇದುವರೆಗೂ ನಡೆದಿರುವಂತಹ ವನ್ಯಜೀವಿ ಕುರಿತ ಅಧ್ಯಯನಗಳೆಲ್ಲವೂ ಒಂದು ಜಾತಿಯ ಪ್ರಾಣಿಕುಲಕ್ಕೆ ಸೀಮಿತವಾಗಿ ಕೈಗೊಂಡವವಾಗಿವೆ. ಪ್ರಸ್ತುತದ ಸಮಸ್ಯೆಗಳ ಪರಿಹಾರಕ್ಕಾಗಿ ಎಲ್ಲಜೀವಿಗಳನ್ನು ಒಳಗೊಂಡ ಪರಸ್ಪರ ಪ್ರಭಾವ ಅರಿಯಲು ಸಾಧ್ಯವಿರುವ ಸಮಗ್ರವಾದ ಅಧ್ಯಯನದ ಅವಶ್ಯಕತೆಯಿದೆ ಎಂದು ಅವರು ಪ್ರತಿಪಾದಿಸಿದರು.


ತಜ್ಞ ಕೃಪಾಕರ ಮಾತನಾಡಿ, ಕುವೆಂಪು ಮತ್ತು ಪೂರ್ಣಚಂದ್ರ ತೇಜಸ್ವಿಯವರ ಸಾಹಿತ್ಯ ಮತ್ತು ಫೊಟೋಗ್ರಫಿಗಳನ್ನು ಗಮನಿಸಿದಲ್ಲಿ ಪಶ್ಚಿಮಘಟ್ಟ ಸಾಲಿನ ಪರಿಸರ, ವನ್ಯಜೀವಿ, ಜೀವವೈವಿಧ್ಯದ ಕುರಿತು ಅಪಾರವಾದ, ಆಳವಾದ ಅವಲೋಕನ ಜ್ಞಾನದಿಂದ ಸೃಷ್ಟಿಯಾದದ್ದು ಮತ್ತು ಬಹಳ ಸರಳವಾಗಿ ಅಭಿವ್ಯಕ್ತಿಗೊಂಡಿದೆ. ವೈಜ್ಞಾನಿಕ ಮಾಹಿತಿಪೂರ್ಣ ಸಾಹಿತ್ಯ, ಬರಹಗಳು ಇಂದಿನ ಕಲಾ, ಮತ್ತು ವಿಜ್ಞಾನ ವಿದ್ಯಾರ್ಥಿಗಳಿಗೆ ಪರಿಸರ ಸಂಬಂಧಿ ಅಧ್ಯಯನಕ್ಕೆ ಪ್ರೇರಣೆ ನೀಡುವಂತಿವೆ ಎಂದರು.

ಪರಾವಲಂಬಿ ಸಸ್ಯಗಳ ಆಧರಿತವಾಗಿ ಬದುಕುವ ಪಕ್ಷಿಯೊಂದಕ್ಕೆ ಕುವೆಂಪು ಬಂದಳಿಕೆ ಎಂಬ ಹೆಸರಿನಿಂದ ನಾನು ಕರೆಯುತ್ತೇನೆ, ವೈಜ್ಞಾನಿಕ ಹೆಸರೇನು ಎಂದು ನನ್ನ ಬಳಿ ಕೇಳಿ ಮಾಹಿತಿ ಪಡೆದಿದ್ದರು. ಆದರೆ ಅವರು ಕನ್ನಡದಲ್ಲಿ ನಾಮಕರಿಸಿದ ಹೆಸರು ಸಹ ಅತ್ಯಂತ ಸೂಕ್ತವಾಗಿತ್ತು. ಅವರ ಇಂತಹ ಜ್ಞಾನವು ವಿಜ್ಞಾನ ವಿದ್ಯಾರ್ಥಿಗಳು ಮತ್ತು ಪರಿಸರಾಸಕ್ತರಿಗೆ ಮತ್ತಷ್ಟು ನಿಸರ್ಗ ಸಂಪತ್ತಿನ ಕುರಿತು ಆಸಕ್ತಿಪೂರ್ಣವಾಗಿ ಓದಬೇಕು, ಅಧ್ಯಯನಿಸಬೇಕೆನ್ನುವಷ್ಟು ಅರ್ಹ ಮಾಹಿತಿಯಿದೆ ಎಂದು ತಿಳಿಸಿದರು.


ಈ ಸಂದರ್ಭದಲ್ಲಿ ಕುಲಪತಿ ಪ್ರೊ. ಬಿ.ಪಿ.ವೀರಭದ್ರಪ್ಪ, ಕುಲಸಚಿವ ಪ್ರೊ. ಎಸ್.ಎಸ್. ಪಾಟೀಲ್, ವಿಭಾಗಾಧ್ಯಕ್ಷ ಡಾ. ವಿಜಯ್‌ಕುಮಾರ್ ಮಾತನಾಡಿದರು. ಈ ಸಂದರ್ಭದಲ್ಲಿ ವಿವಿಯ ಪ್ರೊ. ವೆಂಕಟೇಶ್ವರುಲು, ಡಾ. ಬಿ. ತಿಪ್ಪೇಸ್ವಾಮಿ, ಡಾ. ನಾಗರಾಜ್ ಸೇರಿದಂತೆ ವಿವಿಯ ಜೀವವಿಜ್ಞಾನ ವಿಷಯಗಳ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.

ಉದ್ಘಾಟನಾ ಸಮಾರಂಭದ ನಂತರ ಉಪನ್ಯಾಸ ಸರಣಿ ಆರಂಭವಾಯಿತು. ಖ್ಯಾತ ಪ್ರಕೃತಿವಾದಿ ಎಸ್.ಎಸ್. ಸುನಿಲ್ ಪ್ರಾಕೃತಿಕ ಇತಿಹಾಸ ಕುರಿತು ಉಪನ್ಯಾಸ ನೀಡಿದರು.

ಮಾರ್ಚ್ 5ರ ನಾಳೆ ಡಾ. ಗಣೇಶಯ್ಯ ಅವರು ಸಂರಕ್ಷಣೆಯಲ್ಲಿ ಸಂಸ್ಕೃತಿ, ಧರ್ಮ ಮತ್ತು ವಿಜ್ಞಾನ ವಿಚಾರದ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಮೂರುದಿನಗಳ ಕಾರ್ಯಕ್ರಮದ ಭಾಗವಾಗಿ ಪೇಂಟಿಂಗ್ ಸ್ಪರ್ಧೆ, ಪಕ್ಷಿಗಳ ವೀಕ್ಷಣೆ ಮತ್ತು ಅಧ್ಯಯನ ಸ್ಪರ್ಧೆ, ಅಂತರ್ ವಿಭಾಗ ರಸಪ್ರಶ್ನೆ, ಪ್ರಬಂಧ ಸ್ಪರ್ಧೆಗಳು ಸೇರಿದಂತೆ ವಿವಿಧ ಚಟುವಟಿಕೆಗಳು ನಡೆಯಲಿವೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

Tags: Kannada News WebsiteKuvempu UniversitLatest News KannadaLocal NewsMalnad NewsShankaraghattaShimogaShivamoggaShivamogga NewsWildlife dayಮಲೆನಾಡು_ಸುದ್ಧಿಶಂಕರಘಟ್ಟಶಿವಮೊಗ್ಗ_ನ್ಯೂಸ್
Share197Tweet123Send
Previous Post

ಶಿವಮೊಗ್ಗದಲ್ಲಿ ರೈತ ಮಹಾಪಂಚಾಯತ್ ಕಚೇರಿ ಉದ್ಘಾಟನೆ

Next Post

ಚಿಕ್ಕಬಳ್ಳಾಪುರ ಜನಧ್ವನಿ ಜಾಥಾದಲ್ಲಿ ಡಿ.ಕೆ. ಶಿವಕುಮಾರ್ ಹೇಳಿದ್ದೇನು? ಮುಂದೆ ಓದಿ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್’ಗೆ ಕೊರೋನಾ ಪಾಸಿಟಿವ್!

ಚಿಕ್ಕಬಳ್ಳಾಪುರ ಜನಧ್ವನಿ ಜಾಥಾದಲ್ಲಿ ಡಿ.ಕೆ. ಶಿವಕುಮಾರ್ ಹೇಳಿದ್ದೇನು? ಮುಂದೆ ಓದಿ

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ಪೊಂಗಲ್ ಹಬ್ಬದ ಪ್ರಯುಕ್ತ ಕೊಟ್ಟಾಯಂ – ಬೆಂಗಳೂರು ಕ್ಯಾಂಟೋನ್ಮೆಂಟ್ ನಡುವೆ ವಿಶೇಷ ರೈಲು ಸಂಚಾರ

ಈ ಎಲ್ಲಾ ದಿನಗಳು ಮೈಸೂರು-ಶಿವಮೊಗ್ಗ ಎಕ್ಸ್’ಪ್ರೆಸ್, ಅರಸೀಕೆರೆ ರೈಲುಗಳ ಬಿಗ್ ಅಪ್ಡೇಟ್

February 6, 2026
ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

February 12, 2026
ಶಿವಮೊಗ್ಗ ವಿಮಾನ ನಿಲ್ದಾಣದ ಕುರಿತು ಹೊರಬಿತ್ತು ಬಿಗ್ ಅಪ್ಡೇಟ್ | ಇಲ್ಲಿದೆ ಡೀಟೇಲ್ಸ್

ಶಿವಮೊಗ್ಗ ವಿಮಾನ ನಿಲ್ದಾಣದ ಕುರಿತು ಹೊರಬಿತ್ತು ಬಿಗ್ ಅಪ್ಡೇಟ್ | ಇಲ್ಲಿದೆ ಡೀಟೇಲ್ಸ್

February 16, 2026
ಒಳ ಮೀಸಲಾತಿಯಲ್ಲಿ ಅನ್ಯಾಯ ಆರೋಪ | ಬಂಜಾರ ಸಂಘದಿಂದ ಪ್ರತಿಭಟನೆ

ಒಳ ಮೀಸಲಾತಿಯಲ್ಲಿ ಅನ್ಯಾಯ ಆರೋಪ | ಬಂಜಾರ ಸಂಘದಿಂದ ಪ್ರತಿಭಟನೆ

February 16, 2026
ಉದ್ಯೋಗಖಾತ್ರಿ ಯೋಜನೆ ರದ್ದು | ಗ್ರಾಪಂ ಮಟ್ಟದಿಂದ ಕಾಂಗ್ರೆಸ್ ಹೋರಾಟ | ಸಚಿವ ಮಧುಬಂಗಾರಪ್ಪ

ಸಾಗರ | ರೈತಾಪಿ ಕುಟುಂಬಗಳನ್ನು ಒಕ್ಕಲೆಬ್ಬಿಸುವುದಿಲ್ಲ | ಸಚಿವ ಮಧು ಬಂಗಾರಪ್ಪ ಭರವಸೆ

February 16, 2026
ಬೆಂಗಳೂರಿನ ಕಲಾಭಿಮಾನಿಗಳಿಗೊಂದು ಸಂಭ್ರಮ | ಫೆ.20ರಿಂದ ಮೂರು ದಿನ ಉಡುಪ ಮ್ಯೂಸಿಕಲ್ ಫೆಸ್ಟಿವಲ್

ಬೆಂಗಳೂರಿನ ಕಲಾಭಿಮಾನಿಗಳಿಗೊಂದು ಸಂಭ್ರಮ | ಫೆ.20ರಿಂದ ಮೂರು ದಿನ ಉಡುಪ ಮ್ಯೂಸಿಕಲ್ ಫೆಸ್ಟಿವಲ್

February 16, 2026
ಭರಮಸಾಗರದಲ್ಲಿ ಶಿವರಾತ್ರಿ ವೈಭವ | ಶ್ರೀ ಸಿಬಾರ ಮೈಲಾರಲಿಂಗ ಸ್ವಾಮಿಗೆ ವಿಶೇಷ ರುದ್ರಾಭಿಷೇಕ

ಭರಮಸಾಗರದಲ್ಲಿ ಶಿವರಾತ್ರಿ ವೈಭವ | ಶ್ರೀ ಸಿಬಾರ ಮೈಲಾರಲಿಂಗ ಸ್ವಾಮಿಗೆ ವಿಶೇಷ ರುದ್ರಾಭಿಷೇಕ

February 16, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL