ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಸಾಂಸ್ಕೃತಿಕ ನಗರ ಮೈಸೂರಿನ ಚಾಮುಂಡಿ ತಾಯಿ ಬೆಟ್ಟದ ತಪ್ಪಲಿನಲ್ಲಿ ಪದವಿ ವಿದ್ಯಾರ್ಥಿನಿಯ ಮೇಲೆ ಕೆಲವು ಕಾಮುಕರು ಅತ್ಯಾಚಾರ ನಡೆಸಿದನ್ನು ಖಂಡಿಸಿ ಇಂದು ಜಿಲ್ಲಾಧಿಕಾರಿ ಕಚೇರಿಯ ಮುಂದೆ ಕೆಪಿಸಿಸಿ ಜಿಲ್ಲಾ ಘಟಕದ ವತಿಯಿಂದ ಮನವಿ ಸಲ್ಲಿಸಲಾಯಿತು.
ಮೈ-ಮನಗಳನ್ನು ರೋಮಾಂಚನಗೊಳಿಸುವ ಈ ದೇಶ ಭಕ್ತಿ ಗೀತೆಯನ್ನೊಮ್ಮೆ ನೋಡಿ
ಈ ಸಂದರ್ಭದಲ್ಲಿ ಕೆಪಿಸಿಸಿ ಮುಖಂಡ ದೇವೇಂದ್ರಪ್ಪ ಮಾತನಾಡಿ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ದೇಶದಲ್ಲಿ ಗಾಂಜಾ ಅಫೀಮ್ ಲೀಲಾಜಾಲವಾಗಿ ವ್ಯಾಪಾರವಾಗುತ್ತಿದೆ. ಇದನ್ನು ಸೇವಿಸಿದ ಯುವಕರು ಮತ್ತು ಜನರು ಇಂತಹ ಘೋರ ಪ್ರಕರಣಕ್ಕೆ ಕೈ ಹಾಕುತ್ತಿದ್ದಾರೆ ಇದಕ್ಕೆ ಅಮಾಯಕ ವಿದ್ಯಾರ್ಥಿನಿಯರು ಮತ್ತು ಯುವತಿಯರು ಬಲಿಯಾಯಾಗುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಎಲ್ಲೋ ಒಂದು ಕಡೆ ಇಂತಹ ಪ್ರಕರಣಗಳು ಬೆಳಕಿಗೆ ಬರುತ್ತಿದೆ. ಉಳಿದ ಪ್ರಕಾರಗಳಲ್ಲಿ ಪೋಷಕರು ಮಾನ ಮರ್ಯಾದೆಗೆ ಅಂಜಿ ಮಕ್ಕಳು ಸತ್ತು ಹೋದರು ಗಾಯವಾದರೂ ಪರವಾಗಿಲ್ಲ ಇಂತಹ ಪ್ರಕರಣಗಳು ಬೆಳಕಿಗೆ ಬರಬಾರದೆಂದು ಮೌನವಾಗಿದ್ದಾರೆ. ಇಂತಹ ಮೌನಗಳೇ ಇಂತಹ ಘಟನೆಗೆ ಕಾರಣವೆಂದು ಹೇಳುತ್ತಾ ಈ ಕೂಡಲೇ ಪ್ರಕರಣದ ಆರೋಪಿಗಳನ್ನು ಬಂಧಿಸಿ ಶೀಘ್ರ ನ್ಯಾಯ ಒದಗಿಸಬೇಕು ಹಾಗೂ ರಾಜಕಾರಣಿಗಳಿಂದ ಒತ್ತಡ ಬಂದರೆ ಪೊಲೀಸರು ಎನ್ಕೌಂಟರ್ ಮೂಲಕ ಇಂಥ ಆರೋಪಿಗಳನ್ನು ಸಾಯಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಪಿ. ಅರ್ಜುನ್ , ವಿದ್ಯಾರ್ಥಿ ಘಟಕದ ಅಧ್ಯಕ್ಷ ನಿಹಾಲ್ ಸಿಂಗ್. ನಾಗರಜ್, ಅಧ್ಯಕ್ಷ ವಿಶಾಲ್ ಗುಜ್ಜಾರ್, ದರ್ಶನ್ ಇನ್ನಿತರರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post