ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಬಿಜೆಪಿ ರಾಜ್ಯಾಧ್ಯಕ್ಷರಾಗಿ ಇದೇ ಮೊದಲ ಬಾರಿಗೆ ಶಿವಮೊಗ್ಗಕ್ಕೆ ಆಗಮಿಸಿರುವ ಬಿ.ವೈ. ವಿಜಯೇಂದ್ರ BYVijayendra ಅವರು ಹಿರಿಯ ಮುಖಂಡರ ನಿವಾಸಕ್ಕೆ ಭೇಟಿ ನೀಡಿ, ಆರ್ಶೀವಾದ ಪಡೆದು, ಚರ್ಚೆ ನಡೆಸಿದರು.
ಮತ್ತೂರು Mattur ಗ್ರಾಮಕ್ಕೆ ಇಂದು ಮುಂಜಾನೆ ತೆರಳಿದ ವಿಜಯೇಂದ್ರ ಅವರು, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಪ್ರಾಂತ ಕಾರ್ಯನಿರ್ವಾಹ ಪಟ್ಟಾಭಿರಾಮ್ ಹಾಗೂ ರಾಜ್ಯ ಪ್ರಕೋಷ್ಠಗಳ ಸಂಯೋಜಕರಾದ ಎಂ.ಬಿ. ಭಾನುಪ್ರಕಾಶ್ ಅವರ ನಿವಾಸಗಳಿಗೆ ಭೇಟಿ ನೀಡಿದರು.
ಹಿರಿಯ ನಾಯಕರಿಬ್ಬರಿಗೆ ವಿಜಯೇಂದ್ರ ನಮಸ್ಕರಿಸಿ, ಆರ್ಶೀವಾದ ಪಡೆದು ಮಹತ್ವದ ಚರ್ಚೆ ನಡೆಸಿದರು.
Also read: ಭದ್ರಾವತಿ | ಸಿಡಿಲು ಬಡಿದು ಸಹೋದರರ ದುರ್ಮರಣ
ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ಶಾಸಕ ಎಸ್.ಎನ್. ಚನ್ನಬಸಪ್ಪ, ಎಂಎಲ್’ಸಿ ಡಿ.ಎಸ್. ಅರುಣ್, DSArun ಕೆ.ಬಿ. ಅಶೋಕ್ ನಾಯ್ಕ್, ಸೂಡ ಮಾಜಿ ಅಧ್ಯಕ್ಷ ಎಸ್. ದತ್ತಾತ್ರಿ ಹಾಗೂ ಜನಪ್ರತಿನಿಧಿಗಳು, ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post