ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಬಿಜೆಪಿಯ ಶಾಸಕ ಅರಗ ಜ್ಞಾನೇಂದ್ರ #Araga Gnanendra ಸಚಿವರಾಗಿದ್ದ ಕಾಲದಲ್ಲಿ ತೀರ್ಥಹಳ್ಳಿ ಭಾಗದಲ್ಲಿ ಸುಮಾರು 100 ಕೋಟಿಗೂ ಹೆಚ್ಚು ಸರ್ಕಾರಿ ಕಟ್ಟಡಗಳ ಕಾಮಗಾರಿಗಳು ನಡೆದಿದ್ದು, ಕಾಮಗಾರಿ ಸಂಪೂರ್ಣ ಕಳಪೆ ಮತ್ತು ಭ್ರಷ್ಟಚಾರವಾಗಿದ್ದು, ಈ ಬಗ್ಗೆ ಸಮಗ್ರ ತನಿಖೆ ಮಾಡಬೇಕು ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ #Ayanuru Manjunath ಆಗ್ರಹಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತೀರ್ಥಹಳ್ಳಿ ಕ್ಷೇತ್ರದಲ್ಲಿ ಪೊಲೀಸ್ ಕ್ವಾಟರ್ಸ್ ಪೊಲೀಸ್ ಠಾಣೆ, ಅಗ್ನಿಶಾಮಕ ಕಟ್ಟಡ,ಗ್ರಾಮಾಭಿವೃದ್ಧಿ ಭವನ, ಪ್ರಥಮ ದರ್ಜೆ ಕಾಲೇಜು, ಹೀಗೆ ವಿವಿಧ ಕಟ್ಟಡಗಳು ಅರಗ ಜ್ಞಾನೇಂದ್ರ ಅವರು ಸಚಿವರಾಗಿದ್ದಾಗ ನಿರ್ಮಾಣವಾಗಿವೆ. ಸುಮಾರು 100 ಕೋಟಿಗಳ ವೆಚ್ಚದಲ್ಲಿ ಈ ಎಲ್ಲಾ ಕಟ್ಟಡಗಳು ನಿರ್ಮಾಣವಾಗಿದ್ದರೂ ಕೂಡ ಈ ಮಳೆಗಾಲದಲ್ಲಿ ಅವೆಲ್ಲವೂ ಸೋರುತ್ತಿವೆ ಎಂದರು.

ಬಿಜೆಪಿ ಕಾಲದಲ್ಲಿ ಭ್ರಷ್ಟಚಾರ ತುಂಬುತುಳುಕಿತ್ತು ಎನ್ನುವುದಕ್ಕೆ ಸೋರುತ್ತಿರುವ ಸರ್ಕಾರಿ ಕಟ್ಟಡಗಳೇ ಸಾಕ್ಷಿಯಾಗಿವೆ. ವಿಶೇಷವೆಂದರೆ ಈ ಎಲ್ಲಾ ಕಟ್ಟಡಗಳ ಗುತ್ತಿಗೆದಾರ ಒಬ್ಬನೇಯಾಗಿರುತ್ತಾನೆ. ಆತ ಶಾಸಕ ಅರಗಜ್ಞಾನೇಂದ್ರ ಸಂಬಂಧಿ ಎಂದು ಹೇಳಲಾಗುತ್ತಿದೆ ಎಂದರು.

ಸದನ ಆರಂಭವಾಗುತ್ತದೆ. ಸರ್ಕಾರಿ ನೌಕರರ ಏಳನೇ ವೇತನ ಜಾರಿ ಮಾಡಲು ಸರ್ಕಾರ ಕ್ರಮಕೈಗೊಳ್ಳಬೇಕು ಈಗಾಗಲೇ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ. ಶೇ.27.5ರಷ್ಟು ಹೆಚ್ಚಿಸಲು ನಿರ್ಧರಿಸಲಾಗಿದೆ. ಮಧ್ಯಾಂತರವಾಗಿ ಶೇ.17ರಷ್ಟು ಈಗಾಗಲೇ ನೀಡಲಾಗಿದೆ. ಹಾಗೆಯೇ ಹಳೆ ಪಿಂಚಣಿ ವ್ಯವಸ್ಥೆ ಜಾರಿಗೆ ಕೂಡ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದರು.

Also read: ಪ್ಲಾಸ್ಟಿಕ್ ಸರ್ಜರಿ ಬಗ್ಗೆ ಭಯ, ಆತಂಕ ಬೇಡ: ಡಾ. ಚೇತನ್ ಕುಮಾರ್
ಅಲ್ಲದೇ ಸಚಿವರ ಕಾರಿನಲ್ಲಿಯೇ ಅರಗಜ್ಞಾನೇಂದ್ರ ಅವರು ಉದ್ಘಾಟನ ಸ್ಥಳಕ್ಕೆ ಬಂದಿದ್ದಾರೆ. ಬರುವ ದಾರಿಯಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡಬೇಡಿ ಎಂದು ಕೇಳಿಕೊಂಡಿದ್ದಾರೆ. ಹಾಗಾಗಿ ಹೇಳಿರಬಹುದಷ್ಟೇ. ಆದರೆ ತನಿಖೆ ಮಾಡಬೇಕು ಎಂಬುವುದು ನಮ್ಮ ಆಗ್ರಹ ಎಂದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post