ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಬಿಜೆಪಿ ಶಿವಮೊಗ್ಗ ನಗರ ಸಮಿತಿ ಹಾಗೂ ನಗರ ಯುವಮೋರ್ಚಾ ವತಿಯಿಂದ ನಗರದ ಸರ್ಎಂವಿ ರಸ್ತೆಯ ಎಟಿಎನ್ಸಿಸಿ ಕಾಲೇಜು ಮುಂಭಾಗ ಬಿಜೆಪಿ ಸದಸ್ಯತ್ವ ಅಭಿಯಾನ ಕಾರ್ಯಕ್ರಮಕ್ಕೆ ಸಂಸದ ಬಿ.ವೈ. ರಾಘವೇಂದ್ರ MP Raghavendra ಚಾಲನೆ ನೀಡಿದರು.
ಮಿಸ್ಕಾಲ್ ನೀಡುವುದರ ಮೂಲಕ ಹಲವಾರು ಯುವಕ-ಯುವತಿಯರು ಬಿಜೆಪಿ ಸದಸ್ಯತ್ವ ಅಭಿಯಾನದಲ್ಲಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ಬಿ.ವೈ.ರಾಘವೇಂದ್ರ ವಿಶ್ವಗುರುವಾಗಿ ಭಾರತ ಬೆಳೆಯುತ್ತಿದ್ದು, ದೇಶದ ಅಭಿವೃದ್ಧಿ ದೃಷ್ಟಿಯಿಂದ ಸಾವಿರಾರು ಯುವಕ-ಯುವತಿಯರು ಬಿಜೆಪಿ ಕಡೆ ಆಕರ್ಷಿತರಾಗುತ್ತಿದ್ದು, ಸ್ವಯಂಪ್ರೇರಿತರಾಗಿ ಸದಸ್ಯತ್ವವನ್ನು ಪಡೆಯುತ್ತಿದ್ದಾರೆ. ಪಕ್ಷ ವಿಜಯ ಸಂಕಲ್ಪ ಅಭಿಯಾನದಡಿಯಲ್ಲಿ ಜನನಿಬಿಡ ಪ್ರದೇಶಗಳಲ್ಲಿ ಮತ್ತು ಪ್ರಮುಖ ಸ್ಥಳಗಳಲ್ಲಿ ಕರಪತ್ರ ಹಂಚಿಕೆ, ಗೋಡೆ ಬರಹ, ಸ್ಟಿಕ್ಕರ್ ಅಂಟಿಸುವುದು ಹಾಗೂ ಮಿಸ್ಕಾಲ್ ನೀಡುವುದರ ಮೂಲಕ ಸದಸ್ಯತ್ವ ಅಭಿಯಾನ ಮುಂದುವರೆಸಿದೆ. ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ಹರಿಕೃಷ್ಣ, ನಗರ ಯುವ ಮೋರ್ಚಾ ಅಧ್ಯಕ್ಷ ದರ್ಶನ್, ಮಾಲತೇಶ್ ಸೇರಿದಂತೆ ಶಿವಮೊಗ್ಗ ನಗರ ಸಮಿತಿ ಮತ್ತು ಯುವಮೋರ್ಚಾದ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Also read: ವಿಐಎಸ್ಎಲ್ ಕಾರ್ಖಾನೆ ಉಳಿವಿಗೆ ಆಗ್ರಹಿಸಿ ಫೆ.4ರಂದು ಎಎಪಿ ಪಾದಯಾತ್ರೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post