ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕೆಎಸ್’ಆರ್’ಟಿಸಿಯಿಂದ ವಿತರಿಸಲಾಗುತ್ತಿರುವ ರಿಯಾಯ್ತಿ ಪಾಸ್ ಆಧಾರಿತ ಪ್ರಯಾಣದ ಅವಧಿಯನ್ನು ಆಗಸ್ಟ್-22 ರಿಂದ ಅಕ್ಟೋಬರ್-22 ರ ಅಂತ್ಯದವರೆಗೆ ವಿಸ್ತರಿಸಲಾಗಿದೆ.
ಈ ಕುರಿತಂತೆ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆ ಹೊರಡಿಸಿದ್ದು, ವಿದ್ಯಾರ್ಥಿಗಳಿಂದ ನಿಗದಿತ ಮೊತ್ತವನ್ನು ಪಡೆದುಕೊಂಡು ರಶೀದಿ ನೀಡಿ ವಿದ್ಯಾರ್ಥಿಗಳು ರಶೀದಿ ಮತ್ತು ಹಳೆಯ ಪಾಸ್ ಎರಡನ್ನು ತೋರಿಸಿ ಅಕ್ಟೋಬರ್-22ರ ವರೆಗೆ ಪ್ರಯಾಣಿಸಲು ಅವಕಾಸ ನೀಡಲಾಗಿದೆ.
ಅಂತಿಮ ವರ್ಷದ ಕೊನೆಯ ಸೆಮಿಸ್ಟರ್’ನಲ್ಲಿ ಅಭ್ಯಸಿಸುತ್ತಿರುವ ಪದವಿ/ಸ್ನಾತಕೋತ್ತರ/ಡಿಪ್ಲೊಮಾ/ಕಾನೂನು ಇತರೆ ಎಲ್ಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಅಂತಿಮ ವರ್ಷದ ಪರೀಕ್ಷೆ ಮುಗಿಯುವವರಿಗೆ ಮಾತ್ರ ಅಂದರೆ ಅಕ್ಟೋಬರ್-22ರ ಅಂತ್ಯದವರೆಗೆ ಹಳೆಯ ಪಾಸನ್ನು ಹಾಗೂ ಅವಧಿ ವಿಸ್ತರಣೆ ಸಮಯದಲ್ಲಿ ನೀಡಿರುವ ರಶೀದಿಯನ್ನು ತೋರಿಸಿ ಉಚಿತವಾಗಿ ಪ್ರಯಾಣಿಸಲು ಅನುಮತಿಸಲಾಗಿದೆ.
ಇನ್ನುಳಿದ ಇತರೆ ತರಗತಿ/ಸೆಮಿಸ್ಟರ್ ವಿದ್ಯಾರ್ಥಿಗಳು ಸೇವಾಸಿಂಧು ಪೋರ್ಟಲ್’ನಲ್ಲಿ ಅರ್ಜಿ ಸಲ್ಲಿಸಿ ಹೊಸ ಪಾಸ್’ಗಳನ್ನು ಶಿವಮೊಗ್ಗ ವಿಭಾಗದ ಬಸ್ ನಿಲ್ದಾಣಗಳ ಬಸ್ ಪಾಸ್ ವಿತರಣಾ ಕೌಂಟರ್’ಗಳಲ್ಲಿ ಪಡೆಯಬಹುದಾಗಿದೆ ಎಂದು ತಿಳಿಸಿದ್ದಾರೆ.
Also read: ಶಿವಮೊಗ್ಗದ ಮಹಿಳೆ ಅಮೆರಿಕದಲ್ಲಿ ಸಾವು


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















