ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ನ್ಯೂಟೌನ್ನಲ್ಲಿರುವ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಸೊಮವಾರ ರಾತ್ರಿ ಸರ್ಪದೋಷ ನಿವಾರಣೆಗಾಗಿ ವಿಶೇಷವಾದ ನಾಗಪೂಜೆಯನ್ನು ವರ್ಣರಂಜಿತವಾಗಿ ಆಚರಿಸಲಯಿತು.
ಕಾರ್ಯಕ್ರಮದಲ್ಲಿ ಆಕರ್ಷಕವಾಗಿ, ವರ್ಣಮಯವಾದ ರಂಗವಲ್ಲಿಯಲ್ಲಿ ನಾಗದೇವರ ಬೃಹತ್ಗಾತ್ರದ ಚಿತ್ರವನ್ನು ಬಿಡಿಸಲಾಗಿತ್ತು. ದೇವಾಲಯದ ಒಳಗೆ ಹೊರಗೆ ಪೂಜಾಸ್ಥಳಗಳಲ್ಲಿ ವಿಶೇಷ ಅಲಂಕಾರವನ್ನು ಮಾಡಲಾಗಿತ್ತು.
ಕಾರ್ಯಕ್ರಮದಲ್ಲಿ ಚಂಡೆವಾದ್ಯದ ನಡುವೆ ಅರ್ಚಕರ ಮಂತ್ರಗಳು ನಾಗಪಾತ್ರಿಗಳ ಕುಣಿತ ವಿಶೇಷವಾಗಿತ್ತು. ರಾತ್ರಿ 9-30ಕ್ಕೆ ಆರಂಭಗೊಂಡ ಈ ವಿಶೇಷ ಪೂಜೆ ತಡರಾತ್ರಿ 2-30ರವರೆಗೆ ನಡೆಯಿತು. ನೂರಾರು ಜನರು ಹಾಗೂ ದೇವಾಲಯದ ಆಡಳಿತ ಮಂಡಳಿಯವರು ಕಾರ್ಯಕ್ರಮದಲ್ಲಿ ಆದಿಯಿಂದ ಅಂತ್ಯದವರೆಗೆ ಭಾಗವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post