ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಎಪ್ರಿಲ್ 12ರಂದು ನಡೆಯಲಿರುವ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಚರ್ಚಿಸುವ ವಿಷಯಗಳ ಪಟ್ಟಿಯಲ್ಲಿ ಮೇಯರ್ ಸಹಿಯೇ ಇಲ್ಲದ ವಿಚಾರವೊಂದು ಸೇರಿಕೊಂಡಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಹೌದು… ನಗರದ ಹೃದಯ ಭಾಗದಲ್ಲಿರುವ ಬ್ಯಾರಿ ಮಾಲ್ ಲೀಸ್ ಅವಧಿಯನ್ನು ವಿಸ್ತರಣೆ ಮಾಡುವ ಹಾಗೂ ಬಾಡಿಗೆಯನ್ನು ರಿಯಾಯ್ತಿ ನೀಡುವ ಕುರಿತಾಗಿನ ಚರ್ಚೆಯ ವಿಚಾರ ಸಭೆಯ 17ನೆಯ ವಿಷಯವಾಗಿ ಸೇರ್ಪಡೆಯಾಗಿದೆ. ಆದರೆ, ಇದಕ್ಕೆ ಮೇಯರ್ ಸಹಿಯೇ ಇಲ್ಲ ಎಂದು ಹೇಳಲಾಗಿರುವುದು ಹಲವು ರೀತಿಯ ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಕಳೆದ ವಾರ ಈ ವಿಷಯವನ್ನು ಪ್ರಸ್ತಾಪಿಸಿ ಸಾಮಾನ್ಯ ಸಭೆಯಲ್ಲಿ ಕೊನೆಯದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿ ಚರ್ಚೆಗೆ ತರಲು ಉದ್ದೇಶಿಸಲಾಗಿತ್ತು. ಇದನ್ನ ಮೇಯರ್ ತಿರಸ್ಕರಿಸಿದ್ದಾರೆ. ಅವಧಿ ಮುಗಿಯುವಾಗಲೇ ವಿಸ್ತರಣೆಯ ಅವಸರವೇನು ಎಂದು ತಿರಸ್ಕರಿಸಿ, ಸಹಿ ಮಾಡಿಲ್ಲ ಎಂದು ಹೇಳಲಾಗಿದೆ.

ಈ ಎರಡೂ ವಿಚಾರಗಳ ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಕೆಲವು ಬಿಜೆಪಿ ಸದಸ್ಯರು ಹಾಗೂ ಅಧಿಕಾರಿಗಳು ಇಂತಹ ವಿಚಾರವನ್ನು ಚರ್ಚೆಗೆ ತಂದು ಬ್ಯಾರೀಸ್ ಗೋಲ್ಡನ್ ಹಾರ್ವೆಸ್ಟ್ ಹೋಲ್ಡಿಂಗ್ಸ್ ಸಂಸ್ಥೆಗೆ ಅನುಕೂಲ ಮಾಡಿಕೊಡಲು ಯತ್ನಿಸುತ್ತಿದ್ದಾರೆ ಎಂಬ ಮಾತುಗಳು ಪಾಲಿಕೆ ಮೊಗಸಾಲೆಯಲ್ಲಿ ಕೇಳಿಬರುತ್ತಿದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news






Discussion about this post