Monday, July 28, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home Special Articles

ಅಳಿದು ಅಗಲಿದ್ದ ಕೆರೆಗೆ ಪುನರ್ಜನ್ಮವಿತ್ತ ಶಿವಮೊಗ್ಗದ ನಮ್ಮ ಪರಿಸರಾಸಕ್ತರ ತಂಡ

ಶಿವಮೊಗ್ಗಕ್ಕೆ ಮುಕುಟ ಮಣಿಯಾಗಲಿರುವ ಪುಷ್ಕರಣಿ, ಎಲ್ಲಿ ನಿರ್ಮಾಣವಾಗುತ್ತಿದೆ? ವಿಶೇಷತೆಯೇನು?

May 31, 2021
in Special Articles, ಶಿವಮೊಗ್ಗ
0 0
0
Share on facebookShare on TwitterWhatsapp
Read - 2 minutes

ಕಲ್ಪ ಮೀಡಿಯಾ ಹೌಸ್

ಮನುಕುಲದ ಜೀವನಾಡಿಯೇ ಅಂತರ್ಜಲ. ಕಾಡೆಂದರೆ ನೀರು, ನೀರೆಂದರೆ ಹಸಿರು, ಹಸಿರೆಂದರೆ ಅನ್ನ, ಅನ್ನವೆಂದರೆ ಪ್ರಾಣ. ಇದು ಜೀವನ ಚಕ್ರ. ಎಲ್ಲಾ ಕಾಲಕ್ಕೂ ನೀರು ಮಾನವನ ಜೀವಾಮೃತ. ಇಂತಹ ಜೀವಸಿಂಧುವಿನ ಬಗೆಗೆ ಅತೀವ ಕಾಳಜಿ ಹೊಂದಿದ್ದ ನಮ್ಮ ಪರಿಸರಾಸಕ್ತ ತಂಡ ಈಗಾಗಲೇ ಶಿವಮೊಗ್ಗೆಯಲ್ಲಿ ಇರುವ ಕೆರೆ ಅಭಿವೃದ್ಧಿಯ ಉನ್ನತೀಕರಣಕ್ಕೆ ಶ್ರಮಿಸುತ್ತಿದ್ದು, ಶಿವಮೊಗ್ಗೆಯ ವಾಜಪೇಯಿ ಬಡಾವಣೆಯ ಒಣ ಭೂಮಿಯನ್ನು ಸೂಡಾದವರು ಪಾರ್ಕ್ ನಿರ್ಮಾಣಕ್ಕೆಂದು ಮೀಸಲಿಟ್ಟ ಜಾಗವನ್ನು ಈಗ ಸಂಪದ್ಭರಿತ ಪುಷ್ಕರಿಣಿಯಾಗಿ ಪರಿವರ್ತನೆ ಮಾಡಿದ್ದಾರೆ.

ವಿವಿಧ ಕ್ಷೇತ್ರದಲ್ಲಿ ಈಗಾಗಲೇ ಸಮಾಜಮುಖಿಯಾಗಿ ಸೇವೆ ಸಲ್ಲಿಸುತ್ತಿರುವ ಈ ತಂಡದಲ್ಲಿ ಶಿಕ್ಷಣ ತಜ್ಞ ಪ್ರೊ. ಬಿ.ಎಂ. ಕುಮಾರಸ್ವಾಮಿ, ಪ್ರೊ.ಎ.ಎಸ್. ಚಂದ್ರಶೇಖರ್, ಪರಿಸರ ಪ್ರೇಮಿ ಬಾಲಕೃಷ್ಣ ನಾಯ್ಡು, ಉದ್ಯಮಿಗಳಾದ ಪ್ರಕಾಶ್ ಪ್ರಭು, ಭಾಸ್ಕರ್ ಕಾಮತ್, ಜೋಡಿಯಾಕ್ ಪ್ರಕಾಶ್, ವಿಡಿಯೋಗ್ರಾಫರ್ ಮೋಹನ್, ಭಾಸ್ಕರ್ ಕಾಮತ್, ಕಾಟನ್ ಜಗದೀಶ್, ಪರೋಪಕಾರಂ ಶ್ರೀಧರ್‌ರವರು ಸಮಾನ ಮನಸ್ಕರ ತಂಡ ಕಟ್ಟಿ ಜೊತೆಗೂಡಿ ಕಾರ್ಯನಿರತರಾಗಿದ್ದಾರೆ.
ಶಿವಮೊಗ್ಗೆಯ ವಾಜಪೇಯಿ ಬಡಾವಣೆಯಲ್ಲಿರುವ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಸೂಡಾದ ಅಧೀನದಲ್ಲಿರುವ ಸುಮಾರು 6 ಎಕರೆ ವಿಸ್ತೀರ್ಣದಲ್ಲಿರುವ ಈ ಜಾಗದಲ್ಲಿ 2 ಎಕರೆಯಲ್ಲಿ ಈ ಪುಷ್ಕರಣಿ ನಿರ್ಮಾಣಗೊಳ್ಳುತ್ತಿದೆ. ಕಾಮಗಾರಿ ಬಹುತೇಕ ಅಂತಿಮ ಹಂತವನ್ನು ತಲುಪಿದೆ. ಇದು 300 ಮೀಟರ್ ಉದ್ದ, 250 ಮೀಟರ್ ಅಗಲ, 8 ಅಡಿ ಆಳವಿದ್ದು 2 ಕೋಟಿ ಲೀಟರ್ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿದೆ.


ಪಶ್ಚಿಮ ಘಟ್ಟದಲ್ಲಿ ಪ್ರಮುಖವಾಗಿ ಬೆಳೆಯುತ್ತಿರುವ ಹಲವು ರೀತಿಯ ಮರಗಳು, 1000ಕ್ಕೂ ಹೆಚ್ಚಿನ ಗಿಡಗಳು, ಈಗಾಗಲೇ ಅಳಿವಿನ ಅಂಚಿನಲ್ಲಿರುವ ಸಸ್ಯ ಪ್ರಭೇಧಗಳನ್ನು ಉಳಿದ 4 ಎಕರೆ ಜಮೀನಿನಲ್ಲಿ ಬೆಳೆಸುವ ಉದ್ದೇಶವಿದೆ. ಸುತ್ತಲೂ ವಾಕಿಂಗ್ ಪಾಥ್ ನಿರ್ಮಾಣ; ಕಲ್ಯಾಣಿಯ ಮಧ್ಯಭಾಗದಲ್ಲಿರುವ ಮಣ್ಣಿನ ಪ್ರದೇಶದಲ್ಲಿ ಒಂದು ಬೃಹತ್ ಆಲದ ಮರ ಹಾಗೂ ಹೊಳೆಲಕ್ಕಿಗಿಡಗಳನ್ನು ನೆಟ್ಟು, ಮಾನವರ ಸಂಪರ್ಕವಿಲ್ಲದ ರೀತಿಯಲ್ಲಿ ಹಣ್ಣು-ನೀರನ್ನು ಬಳಸಿಕೊಂಡು ಪಕ್ಷಿಗಳಿಗೆ ತಂಗುದಾಣವಾಗಿಯೂ ನಿರ್ಮಾಣವಾಗಬೇಕೆಂಬ ಚಿಂತನೆ ಸಾಕಾರಗೊಳ್ಳುತ್ತಿದೆ.
ಸರ್ಕಾರದ ಯಾವುದೇ ನೆರವನ್ನು ಪಡೆಯದೆ, ಇದಕ್ಕಾಗಿ ಶ್ರೀ ಡಿ.ಎಸ್. ಅರುಣ್‌ ಅವರ ನೇತೃತ್ವದಲ್ಲಿ ವಿವಿಧ ಪೆಟ್ರೋಲ್ ಬಂಕ್ ಮಾಲೀಕರು 700 ಲೀಟರ್ ಡೀಸೆಲನ್ನು ಉಚಿತವಾಗಿ ನೀಡಿದ್ದಾರೆ. ಬಸವಕೇಂದ್ರದ ಶ್ರೀಶ್ರೀ ಬಸವಮರುಳಸಿದ್ಧ ಮಹಾಸ್ವಾಮಿಗಳ, ವಾಣಿಜ್ಯೋದ್ಯಮಿಗಳು, ಮಠಾಧೀಶರು, ಎಲ್ಲಾ ಸ್ಥರದ ವ್ಯಕ್ತಿಗಳು, ಸಾಮಾಜಿಕ ಕಳಕಳಿಯುಳ್ಳ ಆಸಕ್ತರು ತಮ್ಮ ಉದಾರ ದೇಣಿಗೆಯನ್ನು ನೀಡುತ್ತಿದ್ದಾರೆ. ಇದರೊಂದಿಗೆ ಜಿಲ್ಲೆಯ ಶಾಸಕರು ಹಾಗೂ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವರಾದ ಶ್ರೀ ಕೆ.ಎಸ್. ಈಶ್ವರಪ್ಪನವರು, ಸೂಡಾದ ಅಧ್ಯಕ್ಷರಾದ ಎಸ್, ಎಸ್, ಜ್ಯೋತಿ ಪ್ರಕಾಶ್, ವಿಧಾನ ಪರಿಷತ್ ಸದಸ್ಯರಾದ ಶ್ರೀ ಎಸ್. ರುದ್ರೇಗೌಡರು ಮಾಚೇನಹಳ್ಳಿ ಕೈಗಾರಿಕೋದ್ಯಮಿಗಳು ಸೇರಿದಂತೆ ಹಲವರು ಕೈಜೋಡಿಸಿದ್ದಾರೆ.

ಈ ತಂಡ ಕೇವಲ ಇದೊಂದೇ ಕೆರೆಗೆ ಸೀಮಿತವಾಗದೆ ಸುತ್ತಮುತ್ತಲಿನ ಇನ್ನುಳಿದ ಕೆರೆಗಳ ಅಭಿವೃದ್ಧಿ, ಗಿಡ ನೆಡುವುದು ಹಾಗೂ ಇತರೆ ಪರಿಸರಪರ ಕೆಲಸಗಳಿಗೂ ಇನ್ನಿಲ್ಲದಂತೆ ಮುಂಚೂಣಿಯಲ್ಲಿ ಶ್ರಮಿಸುತ್ತಿದೆ. ಇವರ ಈ ಕೆಲಸವನ್ನು ಕೇವಲ ನೋಡುತ್ತಾ, ಬೆನ್ನು ತಟ್ಟಿ, ನಾಲ್ಕು ಹೊಗಳಿಕೆಯ ಮಾತನಾಡುವ ಬದಲು ಪರಿಸರ ಜಾಗೃತಿಯನ್ನು ನಮ್ಮಲ್ಲೂ ಬೆಳೆಸಿಕೊಂಡು ಸಹಭಾಗಿಗಳಾಗಿ ಇನ್ನಷ್ಟು ಜಲಮೂಲಗಳನ್ನು ಉಳಿಸೋಣ, ಮರಗಿಡಗಳನ್ನು ನೆಟ್ಟು ಸಂರಕ್ಷಿಸೋಣ. ದಿನಕ್ಕೆ ಜವಾಬ್ದಾರಿಯುತರಾಗಿ ಕನಿಷ್ಟ 10 ಗಿಡವನ್ನಾದರೂ ಬೆಳೆಸಿ ನೀರು ಹಾಕೋಣ. ಬಿಡುವು ಮಾಡಿಕೊಂಡು ಹೋಗಿ ವೀಕ್ಷಿಸಿ ನಿಮ್ಮ ಮಕ್ಕಳಿಗೂ ಇದು ಪ್ರೇರಣೆಯಾಗಲಿ. ಮುಂದಿನ ಯೋಚನೆ ಯೋಜನೆಗಳಿಗೆ ಭಾಗಿಯಾಗಲು ಸಂಪರ್ಕಿಸಿ ಬಾಲಕೃಷ್ಣ ನಾಯ್ಡು (94482-56122).

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

Tags: K S EshwarappaKannada News WebsiteLakeLatest News KannadaLocal NewsMalnad NewsPushkaraniSahana ChethanShimogaShivamoggaಕೆರೆಜಿಲ್ಲಾ ಪಂಚಾಯತ್ಜೀವನಾಡಿಪಶ್ಚಿಮ ಘಟ್ಟಪುಷ್ಕರಣಿಮಲೆನಾಡು ಸುದ್ಧಿಶಿವಮೊಗ್ಗಶಿವಮೊಗ್ಗ ನ್ಯೂಸ್
Previous Post

30 ಲಕ್ಷ ರೈತರಿಗೆ 20810 ಕೋಟಿ ರೂ. ಬೆಳೆ ಸಾಲ; ಸಚಿವ ಎಸ್.ಟಿ.ಸೋಮಶೇಖರ್ ಘೋಷಣೆ

Next Post

ಕೋವಿಡ್‌ ನಿಯಂತ್ರಣಕ್ಕೆ ವಿಮಾನದ ಮೂಲಕ ಸೋಂಕು ಸಿಂಪಡಣೆಯ ಪ್ರಾಯೋಗಿಕ ಕಾರ್ಯಾಚರಣೆಗೆ ಚಾಲನೆ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಕೋವಿಡ್‌ ನಿಯಂತ್ರಣಕ್ಕೆ ವಿಮಾನದ ಮೂಲಕ ಸೋಂಕು ಸಿಂಪಡಣೆಯ ಪ್ರಾಯೋಗಿಕ ಕಾರ್ಯಾಚರಣೆಗೆ ಚಾಲನೆ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಶಿವಮೊಗ್ಗ | ವಿದ್ಯುತ್ ಟ್ರಾನ್ಸ್ಫಾಮರ್ ಮೇಲೆ ಉರುಳಿದ ಬೃಹತ್ ಮರ | ತಪ್ಪಿದ ಅನಾಹುತ

July 27, 2025

ಭದ್ರಾವತಿ | ರೈಲ್ವೆ ಹಳಿ ಮೇಲೆ ಬಿದ್ದ ಮರ | ತಡವಾಗಿ ಚಲಿಸಿದ ಯಶವಂತಪುರ – ಶಿವಮೊಗ್ಗ ರೈಲು

July 27, 2025

ಪುಷ್ಯ ಮಳೆ ಅಬ್ಬರ | ಹುಲಿಕಲ್ ಘಾಟಿಯಲ್ಲಿ ಗುಡ್ಡ ಕುಸಿತ | ಸಂಚಾರ ಸ್ಥಗಿತ

July 27, 2025

ಡ್ಯಾಂನಿಂದ ಭದ್ರಾ ನದಿಗೆ ನೀರು | ಭದ್ರಾವತಿಯಲ್ಲಿ ಸೇತುವೆ ಮಟ್ಟಕ್ಕೆ ಹರಿವು | ಸಂಚಾರ ಬಂದ್

July 27, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಶಿವಮೊಗ್ಗ | ವಿದ್ಯುತ್ ಟ್ರಾನ್ಸ್ಫಾಮರ್ ಮೇಲೆ ಉರುಳಿದ ಬೃಹತ್ ಮರ | ತಪ್ಪಿದ ಅನಾಹುತ

July 27, 2025

ಭದ್ರಾವತಿ | ರೈಲ್ವೆ ಹಳಿ ಮೇಲೆ ಬಿದ್ದ ಮರ | ತಡವಾಗಿ ಚಲಿಸಿದ ಯಶವಂತಪುರ – ಶಿವಮೊಗ್ಗ ರೈಲು

July 27, 2025

ಪುಷ್ಯ ಮಳೆ ಅಬ್ಬರ | ಹುಲಿಕಲ್ ಘಾಟಿಯಲ್ಲಿ ಗುಡ್ಡ ಕುಸಿತ | ಸಂಚಾರ ಸ್ಥಗಿತ

July 27, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!