ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನೈರುತ್ಯ ಪದವೀಧರರ ಕ್ಷೇತ್ರದಿಂದ #Southwestern Graduate Constituency ಸ್ವತಂತ್ರವಾಗಿ ಸ್ಪರ್ಧಿಸಿರುವ ನನ್ನನ್ನು ಗೆಲ್ಲಿಸಿ ಎಂದು ಅಭ್ಯರ್ಥಿ ಷಹರಾಜ್ ಮುಜಾಹಿದ್ ಸಿದ್ದೀಕಿ ಮನವಿ ಮಾಡಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕ್ಷೇತ್ರದಲ್ಲಿ ಪ್ರಚಾರ ಮಾಡಿ ಬಂದಿದ್ದೇನೆ. ಉತ್ತಮ ಬೆಂಬಲವಿದೆ. ನನ್ನ ಆಯ್ಕೆಯಾದರೆ ಒಂದಿಷ್ಟು ಬದಲಾವಣೆಗಳನ್ನು ತರುತ್ತೇನೆ. ಪದವೀಧರರ ಸಮಸ್ಯೆಗಳನ್ನು ಬಗೆಹರಿಸುತ್ತೇನೆ ಎಂದರು.
ಈ ಚುನಾವಣೆಯು ದಿಕ್ಕುತಪ್ಪುತ್ತಿದೆ. ಹಣ ಆಮೀಷಗಳನ್ನು ಒಡ್ಡಲಾಗುತ್ತಿದೆ. ಪಾರ್ಟಿಗಳನ್ನು ಮಾಡಲಾಗುತ್ತಿದೆ. ಪದವೀಧರರು ಜಾಣರಾಗಿದ್ದಾರೆ. ಹಣದ ಆಮೀಷಕ್ಕೆ ಯಾರು ಬಲಿಯಾಗಬಾರದು. ಉತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ನನ್ನಕ್ರಮ ಸಂಖ್ಯೆ 10 ಆಗಿದ್ದು, ಪ್ರಥಮ ಪ್ರಾಶಸ್ತ್ಯದ ಮತ ನೀಡಿ ಗೆಲ್ಲಿಸಬೇಕು ಎಂದರು.
Also read: ಸಾಗರ | ವಾಣಿಜ್ಯ ತೆರಿಗೆ ಕಚೇರಿ ಮುಂದೆ ರೈತರಿಂದ ದಿಢೀರ್ ಪ್ರತಿಭಟನೆ | ಕಾರಣವೇನು?
ಗೋಷ್ಠಿಯಲ್ಲಿ ಪ್ರಮುಖರಾದ ಜಹಂಗೀರ್ ಆಲಂ, ಶಬ್ಬೀರ್ ಅಹಮ್ಮದ್, ರಹೀಂ ಹನೀಫ್, ವಿಜಯ್ ಟಿ, ಅಬ್ದುಲ್ ಕರೀಂ, ಪ್ರವೀಣ್ ಎಸ್.ಆರ್. ಮುಂತಾದವರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post