ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸಾವರ್ಕರ್ ಫ್ಲೆಕ್ಸ್ ಹರಿದು ಹಾಕಿ ಗಲಭೆ ಸೃಷ್ಟಿಸಿದ ಪಿಎಫ್ಐ ಸಂಘಟನೆಯನ್ನು ನಿಷೇಧಿಸಲಾಗಿದೆ. ಇನ್ನೊಮ್ಮೆ ಫ್ಲೆಕ್ಸ್ ಮುಟ್ಟಿದರೆ ಏನಾಗುತ್ತದೆ ಎನ್ನುವ ಎಚ್ಚರಿಕೆಯೂ ಈ ನಿಷೇಧದ ಹಿಂದೆ ಅಡಗಿದೆ ಎಂದು ಶಾಸಕ ಈಶ್ವರಪ್ಪ MLA Eshwarappa ಗುಡುಗಿದರು.
ಶಿವಮೊಗ್ಗದ ಸೈನ್ಸ್ ಮೈದಾನದಲ್ಲಿ ಶ್ರೀಗಂಧ ಹಾಗೂ ಸಾಮಗಾನ ಸಂಸ್ಥೆಯ ವತಿಯಿಂದ ನಡೆದ ವೀರ ಸಾವರ್ಕರ್ ಮೊಮ್ಮಗ ಸಾತ್ಯಕಿ ಸಾವರ್ಕರ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸ್ವಾತಂತ್ರ್ಯ ಪೂರ್ವದಲ್ಲಿ ಹಾಗೂ ಸ್ವಾತಂತ್ರ್ಯ ಬಂದ ನಂತರದ ದಿನಗಳಲ್ಲಿ ಸಾವರ್ಕರ್ ಪಟ್ಟ ಕಷ್ಷ ಒಂದು ಕಡೆ ಆಗಿದೆ. ಸ್ವಾತಂತ್ಯ್ಯ ಬಂದ ನಂತರ ಕಿಡಿಗೇಡಿ ಸಂಘಟನೆಗಳಿಂದ ಅವರ ಭಾವ ಚಿತ್ರ ಹರಿಯಲು ಕಾರಣವಾಗಿತ್ತು. ಹೀಗೆ ಮಾಡಿದ ಸಂಘಟನೆ ಇಂದು ನಿಷೇಧಿಸಲಾಗಿದೆ ಎಂದರು.
ಸಾವರ್ಕರ್ ಮೊಮ್ಮಗ ಸಾತ್ಯಕಿ ಸಾವರ್ಕರ್ ಮಾತನಾಡಿ, ಸಾವರ್ಕರ್ ಫ್ಲೆಕ್ಸ್ ಹರಿದಿರುವ ಘಟನೆ ನಡೆದಿದ್ದು ಒಳ್ಳೆಯದಲ್ಲ. ಸಾವರ್ಕರ್ ಫ್ಲೆಕ್ಸ್ ಹರಿಯುವ ಮೂಲಕ ಹಚ್ಚಿರುವ ಹಿಂದುತ್ವದ ಕಿಚ್ಚನ್ನು ಯಾರೂ ನಾಶ ಮಾಡಲು ಸಾಧ್ಯವಿಲ್ಲ ಸ್ವಾತಂತ್ರ್ಯೋತ್ಸವದ ಅಂಗವಾಗಿ ನಡೆದ ಘಟನೆ ಶಿವಮೊಗ್ಗದಲ್ಲಿ ಹುಟ್ಟಿದರೂ ಅದು ಇಡೀ ಕರ್ನಾಟಕ ಮತ್ತು ದೇಶವನ್ನ ವ್ಯಾಪಿಸಿದೆ. ವೀರ ಸಾವರ್ಕರ್ ವಿಚಾರಧಾರೆ ಸಾಯಿಸುವವರೂ ಇನ್ನೂ ಹುಟ್ಟಿಲ್ಲ. ಮುಂದೆಯೂ ಹುಟ್ಟಲ್ಲ ಎಂದರು.
ಶಿವಮೊಗ್ಗ ದಲ್ಲಿ ಆಗಸ್ಟ್ 14 ರಂದು ವೀರ ಸಾವರ್ಕರ್ ಅವರಿಗೆ ದೊಡ್ಡ ಅಪಮಾನವಾಯಿತು. ಅವರುಗಳಿಗೆ ಶಿವಮೊಗ್ಗ ದೊಡ್ಡ ಶಕ್ತಿ ಕೇಂದ್ರ ಎಂದು ಗೊತ್ತಿರಲಿಲ್ಲ. ಈಗ ವೀರ ಸಾವರ್ಕರ್ ವಿಚಾರಧಾರೆ ಜ್ಯೋತಿ ಕರ್ನಾಟಕದಲ್ಲಿ ಪ್ರಜ್ವಲಿಸುತ್ತಿದೆ. ಇದು ಇನ್ನೂ ಪ್ರಜ್ವಲಿಸಲಿದೆ ಎಂದರು.
800 ವರ್ಷಗಳ ಹಿಂದೆ ದೇಶದಲ್ಲಿ ಗಣೇಶೋತ್ಸವ ಆರಂಭ ಆಯಿತು. 1944ರಲ್ಲಿ ಶಿವಮೊಗ್ಗ ದಲ್ಲಿ ವೀರ ಸಾವರ್ಕರ್ ಗಣೇಶ ಉತ್ಸವ ಆರಂಭಿಸಿದರು. ಹಿಂದೂ ಸಂಘಟನೆ ಇದರ ಪ್ರಮುಖ ಉದ್ದೇಶವಾಗಿತ್ತು. ಈಗಲೂ ನಮ್ಮ ನಡುವೆ ರಾಷ್ಟ್ರವಿರೋಧಿ ಶಕ್ತಿಗಳು ನಾನಾ ರೂಪದಲ್ಲಿ ಇದ್ದಾರೆ. ಅದನ್ನು ಹಿಮ್ಮೆಟ್ಟಿಸಲು ಹಿಂದುತ್ವ ಮಂತ್ರ ಜಪಿಸಬೇಕು ಎಂದು ಕರೆ ನೀಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post