ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವಿಪ್ರನೌಕರರ ಸೇವಾಭಿವೃದ್ಧಿ ಸಂಘದಿಂದ ಅ.11ರಂದು ಬೆಳಿಗ್ಗೆ 9.15ರಿಂದ ಮಧ್ಯಾಹ್ನದವರೆಗೆ ಕುವೆಂಪು ರಂಗಮಂದಿರದಲ್ಲಿ ಪ್ರತಿಭಾ ಪುರಸ್ಕಾರ, ವಿದ್ಯಾನಿಧಿ, ಸುವರ್ಣ ದಾಂಪತ್ಯ ಸನ್ಮಾನ, ಸಂಘದ ಹಿರಿಯ ನಿರ್ದೇಶಕರುಗಳಿಗೆ ಅಭಿನಂದನಾ ಸಮಾರಂಭವನ್ನು ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಎಚ್.ಕೆ.ಕೇಶವಮೂರ್ತಿ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲಾ ವಿಪ್ರ ನೌಕರರ ಕ್ಷೇಮಾಭಿವೃದ್ಧಿ ಸಂಘ 19 ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದು, 4 ಸಮಾವೇಶಗಳು ಸೇರಿದಂತೆ ಸಮಾಜದ ಅಭಿವೃದ್ಧಿಗೆ ಶ್ರಮಿಸುತ್ತಿದೆ. ವಿದ್ಯಾರ್ಥಿಗಳಿಗೆ ನೆರವು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಸಹಕಾರ, ರಾಜಕೀಯ ಸಾಹಿತ್ಯದಲ್ಲಿ ಹೆಸರು ಮಾಡಿದವರಿಗೆ ಸನ್ಮಾನ, ವಧುವರರ ವೈವಾಹಿಕದ ಬಗ್ಗೆ ಮಾಹಿತಿ ಹೀಗೆ ಹಲವು ಸಮಾಜಮುಖಿ ಕೆಲಸಗಳನ್ನು ಮಾಡುತ್ತ ಬಂದಿದೆ ಎಂದರು.
ಪ್ರತಿಭಾ ಪುರಸ್ಕಾರ ಮತ್ತು ಅಭಿನಂದನ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಸಗೋಡು ಜಯಸಿಂಹ ಉದ್ಘಾಟಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧುಬಂಗಾರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಎಸ್.ಎನ್.ಚನ್ನಬಸಪ್ಪ, ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ಮ.ಸ.ನಂಜುಂಡಸ್ವಾಮಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿರುವರು ಎಂದರು.
Also read: ಎಸ್. ನಿಜಲಿಂಗಪ್ಪ ದೇಶ ಕಂಡ ಪ್ರಾಮಾಣಿಕ ರಾಜಕಾರಣಿ: ಮುಖ್ಯಮಂತ್ರಿ ಸಿದ್ದರಾಮಯ್ಯ
ಕಾರ್ಯಕ್ರಮದಲ್ಲಿ ಕಗ್ಗ ಖ್ಯಾತಿಯ ನಿವೃತ್ತ ಉಪನ್ಯಾಸಕ ಜಿ.ನಟೇಶ್ ದಿಕ್ಸೂಚಿ ನುಡಿಗಳನ್ನಾಡುವರು, ಕಾರ್ಯಕ್ರಮದಲ್ಲಿ 50 ವರ್ಷ ದಾಂಪತ್ಯ ಬದುಕನ್ನು ಪೂರೈಸಿದ ಸಾವಿತ್ರಿ ವಿ.ಎಸ್. ಚಂದ್ರಶೇಖರ್ಭಟ್, ಹೇಮ ನಳಿನಿ ಜಿ.ವಿ.ಕೃಷ್ಣಮೂರ್ತಿ, ವಸಂತಲಕ್ಷ್ಮೀ ಎಸ್.ಆರ್.ಗೋಪಾಲ್, ಪದ್ಮಾ ಸಿ.ಎನ್.ಕೇಶವಮೂರ್ತಿ, ಗಾಯಿತ್ರಿ ವೆಂಕಟರಾಜು, ಇಂದಿರಾ ಎಂ.ಎನ್. ಸುಂದರರಾಜು, ಸುಲೋಚನಾ ಶ್ರೀನಿವಾಸಮೂರ್ತಿ ಇವರುಗಳನ್ನು ಸನ್ಮಾನಿಸಲಾಗುವುದು ಎಂದರು.
ಹಾಗೆಯೇ ಹಿರಿಯ ನಿರ್ದೇಶಕರುಗಳಾದ ಬಿ.ಎಸ್.ಪದ್ಮಾ, ಜಿ.ಎಸ್.ಅನಂತ, ಶಾಂತ, ರವೀಂದ್ರನಾಥ್ ಬಿ.ಕೆ., ಎನ್.ಆರ್.ಮಂಜುನಾಥ್, ಹೆಚ್.ಮಾರುತಿ ಅವರನ್ನು ಮತ್ತು ವಿಶೇಷ ಸಾಧನೆಗಾಗಿ ಅಂಬುಜಾಕ್ಷಿ, ಡಾ.ಎ.ಕೆ.ಶ್ರೀನಿವಾಸಮೂರ್ತಿ, ರವಿಕುಮಾರ್ ಎ.ವಿ., ಅವರನ್ನು ಅಭಿನಂದಿಸಲಾಗುವುದು ಎಂದರು.
ಪತ್ರಿಕಾಗೋಷ್ಟಿಯಲ್ಲಿ ಸಂಘದ ಗೌರವಾಧ್ಯಕ್ಷ ಆರ್. ಅಚ್ಯುತ್ರಾವ್, ಖಜಾಂಚಿ ಯು.ಎಸ್.ಕೇಶವಮೂರ್ತಿ, ವಸುಂದರ ವಿ., ಎಸ್.ನಾಗೇಶ್ ಮುಂತಾದವರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















