ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ನಗರದಲ್ಲಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣಕ್ಕೆ ಶಿವಪ್ಪನಾಯಕ ನವರ ಹೆಸರಿಡಬೇಕೆಂದು ರಾಜ್ಯ ನಾಗರಿಕ ರಕ್ಷಣಾ ಸಮಿತಿ ವತಿಯಿಂದ ಇಂದು ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಯಿತು.
ಕರ್ನಾಟಕದ ಇತಿಹಾಸದಲ್ಲಿ ವಿಜಯನಗರ ಅರಸರ ಸಾಮಂತ ರಾಜರಾಗಿದ್ದ ಇಕ್ಕೇರಿ ಅರಸರ ರಾಜಧಾನಿ ಶಿವಮೊಗ್ಗದ ಕೆಳದಿ ಯಾಗಿತ್ತು. ಈ ಕೆಳದಿ ಅರಸರಲ್ಲಿ ಶಿವಪ್ಪ ನಾಯಕ ಪ್ರಮುಖರಾಗಿದ್ದು 1638 ರಲ್ಲಿ ಪಟ್ಟಾಭಿಷೇಕವನ್ನು ಸ್ವೀಕರಿಸಿದ ಅವರು ಪೋರ್ಚುಗೀಸರು ಹಾಗೂ ಬ್ರಿಟೀಷರ ಮೇಲು ಗೆಲುವನ್ನು ಸಾಧಿಸಿದ್ದರು ಮತ್ತು ಶಿವಮೊಗ್ಗ ದಕ್ಷಿಣ ಕನ್ನಡ ಉತ್ತರ ಕನ್ನಡ ಚಿಕ್ಕಮಗಳೂರು ಕೇರಳದ ಉತ್ತರ ಭಾಗಗಳನ್ನು ಇವರ ಆಡಳಿತ ವಿಸ್ತಾರವಾಗಿಇದ್ದಿದ್ದನ್ನು ನೋಡಬಹುದು ಮತ್ತು ಶಿವಪ್ಪ ನಾಯ್ಕ ಅವರು ಕಲೆ ಸಾಹಿತ್ಯ ಕೃಷಿಗೆ ಪ್ರೋತ್ಸಾಹವನ್ನು ನೀಡಿದ್ದರು. ಮತ್ತು ಶಿವಮೊಗ್ಗದ ಕೆಲ ಭಾಗಗಳಲ್ಲಿ ದೇವಾಲಯಗಳನ್ನು ನಿರ್ಮಿಸಿದ್ದಾರೆ.
ಶಿವಪ್ಪನಾಯಕ ಅವರು ಉತ್ತಮ ಆಡಳಿತಗಾರರು ಆಗಿದ್ದು ಶಿಸ್ತು ಎಂಬ ಕಂದಾಯ ಪದ್ಧತಿಯನ್ನು ಸಹ ಜಾರಿಗೆ ತಂದಿದ್ದರು. ಇಂತಹ ಉತ್ತಮ ಅರಸನಾಗಿದ್ದ ಶಿವಪ್ಪನಾಯಕ ನವರು ಕರ್ನಾಟಕದ ಇತಿಹಾಸದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಾರೆ. ಹಾಗಾಗಿ ಶಿವಮೊಗ್ಗದಲ್ಲಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣಕ್ಕೆ ಶಿವಪ್ಪ ನಾಯ್ಕ ವಿಮಾನ ನಿಲ್ದಾಣ ಎಂದು ಹೆಸರಿಡಬೇಕೆಂದು ರಾಜ್ಯ ನಾಗರಿಕ ರಕ್ಷಣಾ ಸಮಿತಿ ವತಿಯಿಂದ ಇಂದು ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ಸಮಿತಿಯ ರಾಜ್ಯ ಮಹಿಳಾ ಅಧ್ಯಕ್ಷೆ ಉಷಾ ಉತ್ತಪ್ಪ ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್ ರಾಘವೇಂದ್ರ ಖಜಾಂಚಿ ಶಿವಮೊಗ್ಗ ವಿನೋದ್, ರಾಜ್ಯ ಸಂಘಟನಾ ಕಾರ್ಯದರ್ಶಿ ಗಳಾದ ಮಲ್ಲೇಶಪ್ಪ, ರುದ್ರೇಶ್, ಶಿವಮೊಗ್ಗ ನಗರ ಘಟಕದ ಉಪಾಧ್ಯಕ್ಷರಾದ ವೆಂಕಟೇಶ್ ಮತ್ತು ಪದಾಧಿಕಾರಿಗಳಾದ ಚಂದನ್, ಶ್ರೀಧರ್, ಅರುಣ್, ಹರ್ಷಿತ್, ಅಜಿತ್ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post