ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಹುಟ್ಟು ಹಬ್ಬ ಆಚರಣೆಯಿಂದ ವಿಶೇಷ ದಾಖಲೆ ಸೃಷ್ಟಿಸುತ್ತಿರುವವರಿಗೆ ಗೌರವಿಸುವುದರಿಂದ ಇತರರಿಗೆ ಪ್ರೇರಣೆ ದೊರಕುತ್ತದೆ ಎಂದು ತರುಣೋದಯ ಘಟಕದ ಕಾರ್ಯಾಧ್ಯಕ್ಷ ಎಸ್ ಎಸ್. ವಾಗೇಶ್ ನುಡಿದರು.
ತರುಣೋದಯ ಘಟಕದ ವತಿಯಿಂದ 67ನೇ ಜನ್ಮದಿನ ಆಚರಿಸಿಕೊಂಡ ಶೇಷಾಚಲ ರವರಿಗೆ ಗೌರವಿಸಿ ಮಾತನಾಡಿದ ಅವರು, ಈಗಾಗಲೇ ವರ್ಷವಿಡೀ ಸಂಸ್ಕೃತ ಪ್ರಚಾರದ ಕಾರ್ಯ ಕೈ ಗೊಂಡಿರುವ ಇವರು ಈಗ ನೂರು ಜನರನ್ನು ಹಿಮಾಲಯ ಚಾರಣಕ್ಕೆ ಕಳಿಸುವುದಾಗಿ ತಿಳಿಸಿದ್ದಾರೆ. ಇದರಿಂದ ಚಾರಣಿಗರಿಗೆ ಹಿಮಾಲಯದ ಅನುಭವ ಹೊಂದಲು ಸಾದ್ಯ. ಅವರ ಈ ಕಾರ್ಯಕ್ಕೆ ಶುಭವಾಗಲಿ
ಎಂದು ಹಾರೈಸಿದರು.
ಛೇಂಬರ್ ಆಫ್ ಕಾಮಸ್೯ ಕಾರ್ಯದರ್ಶಿ ಜಿ.ವಿಜಯಕುಮಾರ್ ಮಾತನಾಡಿ, ಶಿವಮೊಗ್ಗ ನಗರ ಮಟ್ಟದ ಎಲ್ಲಾ ಶಾಲೆಗಳಲ್ಲೂ ಸಂಸ್ಕೃತ ಕಲಿಸುವ ಆಸಕ್ತಿ ಇರುವ ಶೇಷಾಚಲ ಅವರ ಕಾರ್ಯದಿಂದ ಮಕ್ಕಳಿಗೆ ಹಲವು ಗೃಹಿಣಿಯರಿಗೆ ಉದ್ಯೋಗ ದೊರೆತಂತಾಗುತ್ತದೆ. ನಮ್ಮ ಶಾಸಕರ ಸಹಕಾರದಿಂದ ಶುಭಮಂಗಳ ಸಬಾಭವನ ಆವರಣದಲ್ಲಿ ಐದು ಸಾವಿರ ಮಕ್ಕಳ ಸಮಾವೇಶ ನಡೆಸಿ ಯಶಸ್ವಿಗೆ ಕಾರಣರಾದ ಶೇಷಾಚಲ ರವರು ಇತರರಿಗೆ ಮಾದರಿಯಾಗಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ವಿ.ಜಿ. ಲಕ್ಷ್ಮೀನಾರಾಯಣ್, ಡಾ.ಪ್ರಕೃತಿ ಮಂಚಾಲೆ, ಶ್ಯಾಮ್ ಸುಂದರ್ , ಮುಂತಾದವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post