ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಾಘ ಮಾಸದ ಬಹುಳ ಚತುರ್ದಶಿಯಂದು ಆಚರಿಸುವ ಮಹಾಶಿವರಾತ್ರಿ #MahaShivarathri ಹಿಂದೂಗಳ #Hindu ಪ್ರಮುಖ ಹಬ್ಬಗಳಲ್ಲೊಂದು. ನಗರದೆಲ್ಲೆಡೆ ಮಹಾಶಿವರಾತ್ರಿಯ ಸಂಭ್ರಮ ಮನೆ ಮಾಡಿದ್ದು, ಮುಂಜಾನೆಯಿಂದಲೇ ಜನರು ದೇವಸ್ಥಾನದೆಡೆಗೆ ಹೆಜ್ಜೆ ಹಾಕುತ್ತಿದ್ದುದು ಸಾಮಾನ್ಯವಾಗಿತ್ತು.
ವಿನೋಬನಗರ ಶಿವಾಲಯ, ರವೀಂದ್ರನಗರ ಪಾರ್ಕ್ ನಲ್ಲಿರುವ ಶಿವ, ಹೊಳೆ ಹೊನ್ನೂರು ರಸ್ತೆ ಅರ್ಕೇಶ್ವರ ದೇವಸ್ಥಾನ , ಕೋಟೆ ಬೀಮೇಶ್ವರ, ವೀರಶೈವ ಕಲ್ಯಾಣ ಮಂದಿರದ ಆವರಣದಲ್ಲಿರುವ ಕಾಶಿ ವಿಶ್ವನಾಥ ವಿಶೇಷ ಧಾರ್ಮಿಕ ಕಾರ್ಯಕ್ರಮ ಜರುಗಿತು.

Also read: ಬಿಎಸ್ವೈ ಹುಟ್ಟುಹಬ್ಬ ಹಿನ್ನೆಲೆ: ಫೆ.27ರಂದು ಹೊನಲು ಬೆಳಕಿನ ಥ್ರೋಬಾಲ್ ಪಂದ್ಯಾವಳಿ
ಇತಿಹಾಸ ಪ್ರಸಿದ್ಧ ಕೋಟೆ ಬೀಮೇಶ್ವರ ದೇವಾಲಯದಲ್ಲಿ ನಸುಕಿನಿಂದಲೇ ವಿಶೇಷ ಪೂಜಾ ಕೈಕಂರ್ಯ ನಡೆಸಲಾಯಿತು. ವೀರಶೈವ ಕಲ್ಯಾಣ ಮಂದಿರದ ಆವರಣದಲ್ಲಿರುವ ಕಾಶಿ ವಿಶ್ವನಾಥನಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ದೇವರ ದರ್ಶನಕ್ಕಾಗಿ ಭಕ್ತರು ಸರತಿ ಸಾಲಿನಲ್ಲಿ ನಿಂತಿರುವುದು ಕಂಡುಬಂದಿತು.

ಶಿವ ಭಕ್ತರ ಪಾಲಿಗೆ ಮಂಗಳಕರ ರಾತ್ರಿ. ಹಗಲು ಉಪವಾಸವಿದ್ದು, ರಾತ್ರಿ ವೇಳೆ ಜಾಗರಣೆ ಮಾಡಿ, ಶಿವಧ್ಯಾನ ಮಾಡಿ ಶಿವನ ಕೃಪೆಗೆ ಪಾತ್ರವಾಗುವ ಶುಭ ದಿನ. ಈ ದಿನ ಶಿವನನ್ನು ಭಕ್ತಿಯಿಂದ ಪೂಜಿಸಿದರೆ, ತಾವು ಮಾಡಿದ ಪಾಪಗಳೆಲ್ಲವೂ ಪರಿಹಾರವಾಗಿ, ಮೋಕ್ಷ ಪ್ರಾಪ್ತವಾಗುತ್ತದೆ ಎಂಬುದು ಭಕ್ತರ ಬಲವಾದ ನಂಬಿಕೆ.
ಶಿವ ದೇವಾಲಯಗಳ ವಿಶೇಷ ಅಲಂಕಾರದ ಚಿತ್ರಗಳು


ಕೋಟೆ ಬೀಮೇಶ್ವರ
ವೀರಶೈವ ಕಲ್ಯಾಣ ಮಂದಿರದ ಆವರಣದಲ್ಲಿರುವ ಕಾಶಿ ವಿಶ್ವನಾಥಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post