ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಪ್ರತಿ ವರ್ಷ ಸಂಕ್ರಮಣ ಕಾಲ ಬಂತೆಂದರೆ ಸಾಕು ಸಡಗರ ಸಂಭ್ರಮ ಮನೆ ಮಾಡುತ್ತದೆ. ಸಂಕ್ರಮಣ ಕಾಲದಲ್ಲಿ ಅನೇಕ ಧಾರ್ಮಿಕ ಕಾರ್ಯಕ್ರಮಗಳು, ಪೂಜಾವಿಧಿ ವಿಧಾನಗಳು ನಡೆಯುತ್ತಲೇ ಇರುತ್ತವೆ. ಇನ್ನು ಸಂಕ್ರಮಣದ ಕಾಲದಲ್ಲಿ ಅದೊಂದು ಘೋಷಣೆ, ಅದೊಂದು ನಾಮಸ್ಮರಣೆ ಎಲ್ಲಿ ಹೋದರೂ ಸಾಮಾನ್ಯವಾಗಿ ಕೇಳಿ ಬರುತ್ತದೆ. ಅದುವೇ ಸ್ವಾಮಿಯೇ ಶರಣಂ ಅಯ್ಯಪ್ಪ ಎಂಬ ನಾಮಸ್ಮರಣೆ.
ಹಾಗೆಯೇ ನಗರದ ಗಾಡಿಕೊಪ್ಪ ತಾಂಡದಲ್ಲಿ ಸೇವಾಲಾಲ್ ದೇವಸ್ಥಾನದ ಬಳಿ ಅಯ್ಯಪ್ಪ ಮಾಲಾಧಾರಿಗಳು #Ayyappa Maladhari ಮಹಾಪೂಜೆಯನ್ನು ನಡೆಸಿ ಇರುಮುಡಿ,ಮಹಾಪಡಿ ಪೂಜೆ ಮಹಾಪ್ರಸಾದ ಕಾರ್ಯಕ್ರಮ ಭಕ್ತಿ ಭಾವದಿಂದ ನಡೆಸಿದರು.
Also read: ಪೋಷಕರು ಮಕ್ಕಳ ಇಷ್ಟದ ಓದಿಗೆ ಪ್ರೇರಣೆ ನೀಡಿ: ಎನ್ಇಎಸ್ ಕಾರ್ಯದರ್ಶಿ ನಾಗರಾಜ ಅಭಿಪ್ರಾಯ
85 ಅಯ್ಯಪ್ಪ ಮಾಲಾಧಾರಿಗಳು ಕಠಿಣ ವ್ರತ ಆಚರಿಸಿ ಬುಧವಾರ ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನಕ್ಕಾಗಿ ಶಬರಿಮಲೆಗೆ ತೆರಳಿದರು. ಊರಿನ ಗ್ರಾಮಸ್ತರೆಲ್ಲರೂ ಸೇರಿ ದೇವಸ್ಥಾನದಿಂದ ಅಯ್ಯಪ್ಪ ಮಾಲಾಧಾರಿಗಳಿಗೆ ಬೀಳ್ಕೊಟ್ಟರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post