ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಿಸ್ವಾರ್ಥ ಸೇವೆ ಮಾಡುವವರಿಗೆ ಸ್ಪೂರ್ತಿಯ ಸೆಲೆ ನಾವಾಗಬೇಕು ಎಂದು ಮಾಜಿ ಉಪ ಮುಖ್ಯಮಂತ್ರಿ ಹಾಗೂ ಸಮಾಜ ಸೇವಕ ಕೆ.ಎಸ್. ಈಶ್ವರಪ್ಪ #K S Eshwarappa ಹೇಳಿದರು.
ಅವರು ಇಂದು ಸಾಹಸ ಮತ್ತು ಸಂಸ್ಕøತಿ ಅಕಾಡೆಮಿ, ಆರೋಗ್ಯ ಭಾರತಿ, ತೀರ್ಥಹಳ್ಳಿ ಎಂಐಒ ಆಸ್ಪತ್ರೆ, ಮಥುರಾ ರಜತೋತ್ಸವ ಸಮಿತಿ ಇವರ ಸಂಯುಕ್ತಾಶ್ರಯದಲ್ಲಿ ಇಂದು ಬೆಳಗ್ಗೆ ಮಥುರಾ ಪ್ಯಾರಾಡೈಸ್ ಸಭಾಂಗಣದಲ್ಲಿ ಆಯೋಜಿಸಿದ್ದ ಕ್ಯಾನ್ಸರ್ ಕುರಿತ ಜನಜಾಗೃತಿ ಸರಣಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಸಮಾಜ ಸೇವಕರನ್ನು ಸನ್ಮಾನಿಸಿ ಮಾತನಾಡಿದರು.
ಸನ್ಮಾನಗಳು ಸೇವೆ ಮಾಡುವವರಿಗೆ ಪ್ರೇರಣೆ ನೀಡುತ್ತವೆ. ಸೇವೆಯೇ ಮನುಷ್ಯನ ಉದಾತ್ತವಾಗಿದೆ. ಮನುಕುಲದ ಉದ್ಧಾರಕ್ಕಾಗಿ ಸೇವೆ ಎಂಬುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ತೀರ್ಥಹಳ್ಳಿಯ ಎಂಐಒ ಕ್ಯಾನ್ಸರ್ ಆಸ್ಪತ್ರೆ, #Cancer Hospital ಶಿವಮೊಗ್ಗದ ಶರಣ್ಯ ಸಂಸ್ಥೆ ಸೇವೆ ಶ್ಲಾಘನೀಯವಾದುದು. ಮತ್ತು ಈ ನಿಟ್ಟಿನಲ್ಲಿ ನಿಸ್ವಾರ್ಥ ಸೇವೆ ಮಾಡುವವರನ್ನು ಇಂದು ಸನ್ಮಾನ ಮಾಡುತ್ತಿರುವುದು ಕೂಡ ದೇವರು ಮೆಚ್ಚುವ ಕೆಲಸವಾಗಿದೆ ಎಂದರು.
Also read: ಯುಗಾದಿ ಹಬ್ಬದ ಪ್ರಯುಕ್ತ ಗುಂಟೂರು-ಹುಬ್ಬಳ್ಳಿ ನಡುವೆ ವಿಶೇಷ ರೈಲು ಸಂಚಾರ
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಆರ್.ಎಸ್.ಎಸ್. ದಕ್ಷಿಣ ಪ್ರಾಂತ ಸಹ ಕಾರ್ಯವಾಹ ಪಟ್ಟಾಭಿರಾಮ್ ಮಾತನಾಡಿ, ಆರ್.ಎಸ್.ಎಸ್. ಕೂಡ ಸೇವಾ ಸಂಸ್ಥೆಯ ಒಂದು ಭಾಗವೇ ಆಗಿದೆ. ಅದರಲ್ಲೂ ವೈದ್ಯಕೀಯ ಸೇವೆಯನ್ನು ಆರ್.ಎಸ್.ಎಸ್.ನ ಹಲವು ವಿಭಾಗಗಳು ಮಾಡುತ್ತಾ ಬಂದಿವೆ. ಇದು ಅತ್ಯಂತ ಸಂತೋಷದ ವಿಷಯವಾಗಿದೆ. ಈ ದೇಶದಲ್ಲಿ ವಿದ್ಯೆ, ಅನ್ನ, ಆರೋಗ್ಯ ಮುಖ್ಯವಾಗಿದೆ. ಇವು ಮೊದಲು ಉಚಿತವಾಗಿ ಸಿಗುತ್ತಿತ್ತು. ಆದರೆ ಇಂದು ಇವಕ್ಕೆ ಹಣ ಕೊಡಬೇಕಾಗಿದೆ. ಆದರೆ ಅದು ತಪ್ಪಲ್ಲ, ಅದರಲ್ಲೂ ಸೇವೆ ಎಂಬುದು ಇರಬೇಕಾಗುತ್ತದೆ ಎಂದರು.
ತೀರ್ಥಹಳ್ಳಿಯ ಎಂಐಒ ಸ್ಪೆಷಾಲಿಟಿ ಕ್ಯಾನ್ಸರ್ ಆಸ್ಪತ್ರೆಯ ತಜ್ಞ ವೈದ್ಯ ಮತ್ತು ಮುಖ್ಯಸ್ಥ ಡಾ. ಸುರೇಶ್ ರಾವ್ ಮಾತನಾಡಿ, ಬಡವರ ಸೇವೆಯನ್ನು ಮಾಡುವವನೇ ನಿಜವಾದ ವೈದ್ಯ. ಸೇವೆಯ ಮನೋಧರ್ಮ ಇಲ್ಲದವರು ವೈದ್ಯರಾಗಬಾರದು ಎಂಬುದು ನಮ್ಮ ಅಭಿಪ್ರಾಯ. ಎಲ್ಲ ಬಡವರ, ಅಶಕ್ತರಿಗೆ ವೈದ್ಯರು ತಮ್ಮ ಹೃದಯನ್ನು ತೆರೆದಿಡಬೇಕು ಎಂದರು.
ಕ್ಯಾನ್ಸರ್ ಇಂದು ಸುನಾಮಿ ರೀತಿಯಲ್ಲಿ ಮಾನವನನ್ನು ಕಾಡುತ್ತಿದೆ. ಪ್ರತಿ ವರ್ಷ 10 ಲಕ್ಷಕ್ಕೂ ಹೆಚ್ಚು ಜನ ಮೃತಪಡುತ್ತಿದ್ದಾರೆ. ಪ್ರತಿ 7 ನಿಮಿಷಕ್ಕೊಬ್ಬರು ಸಾಯುತ್ತಿದ್ದಾರೆ. ಕ್ಯಾನ್ಸರ್ ಕೇವಲ ತಂಬಾಕು ಉತ್ಪನ್ನಗಳಿಂದ ಮಾತ್ರ ಬರುವುದಿಲ್ಲ. ಇದಕ್ಕೆ ಬೇರೆ ಬೇರೆ ರೀತಿಯ ಕಾರಣಗಳೂ ಇವೆ. ಪರಿಸರ, ಆಹಾರ, ಮುಂತಾದವುಗಳು ಇಂದು ಕ್ಯಾನ್ಸರ್ ಬರಲು ಕಾರಣವಾಗುತ್ತಿವೆ. ಭಾರತ ಕ್ಯಾನ್ಸರ್ ನ ಕ್ಯಾಪಿಟಲ್ ಎಂದೇ ಪ್ರಸಿದ್ಧವಾಗುತ್ತಿದೆ. ಕ್ಯಾನ್ಸರ್ ಚಿಕಿತ್ಸೆಗಾಗಿ ಆಸ್ಪತ್ರೆಗಳು ಕೋಟ್ಯಂತರ ರೂ. ಮೌಲ್ಯದ ಯಂತ್ರಗಳನ್ನು ಖರೀದಿಸಬೇಕಾಗುತ್ತದೆ. 10 ಕೋಟಿ ಯಂತ್ರ ಕೊಂಡರೆ ಎರಡೂವರೆ ಕೋಟಿ ಜಿ.ಎಸ್.ಟಿ. ಕಟ್ಟಬೇಕಾಗುತ್ತದೆ. ಸರ್ಕಾರಗಳು ಇಂತಹ ಉಪಕರಣಗಳಿಗೆ ಜಿ.ಎಸ್.ಟಿ. ಕಡಿಮೆ ಮಾಡಿದರೆ ಬಡವರ ಪರ ಸೇವೆ ಮಾಡಲು ಮತ್ತಷ್ಟು ಅನುಕೂಲವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಹೋಟೆಲ್ ಉದ್ಯಮಿ ಎನ್. ಗೋಪಿನಾಥ್, ಶರಣ್ಯ ಸಂಸ್ಥೆಯ ಡಿ.ಎಲ್. ಮಂಜುನಾಥ್, ಎಂಐಒನ ಮುಖ್ಯಸ್ಥ ಡಾ. ಸುರೇಶ್ ರಾವ್ ಅವರನ್ನು ಸನ್ಮಾನಿಸಲಾಯಿತು. ಮತ್ತು ವಿವಿಧ ತಾಲೂಕು ಕೇಂದ್ರಗಳಲ್ಲಿ ನಡೆದ ಕ್ಯಾನ್ಸರ್ ಕುರಿತ ಜನಜಾಗೃತಿ ಸರಣಿ ಕಾರ್ಯಕ್ರಮಕ್ಕೆ ಸಹಕರಿಸಿದವರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಕೆ.ಎಸ್. ಶ್ರೀಧರ್, ಡಾ. ಪಲ್ಲವಿ, ಶಿಬಿರದ ಸಂಚಾಲಕ ಅ.ನಾ. ವಿಜಯೇಂದ್ರರಾವ್, ವಾಗೀಶ್ ಸೇರಿದಂತೆ ಹಲವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post