ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನೈರುತ್ಯ ಶಿಕ್ಷಕರ ಕ್ಷೇತ್ರದಿಂದ #South West Teacher Constituency Election ಸ್ಪರ್ಧಿಸುವುದಾಗಿ ಡಾ. ಅರುಣ್ ಹೊಸಕೊಪ್ಪ #Arun Hosakoppa ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶಿಕ್ಷಕರ ಕ್ಷೇತ್ರದಿಂದ ಶಿಕ್ಷಕರೇ ಸ್ಪರ್ಧಿಸಬೇಕು. ಅದು ನ್ಯಾಯಯುತವಾದದ್ದು ಶಿಕ್ಷಕ ಮತದಾರರು ಶಿಕ್ಷಕರಲ್ಲದವರನ್ನು ಆಯ್ಕೆ ಮಾಡದಿರುವಂತೆ ಮನವಿ ಮಾಡಿದರು.
ನಾನು ಶಿಕ್ಷಕನಾಗಿ ಹಲವು ವರ್ಷಗಳಿಂದ ಕೆಲಸ ಮಾಡುತ್ತ ಬಂದಿದ್ದೇನೆ. ಉಪನ್ಯಾಸಕನಾಗಿಯೂ ಸೇವೆ ಸಲ್ಲಿಸಿದ್ದೇನೆ. ಈ ಹಿಂದೆ 2012 ಮತ್ತು 2018ರಲ್ಲಿ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧೆ ಮಾಡಿ, ಗಮನಾರ್ಹ ಮತಗಳನ್ನು ಪಡೆದುಕೊಂಡಿದ್ದೆ ಎಂದರು.
Also read: ಸಿಬಿಎಸ್ಇ 10 ನೇ ತರಗತಿ ಫಲಿತಾಂಶ ಪ್ರಕಟ: ನ್ಯಾಷನಲ್ ಪಬ್ಲಿಕ್ ಶಾಲೆಗೆ ಶೇ.99.34ರಷ್ಟು ರಿಸಲ್ಟ್
ನಾನು ಶಿಕ್ಷಕನಾಗಿರುವುದರಿಂದ ಸಹಜವಾಗಿಯೇ ಶಿಕ್ಷಕರ ಸಮಸ್ಯೆಗಳು ಏನು ಎಂಬುವುದನ್ನು ಅರಿತುಕೊಂಡಿರುವೆ. ಹಳೇ ಪಿಂಚಣಿ ವ್ಯವಸ್ಥೆ ಜಾರಿಗೆ ತರುವ ಬಗ್ಗೆ ಈಗಾಗಲೇ ಸರ್ಕಾರದ ಮಟ್ಟದಲ್ಲಿ ಮಾತುಕತೆ ನಡೆಯುತ್ತಿದೆ. ಇದೊಂದು ದೊಡ್ಡ ಸಮಸ್ಯೆಯಾಗಿದ್ದು, ನಾನು ಆಯ್ಕೆಯಾದರೆ ಇದಕ್ಕೆ ಮೊದಲ ಆದ್ಯತೆ ನೀಡುತ್ತೇನೆ ಎಂದರು.
ಅನುದಾನಿತ ಶಿಕ್ಷಕರ ಸಮಸ್ಯೆಗಳು ಹೆಚ್ಚಾಗಿವೆ. ಅವರು ನಿವೃತ್ತಿ ಹೊಂದಿದಾಗ ಯಾವುದೇ ಪಿಂಚಣಿಯೂ ಇರುವುದಿಲ್ಲ ಮತ್ತು ಅವರಿಗೆ ಯಾವುದೇ ಹಣವು ಕೂಡ ಬರುವುದಿಲ್ಲ. ಖಾಲಿ ಕೈಯಲ್ಲಿ ಮನೆಗೆ ಹೋಗಬೇಕಾಗುತ್ತದೆ. ಹಾಗಾಗಿ ಅವರ ಸಮಸ್ಯೆಗಳನ್ನು ಬಗೆಹರಿಸಬೇಕಾಗಿದೆ ಎಂದರು.
ಅನೇಕ ಶಾಲೆಗಳಲ್ಲಿ ಚಿಕ್ಕಪುಟ್ಟ ಸಮಸ್ಯೆಗಳು ಇವೆ. ತಾಂತ್ರಿಕ ಸಮಸ್ಯೆಗಳು ಸೇರಿಕೊಂಡಿವೆ. ಚರ್ಚೆಯ ಮೂಲಕವು ಬಗೆಹರಿಸಿಕೊಳ್ಳಬಹುದಾಗಿದೆ. ಶಿಕ್ಷಕರ ಕೊರತೆ ಇದೆ ಹೀಗೆ ಒಟ್ಟಾರೆ ಶಿಕ್ಷಕರ ಎಲ್ಲಾ ಸಮಸ್ಯೆಗಳನ್ನು ನಾನು ಆಯ್ಕೆಯಾದರೆ ಬಗೆಹರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುವೆ ಎಂದರು.
ಈಗಾಗಲೇ ನಾನು ಕಳೆದ 12 ವರ್ಷಗಳಿಂದ ನೈರುತ್ಯ ಕ್ಷೇತ್ರಕ್ಕೆ ಸಂಬಂಧಿಸಿದ 6 ಜಿಲ್ಲೆಗಳ ಶಾಲೆಗಳಿಗೆ ಭೇಟಿ ನೀಡಿದ್ದೇನೆ, ಮತದಾರರನ್ನು ತಲುಪಿದ್ದೇನೆ. ಶಿಕ್ಷಕರಲ್ಲದವರೇ ಈ ಕ್ಷೇತ್ರಕ್ಕೆ ಆಯ್ಕೆಯಾಗುತ್ತ ಬಂದಿದ್ದಾರೆ, ಇದು ತಪ್ಪಾಬೇಕು ಈ ಬಾರಿ ಶಿಕ್ಷಕರನ್ನು ಆಯ್ಕೆ ಮಾಡಿ ಎಂದು ಮನವಿ ಮಾಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post