ಸಾಗರ: ಇಂದು ಎಸ್’ಎಸ್’ಎಲ್’ಸಿ ಫಲಿತಾಂಶ ಪ್ರಕಟಗೊಂಡಿದ್ದು ನಗರದ ಪ್ರಗತಿ ಸಂಯುಕ್ತ ಶಾಲೆಯ ವಿದ್ಯಾರ್ಥಿ ಟಿ.ಎಸ್. ಅಭಿರಾಮ್ 625ಕ್ಕೆ 624 ಅಂಕ ಗಳಿಸುವ ಮೂಲಕ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ್ದಾರೆ.
ಸಂಸ್ಕೃತ-100, ಇಂಗ್ಲಿಷ್-100, ಕನ್ನಡ-100, ಗಣಿತ-100, ವಿಜ್ಞಾನ-100 ಹಾಗೂ ಸಮಾಜದಲ್ಲಿ 99 ಅಂಕ ಗಳಿಸಿದ್ದಾನೆ ಅಭಿರಾಮ್.
ಅಭಿರಾಮ್ ಅವರು ಸಾಗರ ವಕೀಲ ಟಿ.ಎಸ್. ರಮಣ ಹಾಗೂ ಉಷಾ ದಂಪತಿಗಳ ಪುತ್ರ.
ಫಲಿತಾಂಶ ಕುರಿತಾಗಿ ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾದೊಂದಿಗೆ ಮಾತನಾಡಿದ ಪ್ರಾಂಶುಪಾಲ ಶಂಕರಪ್ಪ, ಅಭಿರಾಮ್ ಮೊದಲಿನಿಂದಲೂ ಪ್ರತಿಭಾನ್ವಿತ ವಿದ್ಯಾರ್ಥಿ. ಜಿಲ್ಲೆಗೆ ಅಭಿರಾಮ್ ಪ್ರಥಮ ಸ್ಥಾನ ಗಳಿಸುವ ಮೂಲಕ ನಮ್ಮ ಶಾಲೆಗೆ ಕೀರ್ತಿ ತಂದಿದ್ದಾನೆ. ಕಳೆದ ಬಾರಿ ನಮ್ಮ ಶಾಲೆ ತಾಲೂಕಿಗೆ ಪ್ರಥಮ ಸ್ಥಾನ ಗಳಿಸಿತ್ತು. ಈ ಬಾರಿ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿರುವುದು ಸಂತಸದ ಸಂಗತಿಯಾಗಿದೆ ಎಂದರು.
ಈ ಪ್ರತಿಭಾನ್ವಿತ ವಿದ್ಯಾರ್ಥಿಯನ್ನು ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಕೆ.ಎಚ್. ಶ್ರೀನಿವಾಸ್, ಉಪಾಧ್ಯಕ್ಷರಾದ ಶ್ರೀಪಾದರಾವ್ ಸೇರಿದಂತೆ ಸಂಸ್ಥೆ ಪರವಾಗಿ ಅಭಿನಂದಿಸಿದ್ದಾರೆ.
Get In Touch With Us info@kalpa.news Whatsapp: 9481252093
Discussion about this post