ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವಿದ್ಯಾರ್ಥಿಗಳು ಏಕಲವ್ಯನಂತಹ ಗುರಿಯನ್ನು ಹೊಂದಿರಬೇಕು, ತಮ್ಮ ಗುರಿಗಳನ್ನು ಸಾಧಿಸಲು ಅಚಲವಾದ ಸಮರ್ಪಣೆ ಮತ್ತು ಪರಿಶ್ರಮವನ್ನು ಪ್ರದರ್ಶಿಸಬೇಕು. ಏನೇ ಅಡೆತಡೆಗಳು ಬಂದರೂ ಆ ಗುರಿಯತ್ತ ಶ್ರದ್ಧೆಯಿಂದ ಕೆಲಸ ಮಾಡಬೇಕು ಎಂದು ಪಿಇಎಸ್ ಟ್ರಸ್ಟ್ನ ಟ್ರಸ್ಟೀ ಹಾಗೂ ಜನ ಶಿಕ್ಷಣ ಸಂಸ್ಥಾನದ ನಿರ್ದೇಶಕಿ ಎಸ್. ವೈ. ಅರುಣಾದೇವಿ #S Y Arunadevi ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ನಗರದ ಪಿಇಎಸ್ #PES ಸಂಸ್ಥೆಯ ಪ್ರೇರಣಾ ಕನ್ವೆನ್ಷನ್ ಹಾಲ್ನಲ್ಲಿ ಪ್ರೇರಣಾ ಎಜುಕೇಷನಲ್ & ಸೋಷಿಯಲ್ ಟ್ರಸ್ಟ್ನಲ್ಲಿ ಕ್ಯಾಂಪಸ್ ನೇಮಕಾತಿಗಳ ಮೂಲಕ ಆಯ್ಕೆಯಾದ 2024ರ ಬ್ಯಾಚ್ನ ವಿದ್ಯಾರ್ಥಿಗಳಿಗೆ, ಉದ್ಯೋಗ ಆಯ್ಕೆಯ ಪತ್ರಗಳನ್ನು ವಿತರಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಾರತೀಯ ತಂತ್ರಜ್ಞಾನ ಮತ್ತು ಪ್ರತಿಭೆಗಳು ದಿನದಿಂದ ದಿನಕ್ಕೆ ಹೆಚ್ಚು ಶಕ್ತಿಯುತವಾಗುತ್ತಿರುವುದು ತುಂಬಾ ಖುಷಿಯ ವಿಷಯವಾಗಿದೆ ಎಂದು ತಿಳಿಸಿದರು. ನೀವು ಕಾರ್ಪೊರೇಟ್ ಕ್ಷೇತ್ರಕ್ಕೆ ಸೇರಿದ ಮೊದಲ ಎರಡು ವರ್ಷಗಳು ನಿಮ್ಮ ಭವಿಷ್ಯವನ್ನು ರೂಪಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ ಎಂದರು.
Also read: ಅಭಿವೃದ್ಧಿ ಹೆಸರಲ್ಲಿ ಅವೈಜ್ಞಾನಿಕ ಯೋಜನೆ ಅಪರೂಪದ ಜೀವಿಗಳಿಗೆ ಮಾರಕ: ಬಿ.ಎಂ. ಕುಮಾರಸ್ವಾಮಿ
ಪಿಇಎಸ್ ಟ್ರಸ್ಟ್ನ, ಮುಖ್ಯ ಆಡಳಿತ ಸಂಯೋಜಕರಾದ ಡಾ. ನಾಗರಾಜ ಮಾತನಾಡಿ, ಉದ್ಯೋಗ ಮಾರುಕಟ್ಟೆಯಲ್ಲಿ ಪ್ರಸ್ತುತದಲ್ಲಿ ಇರುವ ಸವಾಲುಗಳನ್ನು ಪರಿಗಣಿಸಿ, ೬೫೦ ಕ್ಕೂ ಅಧಿಕ ಆಫರ್ ಗಳು ದೊರೆತಿರುವುದು ನಿಜವಾಗಿಯೂ ವಿಶೇಷವಾಗುತ್ತವೆ ಮತ್ತು ಇದು ಪಿಇಎಸ್ ಶಿವಮೊಗ್ಗದಲ್ಲಿ ಲಭ್ಯವಿರುವ ಪ್ರತಿಭೆಗಳನ್ನು ಪ್ರತಿಬಿಂಬಿಸುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪಿಇಎಸ್ ಐಟಿಎಂ ನ ಪ್ರಾಂಶುಪಾಲರಾದ ಡಾ. ಬಿ. ಎನ್. ಯುವರಾಜು, ಪಿಇಎಸ್ ಐಎಎಂಎಸ್ ನ ಪ್ರಾಂಶುಪಾಲರಾದ, ಎ. ಅರುಣಾ, ಪಿಇಎಸ್ ಪಾಲಿಟೆಕ್ನಿಕ್ ನ ಪ್ರಾಂಶುಪಾಲರಾದ ಪ್ರೊ. ಗೌತi, ಪಿಇಎಸ್ ಟ್ರಸ್ಟ್ ನ ಕೆರಿಯರ್ ಡೆವೆಲಪಮೆಂಟ್ ಸೆಂಟರ್ ನ ಮುಖ್ಯಸ್ಥರಾದ, ಡಾ. ಪ್ರಸನ್ನಕುಮಾರ್ ಉಪಸ್ಥಿತರಿದ್ದರು.
ಪಿಇಎಸ್ ಟ್ರಸ್ಟ್ ನ ಕೆರಿಯರ್ ಡೆವೆಲಪಮೆಂಟ್ ಸೆಂಟರ್ನ ಸಹಾಯಕ ಪ್ರಾಧ್ಯಾಪಕಿ ಹಿಮರಶ್ಮಿ ಎಸ್. ನಾಯಕ್ ಅವರು ನಿರೂಪಣೆ ಮಾಡಿದರು. ಸಹಾಯಕ ಮ್ಯಾನೇಜರ್ ಆದ ಪೂಜಾ ಕೆ. ಗೌಡ ಈ ವರ್ಷದ ಪ್ಲೇಸೆಮೆಂಟ್ ವರದಿಯನ್ನು ಪ್ರಸ್ತುತಪಡಿಸಿದರು. ಈ ವರ್ಷದ ಕ್ಯಾಂಪಸ್ ನೇಮಕಾತಿ ಪ್ರಕ್ರಿಯೆಯಲ್ಲಿ, ಟಿ.ಸಿ.ಎಸ್, ಟಾಟಾ ಎಲಕ್ಸಿ, ಪ್ರಗತಿ ಆಟೋಮೇಷನ್, ಎಟಾನ್ ಸೊಲ್ಯೂಷನ್ಸ್ ,ಡಿ.ಎಫ್ಎಂ. ಟೆಕ್ನಾಲಜೀಸ್, ಟೊಯೋಟಾ, ಪ್ರೇರಣಾ ಇಂಜಿನಿಯರಿಂಗ್ ವರ್ಕ್ಸ್, ಇಂಡಸ್ ಟವರ್, ಎನ್ವೆಂಚರ್, ಐ ಟಿ ಸಿ ಫುಡ್ಸ್, ಓಜಸ್ ಪವರ್, ತ್ರಿವೇಣಿ ಟರ್ಬೈನ್, ಟೊಯೋಟಾ, ಐಡಿಯಾ ಇನ್ಫಿನಿಟಿ , ಎವಿಡೆನ್ , ಬೆಟ್ಸಾಲ್, ಡಿ ಮಾರ್ಟ್, ನಿವಾ ಬುಪಾ, ಇಂಡೋ ಎಂ ಐ ಎಂ, ಸಂವಿದ್ ಬಿಲ್ಡ್ ಟೆಕ್, ಒರಾಯನ್ ಗ್ರೂಪ್ಸ್, ರೇನಿ ಫಿಲ್ಟರ್ ಹೀಗೆ ಇನ್ನೂ ಅನೇಕ ಕಂಪನಿಗಳು ಭಾಗವಹಿಸಿದ್ದವು ಎಂದು ತಿಳಿಸಿದರು.
ಪಿಇಎಸ್ ಟ್ರಸ್ಟ್ ನ ಕೆರಿಯರ್ ಡೆವೆಲಪಮೆಂಟ್ ಸೆಂಟರ್ ನ ಮುಖ್ಯಸ್ಥರಾದ, ಡಾ. ಪ್ರಸನ್ನಕುಮಾರ್ ವಂದನಾರ್ಪಣೆಯನ್ನು ನೆರವೇರಿಸಿದರು. ಕಾಲೇಜಿನ ಎಲ್ಲ ವಿಭಾಗದ ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪಿಇಎಸ್ ಟ್ರಸ್ಟ್ ನ ಆಡಳಿತ ಮಂಡಳಿ, ಟ್ರಸ್ಟೀ ಹಾಗೂ ಸದಸ್ಯರು ಆಯ್ಕೆಯಾದ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post