ಶಿವಮೊಗ್ಗ: ಶಿವಮೊಗ್ಗ ಸೇರಿದಂತೆ ಮಲೆನಾಡು ಭಾಗದಲ್ಲಿ ಪ್ರಖ್ಯಾತವಾಗಿರುವ ಉಷಾ ನರ್ಸಿಂಗ್ ಹೋಂ ಮಾಲೀಕ ಹಾಗೂ ಬ್ರಾಹ್ಮಣ ಸಮಾಜ ಪ್ರಮುಖ ಡಾ. ವೆಂಕಟರಾವ್ ಇಂದು ವಿಧಿವಶರಾಗಿದ್ದಾರೆ.
ಜಿಲ್ಲೆಯಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಹಿರಿಯರಾಗಿ ತಮ್ಮದೇ ಆದ ಛಾಪು ಮೂಡಿಸಿದ್ದ ಇವರು, ಕೊಡುಗೈ ದಾನಿ ಎಂದೇ ಖ್ಯಾತರಾಗಿದ್ದರು. ನಗರದ ಅನೇಕ ಸಂಸ್ಥೆಗಳ ಅಂತರ್ ಶಕ್ತಿಯಾಗಿದ್ದ ಇವರು ಬ್ರಾಹ್ಮಣ ಸಮಾಜದ ಶಕ್ತಿಯಾಗಿದ್ದರು.
ಯುವ ವೈದ್ಯರಿಗೆ ಮಾದರಿಯಾಗಿದ್ದ ವೆಂಕಟರಾವ್ ಅವರು ವೈದ್ಯಕೀಯ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅನನ್ಯವಾದುದು.















