ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ದೇಶದಲ್ಲಿ ಇಂದು ಹಿಂಸಾಚಾರ ಸಂಭವಿಸಿ, ಅಮಾಯಕರ ಜೀವ ಬಲಿಯಾಗುತ್ತಿರುವುದಕ್ಕೆ ನೇರವಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ನೇರ ಕಾರಣ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಮಂಗಳೂರು ಗಲಭೆ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್’ಎಸ್’ಎಸ್ ಹುಟ್ಟಿದಾಗಿನಿಂದಲೂ ದೇಶದಲ್ಲಿ ಬೆಂಕಿ ಹಚ್ಚುವ ಕೆಲಸ ನಡೆಯುತ್ತಿದೆ. ಬಿಜೆಪಿಯುವರು ದೇಶದಲ್ಲಿ ತಂದಿಟ್ಟು ನೋಡುವ ಕೆಲಸ ಮೊದಲಿನಿಂದಲೂ ಮಾಡುತ್ತಲೇ ಇದ್ದಾರೆ ಎಂದು ದೂರಿದ್ದಾರೆ.
ರಾಜ್ಯದಲ್ಲಿ 144 ಸೆಕ್ಷನ್ ಜಾರಿ ಮಾಡುವ ಅಗತ್ಯ ಇರಲಿಲ್ಲ. ಜನರ ಅಭಿಪ್ರಾಯ ವ್ಯಕ್ತಪಡಿಸುವ ಹಾಗೂ ಪ್ರತಿಭಟಿಸುವ ಹಕ್ಕನ್ನು ಕಸಿಯಲು ಉದ್ದೇಶಪೂರ್ವಕವಾಗಿ ಸೆಕ್ಷನ್ ಜಾರಿ ಮಾಡಲಾಗಿದೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಕಿಡಿ ಕಾರಿದರು.
ನಾನು ಮಂಗಳೂರಿಗೆ ಬರದಂತೆ ತಡೆಯಲಾಗಿದೆ. ಆದರೂ ಸಹ ನಾನು ಡಿ.23ರಂದು ಮಂಗಳೂರಿಗೆ ತೆರಳುತ್ತೇನೆ. ಬೇಕಾದರೆ ನನ್ನನ್ನು ಬಂಧನ ಮಾಡಲಿ ಎಂದು ಸವಾಲು ಹಾಕಿದರು.
Get in Touch With Us info@kalpa.news Whatsapp: 9481252093







Discussion about this post