ಕಲ್ಪ ಮೀಡಿಯಾ ಹೌಸ್ | ಸೊರಬ |
ಪರಿಸರದ ಮಾಲಿನ್ಯ ಹಾಗೂ ಮಾನವ ಎಸಗುತ್ತಿರುವ ದೌರ್ಜನ್ಯದಿಂದಾಗಿ ಮಲೆನಾಡಿನಂತಹ ಪ್ರದೇಶದಲ್ಲಿಯೂ ಪ್ರಾಕೃತಿಕ ಅವಘಡಗಳು ಸಂಭವಿಸುತ್ತಿವೆ ಎಂದು ಜೀವವೈವಿದ್ಯ ಮಂಡಳಿಯ ಮಾಜಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಅಭಿಪ್ರಾಯಪಟ್ಟಿದ್ದಾರೆ.
ಗ್ರಾಮ ಅರಣ್ಯ ಸಮಿತಿ ಭೀಮನಕೋಣೆ ಮತ್ತು ಚೈತನ್ಯ ವಿಶೇಷ ಶಿಕ್ಷಣ ಟ್ರಸ್ಟ್ ಮುಂಗರವಳ್ಳಿ ಇವರ ಆಶ್ರಯದಲ್ಲಿ ಪರಿಸರ ಜಾಗೃತಿ ಕಾರ್ಯಾಗಾರದಲ್ಲಿ, ವಿಶೇಷ ಮಕ್ಕಳಿಗೆ ಹಣ್ಣಿನ ಗಿಡ ವಿತರಣೆಯನ್ನು ಮಾಡಿ ಅವರು ಮಾತನಾಡಿದರು.
ಸಾಗರ, ಪ್ರಕೃತಿ ಸಾವಿರಾರು ವರ್ಷಗಳಿಂದ ಮಾನವನಿಗೆ, ಪ್ರಾಣಿ ಪಕ್ಷಿಗಳಿಗೆ ಆಶ್ರಯ ತಾಣವಾಗಿದೆ. ಇಂದಿನ ದಿನಗಳಲ್ಲಿ ಅವಿರತವಾಗಿ ಅರಣ್ಯ ನಾಶ, ಗಣಿಗಾರಿಕೆ, ವಾಯು ಮತ್ತು ಜಲಮಾಲಿನ್ಯಗಳಿಂದಾಗಿ ಪ್ರಾಣಿ ಮತ್ತು ಮನುಷ್ಯರ ನಡುವೆ ಸಂಘರ್ಷ ಏರ್ಪಡುತ್ತಿದೆ ಎಂದರು.
ಈಚೆಗೆ ಉತ್ತರಭಾರತದಲ್ಲಿ ಪ್ರಕೃತಿ ವಿಕೋಪದಿಂದಾಗಿ ಗುಡ್ಡ ಕುಸಿಯುತ್ತಿದ್ದ ದಿನನಿತ್ಯ ನೋಡುತ್ತಿದ್ದೇವೆ. ಕಳೆದ ವರ್ಷ ಮಲೆನಾಡಿನಲ್ಲಿಯೂ ಪ್ರಕೃತಿಯ ಮುನಿಸಿನಿಂದಾಗಿ ಇಂತಹ ಅವಘಡಗಳು ಸಂಭವಿಸಿದೆ ಎಂದರು.
ಭೂಮಿಯ ವಾತಾವರಣದಲ್ಲಿ ಗಣನೀಯ ಏರುಪೇರಾಗಿದ್ದು, ಇಡೀ ವರ್ಷದ ಮಳೆ ಒಂದೇ ದಿನದಲ್ಲಿ ಸುರಿಯುವಂತಹ ಅವಘಡಗಳಿಗೂ ಕಾರಣವಾಗಿದೆ. ಪ್ರತಿ ದಿನ ಅರಣ್ಯ, ಕಾನು ನಾಶವಾಗುತ್ತಿರುವುದನ್ನು ನಾವು ಗಮನಿಸುತ್ತಿದ್ದೇವೆ. ಈಗಿನಿಂದಲೇ ಮಕ್ಕಳು ಸೇರಿದಂತೆ ಸಾರ್ವಜನಿಕರಿಗೆ ಗಿಡ ನೆಟ್ಟು ಪೋಷಿಸುವುದರ ಜೊತೆಗೆ ಸಮುದಾಯ ಭೂಮಿ, ಗೋಮಾಳಗಳ ರಕ್ಷಣೆಗೆ ಮುಂದಾಗಬೇಕಾಗಿದೆ ಎಂದರು.
Also read: ಜಯಚಾಮರಾಜೇಂದ್ರ ಒಡೆಯರ್ ಜನ್ಮದಿನ: ಕುವೆಂಪು ವಿವಿಯಿಂದ ನೇತ್ರದಾನ ಪ್ರತಿಜ್ಞಾ ಶಿಬಿರ
ಭೀಮನಕೋಣೆ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಬಿ.ಎಚ್. ರಾಘವೇಂದ್ರ ಮಾತನಾಡಿ, ಚೈತನ್ಯ ವಿಶೇಷ ಶಿಕ್ಷಣ ಶಾಲೆ ನಡೆದುಬಂದ ಹಾದಿಯ ಕುರಿತಾಗಿ ತಿಳಿಸಿದರು.
ಭೀಮನಕೋಣೆ ಗ್ರಾಪಂ ಅಧ್ಯಕ್ಷರಾದ ಪಾರ್ವತಿ ಮೋಹನ್, ಉಪಾಧ್ಯಕ್ಷ ವಿ.ಕೆ. ಮಂಜುನಾಥ್ ಶೆಟ್ವಿ, ಉಪ ವಲಯ ಅರಣ್ಯಾಧಿಕಾರಿ ಅಶೋಕ್, ನಾಗರಾಜ ಎಂ.ಎಸ್. ಸದಸ್ಯರು ಗ್ರಾಪಂ ಆಶಾಕೇಶವ ಸದಸ್ಯರು ಗ್ರಾಪಂ ಶಾಂತಲಾ ಸುರೇಶ ಸಂಸ್ಥಾಪಕರು ಚೈತನ್ಯ ವಿಶೇಷ ಶಿಕ್ಷಣ ಶಾಲೆ, ಸುಮಿತ್ರ ಅರಣ್ಯ ಇಲಾಖೆ ಸಾಗರ ಮುಂತಾದವರು ಭಾಗವಹಿಸಿದ್ದರು.
ಶಾಲಾ ಶಿಕ್ಷಕಿಯರು ಪ್ರಾರ್ಥಿಸಿ, ಗ್ರಾಮ ಅರಣ್ಯ ಸಮಿತಿ ಸದಸ್ಯ ಕೆ.ಕೆ. ರಾಜೇಶ್ ಸ್ವಾಗತಿಸಿದರು. ನಾರಾಯಣಸ್ವಾಮಿ ವಂದಿಸಿದರು. ನಾಗರಾಜ ಮುಂಗರವಳ್ಳಿ ನಿರೂಪಿಸಿದರು. ಚೈತನ್ಯ ವಿಶೇಷ ಶಿಕ್ಷಣ ಶಾಲೆಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post