ಕಲ್ಪ ಮೀಡಿಯಾ ಹೌಸ್ | ಸೊರಬ |
ಸಮುದಾಯದಲ್ಲಿ ಪ್ರತಿಯೊಬ್ಬರು ತಮ್ಮ ಶಕ್ತ್ಯಾನುಸಾರ ಸಮಾಜ ಸೇವೆ ಮಾಡಬೇಕು ಆಗ ಮಾತ್ರ ಸಮುದಾಯ ಸಂಘಟನೆ ಸಾಧ್ಯ ಎಂದು ಮಿರ್ಜಾನ ಆದಿಚುಂಚನಗಿರಿ ಮಠದ ನಿಶ್ಚಲಾನಂದನಾಥ ಸ್ವಾಮೀಜಿ ಹೇಳಿದರು.
ತಾಲೂಕಿನ ಹೆಚ್ಚೆ ಸಮೀಪದ ಹೊಸಕೊಪ್ಪ ಗ್ರಾಮದಲ್ಲಿ ಸೊರಬ ತಾಲೂಕು ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದ 7ನೇ ವರ್ಷದ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕುಟುಂಬದ ಪ್ರಗತಿಯಲ್ಲಿ ಮಹಿಳೆಯರ ಪಾತ್ರ ಪ್ರಮುಖವಾದದ್ದು. ಮಕ್ಕಳ ವ್ಯಕ್ತಿತ್ವ ರೂಪಿಸುವಲ್ಲಿ ಗೃಹಿಣಿಯರು ಪ್ರಯತ್ನಿಸಬೇಕು. ಪ್ರತಿ ಗ್ರಾಮದಲ್ಲಿ ಮಹಿಳೆಯರು ಸ್ವಸಹಾಯ ಸಂಘಗಳನ್ನು ಸ್ಥಾಪಿಸಿಕೊಂಡು ಸ್ವಾವಲಂಬಿಗಳಾಗಬೇಕು ಎಂದರು.
Also read: ಕಾಂಗ್ರೆಸ್ ಹೊಡೆದೋಡಿಸುವುದೇ ಬಿಜೆಪಿಯ ಗುರಿ: ಸಚಿವ ಅಶ್ವತ್ಥನಾರಾಯಣ
ಉಪನ್ಯಾಸ ನೀಡಿದ ಸೊರಬ ಪಿಯು ಕಾಲೇಜಿನ ಉಪನ್ಯಾಸಕ ಡಾ. ಉಮೇಶ್ ಭದ್ರಾಪುರ ಸಮುದಾಯ ಸಂಘಟನೆಯಲ್ಲಿ ಸಮಾಜ ಬಾಂಧವರ ಪಾಲ್ಗೊಳ್ಳುವಿಕೆ ಬಹು ಮುಖ್ಯ. ಸೊರಬ ತಾಲೂಕಿನ ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘ ಸಮುದಾಯದ ಮಕ್ಕಳ ಶಿಕ್ಷಣ ಪ್ರಗತಿಯಲ್ಲಿ ಮುಖ್ಯ ಪಾತ್ರ ವಹಿಸುತ್ತಿದೆ. ಸಂಘಟನೆಯನ್ನು ನೋಂದಾಯಿಸುವುದು ಸುಲಭ ಮುನ್ನಡೆಸಿಕೊಂಡು ಹೋಗುವುದು ಕಷ್ಟ ಸಂಘಟನೆಗೆ ಸದಸ್ಯರೇ ಆಧಾರ ಎಂದರು.
ಸಂಘದ ಅಧ್ಯಕ್ಷ ಉಮಾಕಾಂತ್ ಗೌಡ ನೆಲ್ಲೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಅಧ್ಯಕ್ಷ ಸ್ಥಾನ ಒಂದು ಅಧಿಕಾರ ಎನ್ನುವುದಕ್ಕಿಂತ ಅದು ಒಂದು ಜವಾಬ್ದಾರಿ ಅದನ್ನು ಸಮರ್ಥವಾಗಿ ನಿಭಾಯಿಸಿದ ಸಂತೃಪ್ತಿ ಇದೆ ಎಂದರು.
ಸಂಘದ ಗೌರವಾಧ್ಯಕ್ಷ ಮಂಜಪ್ಪ ಮಾತನಾಡಿ, ಮಕ್ಕಳನ್ನು ಸರಿದಾರಿಗೆ ತರುವಲ್ಲಿ ಮಹಿಳೆಯರ ಪಾತ್ರ ಪ್ರಧಾನವಾದದ್ದು ಎಂದರು.
ಶಿವಮೊಗ್ಗ ಜಿಲ್ಲಾ ಒಕ್ಕಲಿಗರ ಮಹಿಳೆಯರ ಸಂಘದ ಅಧ್ಯಕ್ಷೆ ಭಾರತಿ ರಾಮಕೃಷ್ಣ ಮಾತನಾಡಿ ಮಹಿಳಾ ಸಬಲೀಕರಣಕ್ಕೆ ತಾವು ಸದಾ ಸಿದ್ಧ ಎಂದರು. ಸೊರಬ ತಾಲೂಕು ಘಟಕದ ಒಕ್ಕಲಿಗರ ಮಹಿಳಾ ಸಂಘದ ಅಧ್ಯಕ್ಷೆ ರಾಧಾ ಉಮೇಶ್ ಭದ್ರಾಪುರ ಮಾತನಾಡಿದರು.
ಶಿರಸಿ ತಾಲೂಕು ಕರೆ ಒಕ್ಕಲಿಗರ ಸಂಘದ ಅಧ್ಯಕ್ಷ ಅರುಣ್ ಗೌಡ ಮಳಲಿ, ಸಿದ್ದಾಪುರ ಸಂಘದ ಅಧ್ಯಕ್ಷ ಸುಬ್ರಾಯ ಗೌಡ, ಸಾಗರದ ಬಸವರಾಜ್ ಹೊಸಕೊಪ್ಪ, ಬೈರಪ್ಪ ನಿಸರಾಣಿ, ಕೃಷ್ಣಪ್ಪ ಕಾರೆಹೊಂಡ, ರಂಗನಾಥ್, ಕಾಳಪ್ಪ ನಡಹಳ್ಳಿ, ಶಂಕರಗೌಡ ಧಾರವಾಡ, ದೇವರಾಜ್ ಕಮರೂರು, ರಾಮಗೌಡ ಮೂಡ್ನಳ್ಳಿ, ಶಿವಮೊಗ್ಗ ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎ ಎಸ್ ಚಂದ್ರಕಾಂತ, ತಿಮ್ಮಪ್ಪ ಯಕ್ಷಿ, ನಾಗೇಶ್ ಕಮರೂರು, ಕಾಳಪ್ಪ ವಕ್ಕಲಕೊಪ್ಪ, ರಾಮಪ್ಪ ಹುಲೆಮರಡಿ, ಅಶೋಕ್ ಕುಮಾರ್ ಹಿರೇಚೌಟಿ, ಹುಚ್ಚಪ್ಪ ಹೊಸಕೊಪ್ಪ, ಶಶಿಕುಮಾರ್ ನೆಲ್ಲೂರು, ರವಿಚಂದ್ರ ಕಡೆ ಜೋಳದಗುಡ್ಡೆ, ರೇವಣ್ಣ ಯಕ್ಷಿ, ರಾಮಪ್ಪ ನಿಸ್ರಾಣಿ, ಮರಿಯ ಗೌಡ ಹೊಸಕೊಪ್ಪ, ರಾಮಚಂದ್ರ, ಮಾರ್ಯಪ್ಪ , ಕರಿಯಪ್ಪ, ಭೂತಪ್ಪ, ಬೀರಪ್ಪ ಹಾಜರಿದ್ದರು. ಕಾರೆಹೊಂಡ ಹೊಸಕೊಪ್ಪ ಮತ್ತು ವಕ್ಕಲಕೊಪ್ಪ ಗ್ರಾಮಗಳ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿಯುಸಿ ಯಲ್ಲಿ ಅತಿಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಹಾಗೂ ಸಮುದಾಯದ ಇಪ್ಪತ್ತಕ್ಕೂ ಹೆಚ್ಚಿನ ವಿಕಲಚೇತನ ವ್ಯಕ್ತಿಗಳನ್ನು ಸನ್ಮಾನಿಸಲಾಯಿತು. ರಂಗನಾಥ ಹೊಸಕೊಪ್ಪ ಸ್ವಾಗತಿಸಿದರು.
ಕಾಳಪ್ಪ ಪ್ರಸ್ತಾವಿಕ ಮಾತನಾಡಿದರು. ಸಂಘಟನಾ ಕಾರ್ಯದರ್ಶಿ ಕೃಷ್ಣಪ್ಪ ಕಾರೆಹೊಂಡ ಸಂಘದ ವರದಿ ವಾಚನ ಮಾಡಿದರು ಭೈರಪ್ಪ ನಿಸರಾಣಿ ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post