ಕಲ್ಪ ಮೀಡಿಯಾ ಹೌಸ್ | ಸೊರಬ |
ಸೃಜನಾತ್ಮಕವಾಗಿ ನಮ್ಮ ಸಂಸ್ಕೃತಿ ಬೇರೂರಿದೆ. ಹಾಗಾಗಿ ನಮ್ಮ ಸಂಸ್ಕೃತಿಯ ಎಲ್ಲಾ ಆಯಾಮಗಳಲ್ಲೂ ಸೃಜನಾತ್ಮಕತೆ ಇದೆ ಎಂದು ರಘುಪತಿ ಎನ್. ಶರ್ಮಾ ಹೇಳಿದರು.
ತಾಲ್ಲೂಕು ಹರೀಶಿ ಸಮೀಪದ ಶಿಂಡ್ಲಿ ಗ್ರಾಮದ ಅವರ ಸ್ವಗೃಹದಲ್ಲಿ ಕುಟುಂಬದವರು ಹಮ್ಮಿಕೊಂಡಿದ್ದ ಷಷ್ಟ್ಯಬ್ಧಿ ಸಮಾರಂಭದಲ್ಲಿ ಮಾತನಾಡಿದರು.
ಕುಟುಂಬದ ಕಾರ್ಯಕ್ರಮಗಳು ಕೇವಲ ಕುಟುಂಬಕ್ಕಷ್ಟೆ ಸೀಮಿತವಾಗದೆ ಸಾರ್ವಜನಿಕವಾಗಿಯೂ ಪಾಲ್ಗೊಳ್ಳಲಿ ಎಂಬ ದೃಷ್ಟಿಯಿಂದ ಈ ವೇಳೇ ಕಲಾವಿದರಿಗೆ ಪ್ರೋತ್ಸಾಹಿಸುವ ಇಚ್ಛೆಯಿಂದ ಯಕ್ಷಗಾನವನ್ನುಕೂಡ ಹಮ್ಮಿಕೊಳ್ಳಲಾಗಿದೆ. ಇಂತಹ ಸಮಾಜಮುಖಿ ಸಮಾಋಂಭದಲ್ಲಿ ನನ್ನ ಪುತ್ರಿಯ ಸಾಧನೆಯನ್ನು ಗುರುತಿಸಿ ಸೀಮಾ ಪರಿಷತ್ ವತಿಯಿಂದ ಸನ್ಮಾನಿಸುತ್ತಿರುವುದು ಅತೀವ ಸಂತಸ ತಂದಿದೆ ಎಂದರು.
ಪ್ರಾಣಿಶಾಸ್ತ್ರದಲ್ಲಿ ಪ್ರಥಮ ರ್ಯಾಂಕ್ ಸ್ನಾತಕ ಪದವಿ ಪೂರೈಸಿ, ಡಾಕ್ಟರೇಟ್ ಗಳಿಸಿರುವ ಪ್ರಸ್ತುತ ಬೆಂಗಳೂರು ಸ್ಟೇಟ್ ಫಾರೆನ್ಸಿಕ್ ಸೈನ್ಸ್ ಲ್ಯಾಬೋರೇಟರಿಯಲ್ಲಿ ಅಧಿಕಾರಿಯಾಗಿರುವ ರಘುಪತಿ ಶರ್ಮಾ ನಾಗರತ್ನಾ ಪುತ್ರಿ ಡಾ. ಚೈತ್ರಾ ಆರ್. ಶರ್ಮಾ ಅವರನ್ನು ಹರೀಶಿ ಮಂಗಳೂರು ವಲಯದ ವಿಪ್ರ ಸಮಾಜದವರು ಸನ್ಮಾನಿಸಿದರು.
Also read: ಅ. 15-16: ಪಂಡಿತ್ ಮಲ್ಲಿಕಾರ್ಜುನ ಮನ್ಸೂರ್ ಸ್ಮರಣಾರ್ಥ 17ನೆಯ ಧ್ವನಿ’ ಹಿಂದೂಸ್ತಾನಿ ಸಂಗೀತ ಕಾರ್ಯಕ್ರಮ
ಸಂಜೆ ವಂಡಾರು ನಾದನೂಪುರ ಯಕ್ಷೋತ್ತಾನ ಟ್ರಸ್ಟ್ ಅವರಿಂದ ಪೌರಾಣಿಕ ಯಕ್ಷಗಾನ ಕಾರ್ಯಕ್ರಮ ಏರ್ಪಡಿಸಿದ್ದು ಕೀಚಕವಧೆ ಪ್ರಹಸನದಲ್ಲಿ ಕೀಚಕನಾಗಿ ಪ್ರಸನ್ನಶೆಟ್ಟಿಗಾರ್, ವಲಲನಾಗಿ ನಾಗರಾಜಭಂಡಾರಿ, ವಿಜಯನಾಗಿ ಚಪ್ಪರಮನೆ, ಸೈರೇಂದ್ರಿಯಾಗಿ ವಂಡಾರು ಗೋವಿಂದ, ಸುಧೀಷ್ಣೆಯಾಗಿ ಷಣ್ಮುಖಗೌಡ ತಮ್ಮ ಪಾತ್ರಗಳಿಗೆ ಜೀವತುಂಬಿದರು. ಹಿಮ್ಮೇಳದಲ್ಲಿ ರಾಮಕೃಷ್ಣಹೆಗಡೆ ಹಿಲ್ಲೂರು ಭಾಗವತಿಕೆ, ಅನಿರುದ್ಧ ಹೆಗಡೆ ವರ್ಗಾಸರ ಮದ್ದಳೆ, ಪ್ರಸನ್ನ ಭಟ್ ಚಂಡೆವಾದನದಲ್ಲಿ ಪಾಲ್ಗೊಂಡರು.
ಶರ್ಮಾ ಕುಟುಂಬ, ಬಂಧು ಆಪ್ತೇಷ್ಟರ ಜೊತೆ ಹರೀಶಿ, ಮಂಗಳೂರು, ಶಿಂಡ್ಲಿ ಹಾಗೂ ಸುತ್ತಮುತ್ತಲ ಗ್ರಾಮದ ಅನೇಕ ಪ್ರಮುಖರು, ಯಕ್ಷಕಲಾ ಪೋಷಕರು ಮೊದಲಾದವರು ಇದ್ದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post