ಕಲ್ಪ ಮೀಡಿಯಾ ಹೌಸ್ | ಸೊರಬ |
ಪಟ್ಟಣದ ದಾನಮ್ಮ ಗುತ್ತಿ ಕಾಂಪ್ಲೆಕ್ಸ್ ಸಭಾಂಗಣದಲ್ಲಿ , ಸರ್ವೋದಯ ಗ್ರಾಮೀಣಾಭಿವೃದ್ಧಿ ಟ್ರಸ್ಟ್ ( ರಿ) ಕನ್ನಡ ಸಾಂಸ್ಕೃತಿಕ ಜಗಲಿ ಹಾಗೂ ತಾಲ್ಲೂಕು ಯುವ ಒಕ್ಕೂಟಗಳ ಆಶ್ರಯದಲ್ಲಿ ಸಂಗ್ಯಾ ಬಾಳ್ಯಾ ಸಣ್ಣಾಟದ ತರಬೇತಿ ಕಾರ್ಯಾಗಾರದ ಉದ್ಘಾಟನಾ ಸಮಾರಂಭ ನಡೆಯಿತು.
ಪುರಸಭೆಯ ಅಧ್ಯಕ್ಷ ಈರೇಶ್ ಮೇಸ್ತ್ರಿ ಅವರು ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಹಿರಿಯ ರಂಗಕರ್ಮಿ, ಸಣ್ಣಾಟದ ನಿದೇ೯ಶಕರು ದೇವೇಂದ್ರ ಬೆಳೆಯೂರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಕಲಾವಿದರಿಗೆ ಇರಬೇಕಾದ ಒಂದಿಷ್ಟು ಹೊಣೆಗಾರಿಕೆಗಳ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ಸರ್ವೋದಯ ಗ್ರಾಮೀಣಾಭಿವೃದ್ಧಿ ಟ್ರಸ್ಟ್ ನ ಮ್ಯಾನೇಜಿಂಗ್ ಟ್ರಸ್ಟಿ ಹೆಚ್. ಎಂ. ಪ್ರಶಾಂತ , ಕನ್ನಡ ಸಾಂಸ್ಕೃತಿಕ ಜಗಲಿ ಗೌರವ ಸಂಚಾಲಕ ಎನ್. ಷಣ್ಮುಖಾಚಾರ್, ಕಸಾಪ ಮಾಜಿ ಅಧ್ಯಕ್ಷ ಹಾಲೇಶ್ ನವುಲೆ, ಜಿಲ್ಲಾ ಪರಿಷತ್ ಮಾಜಿ ಉಪಾಧ್ಯಕ್ಷರೂ ,ಕಲಾ ಪೋಷಕರಾದ ಪಾಣಿ ರಾಜಪ್ಪ , ಕನ್ನಡ ಸಾಂಸ್ಕೃತಿಕ ಜಗಲಿ ಉಪಾಧ್ಯಕ್ಷರಾದ ಸುಬ್ರಹ್ಮಣ್ಯ ಗುಡಿಗಾರ್, ಯುವ ಒಕ್ಕೂಟ ಅಧ್ಯಕ್ಷರಾದ ಶ್ರೀ ಲಿಂಗರಾಜ ಗೌಡ್ರು ಕೋಣನಮನೆ, ಮೋಹನ್ ಸುರಭಿ, ಜಾನಪದ ಗಾಯಕ ಶಿವರುದ್ರಪ್ಪ ಜೋಗಿ ಗೆಂಡ್ಳ, ಗಾಯಕ ಈರಪ್ಪ, ಶಿಕ್ಷಕರು, ಪತ್ರಕರ್ತ, ಗಾಯಕ ರವಿ ಕಲ್ಲಂಬಿ, ವಕೀಲರಾದ ಢಾಕಪ್ಪ ಹೆಸರಿ, ತಬಲಾ ವಾದಕ ಬಾಂಬೋರೆ, ವನಸುಮ ಕಲಾಬಳಗದ ಗಾಯಕಿಯರು ಹಾಜರಿದ್ದರು.
Also read: 280 ಕೋಟಿ ರೂ. ವೆಚ್ಚದ ಮಿದುಳು ಸಂಶೋಧನಾ ಕೇಂದ್ರಕ್ಕೆ ಪಿಎಂ ಮೋದಿ ಚಾಲನೆ
ಹೆಚ್. ಎಂ. ಪ್ರಶಾಂತ್ ಸ್ವಾಗತಿಸಿ, ಕನ್ನಡ ಸಾಂಸ್ಕೃತಿಕ ಜಗಲಿ ಪ್ರಧಾನ ಕಾರ್ಯದರ್ಶಿ, ಸಾಹಿತಿ/ಪ್ರಕಾಶಕ ರೇವಣಪ್ಪ ಬಿದರಗೇರಿ ವಂದನೆ ಸಲ್ಲಿಸಿದರು. ಮಹಿಳಾ ಸಾಂತ್ವನ ಕೇಂದ್ರದ ಕು.ಮೇಘನಾ ಅವರು ಕಾರ್ಯಕ್ರಮ ನಿರೂಪಿಸಿದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post