ಕಲ್ಪ ಮೀಡಿಯಾ ಹೌಸ್ | ಸೊರಬ |
ತಾಲ್ಲೂಕು ಯಲಸಿ ಗ್ರಾಮದ ಮಹತ್ವಪೂರ್ಣ, ಕೇಂದ್ರ ಸರ್ಕಾರದ ಅಧಿಕಾರಿಗಳಿಂದ ಪ್ರಶಂಸನೆ ಪಡೆದ ಅಮೃತಸರೋವರ ಯೋಜನೆಯ ಗೋಕಟ್ಟೆ ನಿರ್ಮಾಣದ ಕಾಮಗಾರಿಗೆ ಅಡ್ಡಿಪಡಿಸಿದವರನ್ನು ಹಾಗೂ ಗ್ರಾಮಸ್ಥರನ್ನು ಕರೆಸಿ ಕಾರ್ಯನಿರ್ವಹಣಾಧಿಕಾರಿ ಕುಮಾರ್ ಮುಟಗುಪ್ಪೆ ಗ್ರಾಪಂ ಕಚೇರಿಯಲ್ಲಿ ತುರ್ತು ಸಭೆ ನಡೆಸಿದರು.
ಯಲಸಿ ಗ್ರಾಮದ ಈರ್ವರು ಸರ್ಕಾರಿ ಜಾಗ ಸನಂ 132ರಲ್ಲಿ ಗೋಕಟ್ಟೆ ಇರುವ ಜಾಗ ನಮ್ಮದು ಅಲ್ಲಿ ಕಾಮಗಾರಿ ಕೂಡದು ಎಂದು ಆಕ್ಷೇಪ ವ್ಯಕ್ತಪಡಿಸಿ ಕಾಮಗಾರಿಗೆ ಅಡ್ಡಿಪಡಿಸಿದ್ದರು. ಎನ್ಆರ್ಇಜಿ ಅಡಿಯಲ್ಲಿ ಕಾರ್ಯಪ್ರಗತಿಯಲ್ಲಿರುವ ಈ ಕಾಮಗಾರಿ ಎರಡು ದಿನಗಳಿಂದ ಸ್ಥಗಿತಗೊಂಡಿತ್ತು.
ಕಾಮಗಾರಿಗೆ ಅಡ್ಡಿ ಪಡಿಸಿದ ಈರ್ವರು ಸಂಬಂಧ ಪಟ್ಟ ದಾಖಲೆ ಒದಗಿಸಲು ವಿಫಲರಾದ ಕಾರಣ ಗ್ರಾಮಸ್ಥರ ಸರ್ವಾನುಮತದ ಒಪ್ಪಿಗೆ ಪಡೆದು ಕಾಮಗಾರಿಗೆ ಅಡ್ಡಿಪಡಿಸದಂತೆ ಈರ್ವರಿಗೆ ಇಒ ತಾಕೀತು ಮಾಡಿದರು.
Also read: ದೇಶವೇ ಬೆಚ್ಚಿ ಬೀಳುವ ಘಟನೆ: ಕೇರಳದಲ್ಲಿ ವಾಮಾಚಾರಕ್ಕೆ ಮಹಿಳೆಯರಿಬ್ಬರ ಬಲಿ ಕೊಟ್ಟ ದುಷ್ಟರು
ಗ್ರಾಮಸ್ಥರು ಆಜಾಗೆಯಲ್ಲಿ ಯಾರೂ ಸಾಗುವಳಿ ಮಾಡಿಲ್ಲ. ಅಲ್ಲಿ ಗಿಡಮರಗಳಿವೆ. ಗ್ರಾಮಕ್ಕೆ ನೆರವಾಗುವ ನಿಟ್ಟಿನಲ್ಲಿ ಗೋಕಟ್ಟೆ ನಿರ್ಮಾಣಕ್ಕೆ ಮುಂದಾಗಿದೆ. ಯಾವತ್ತು ವೈಯುಕ್ತಿಕವಾಗಿ ಯಾರಿಗೂ ಈ ಜಾಗ ಮಂಜೂರು ಮಾಡಕೂಡದು ಎಂದು ಆಗ್ರಹಿಸಿದರು.
ಸಭೆಯಲ್ಲಿ ಪಿಡಿಒ ಭಾರತಿ, ಕಾರ್ಯದರ್ಶಿ ಸುಧಾಕರ್, ಇಡಿ ಅಧಿಕಾರಿ, ಕಂದಾಯ ಇಲಾಖೆ ಸಮೀರ್, ತಾಪಂ ಸಿಬ್ಬಂದಿ, ಗ್ರಾಮದ ಗ್ರಾಮಸಮಿತಿ ಅಧ್ಯಕ್ಷ ಧರ್ಮಪ್ಪ ಮತ್ತು ಸದಸ್ಯರು, ಗ್ರಾಮಸ್ಥರು ಇದ್ದರು.
ವರದಿ: ಮಧುರಾಮ್, ಸೊರಬ


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















