ಕಲ್ಪ ಮೀಡಿಯಾ ಹೌಸ್ | ಸೊರಬ |
ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ #S Bangarappa ಅವರ 13ನೇ ಪುಣ್ಯಸ್ಮರಣೆ ಅಂಗವಾಗಿ ಗುರುವಾರ ಪಟ್ಟಣದ ಖಾಸಗಿ ಬಸ್ನಿಲ್ದಾಣದ ಆವರಣದಲ್ಲಿರುವ ಎಸ್. ಬಂಗಾರಪ್ಪ ಅವರ ಪುತ್ಥಳಿಗೆ ಅಭಿಮಾನಿಗಳು ಪುಷ್ಪನಮನ ಸಲ್ಲಿಸಿದರು.
ನೇತೃತ್ವ ವಹಿಸಿದ್ದ ಎಸ್. ಕುಮಾರ್ ಬಂಗಾರಪ್ಪ ಅಭಿಮಾನಿ ಬಳಗದ ಅಧ್ಯಕ್ಷ ಹಾಗೂ ಪುರಸಭೆ ಸದಸ್ಯ ಎಂ.ಡಿ. ಉಮೇಶ್ ಮಾತನಾಡಿ, ಎಸ್. ಬಂಗಾರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಬಡವರು, ಹಿಂದುಳಿದವರು ಹಾಗೂ ರೈತರ ಪರವಾದ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದರು. ಅವು ಇಂದಿಗೂ ಜನಮಾನಸದಲ್ಲಿ ಉಳಿದಿವೆ. ಅವರ ರಾಜಕೀಯ ಆದರ್ಶಗಳು ಇಂದಿನ ರಾಜಕಾರಣಿಗಳಿಗೆ ಮಾದರಿಯಾಗಿದೆ ಎಂದರು.
Also read: ಕುಂಭಮೇಳ | ಬೆಂಗಳೂರಿನಿಂದ ಪ್ರಯಾಗ್ ರಾಜ್ ಗೆ ವಿಶೇಷ ರೈಲು
ರೈತಾಪಿ ವರ್ಗದಲ್ಲಿ ಜನಿಸಿದ ಬಂಗಾರಪ್ಪ ಅವರು ತಮಗೆ ದೊರೆತ ಅಧಿಕಾರವನ್ನು ಜನಸಾಮಾನ್ಯರ ಅಭ್ಯುದಯಕ್ಕಾಗಿ ಬಳಸಿದರು. ಅವರು ಜಾರಿಗೆ ತಂದಿದ್ದ ಗ್ರಾಮೀಣ ಕೃಪಾಂಕದಿಂದ ಪ್ರಸ್ತುತ ಸಾವಿರಾರು ಗ್ರಾಮೀಣ ಭಾಗದವರು ಸರ್ಕಾರಿ ಉದ್ಯೋಗ ಪಡೆಯುವಂತಾಯಿತು. ಬಡವರ ಪರವಾದ ಯೋಜನೆಗಳನ್ನು ಜಾರಿಗೆ ತಂದ ಮಹಾನ್ ನಾಯಕರಾಗಿದ್ದಾರೆ. ನೇರ ನುಡಿಯಿಂದಲೇ ಅವರು ರಾಜಕೀಯದಲ್ಲಿ ಛಾಪು ಮೂಡಿಸಿ ಜನನಾಯಕರಾಗಿದ್ದರು ಎಂದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಯು. ನಟರಾಜ ಉಪ್ಪಿನ, ಪ್ರಭು ಮೇಸ್ತ್ರಿ, ಪ್ರಮುಖರಾದ ಗುರುಮೂರ್ತಿ ಹಿರೇಶಕುನ, ಗುಡ್ಡಪ್ಪ, ಶರತ್ ಹೊಸೂರು, ಚಂದ್ರಪ್ಪ ದುಗ್ಲಿ, ರಂಗಪ್ಪ, ಚಂದ್ರು ಮಾಸೂರು, ಕಿರಣ್ ಸೊರಬ, ಕೃಷ್ಣಮೂರ್ತಿ ಸೇರಿದಂತೆ ಇತರರಿದ್ದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post