ಕಲ್ಪ ಮೀಡಿಯಾ ಹೌಸ್ | ಸೊರಬ |
ಸೊರಬ ತಾಲ್ಲೂಕಿನ ಹರಳಿಗೆ ಅರಣ್ಯ ನಾಶಕ್ಕೆ ಅರಣ್ಯ ಸಚಿವ ಈಶ್ವರ್ ಖಂಡ್ರೆ Minister Eshwara Khandre ತಡೆ ನೀಡಿ ಆದೇಶಿಸಿದ ಹಿನ್ನೆಲೆ ವೃಕ್ಷಲಕ್ಷ ಆಂದೋಲನ, ಪಜಾ ಟ್ರಸ್ಟ್ ಅಭಿನಂದನೆ ಸಲ್ಲಿಸಿದೆ.
ತಾಲ್ಲೂಕಿನ ಮುಟಗುಪ್ಪೆ ಗ್ರಾಪಂ ವ್ಯಾಪ್ತಿಯ ಹರಳಿಗೆ ಗ್ರಾಮದಲ್ಲಿ ರಾತ್ರೋರಾತ್ರಿ ಅರಣ್ಯ ಕಡಿದು ಅಡಿಕೆ ತೋಟ ಮಾಡಿರುವ ದುಷ್ಕೃತ್ಯ ದ ವಿರುದ್ದ ವೃಕ್ಷಲಕ್ಷ ಆಂದೋಲನ ಮತ್ತು ಪರಿಸರ ಜಾಗೃತಿ ಟ್ರಸ್ಟ್ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಕೂಡಲೇ ಸ್ಥಳೀಯ ಕಂದಾಯ ಮತ್ತು ಅರಣ್ಯ ಇಲಾಖೆಗಳ ಗಮನಕ್ಕೆ ತಂದಾಗ್ಯೂ ಪರಿಣಾಮಕಾರಿಯಾಗದೆ ನೇರ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರ ಗಮನಕ್ಕೆ ತಂದಿದ್ದು, ಅವರ ತ್ವರಿತ ಆದೇಶದ ಮೇರೆಗೆ ಅರಣ್ಯ, ಕಂದಾಯ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿ ಅತಿಕ್ರಮಣ ಪ್ರದೇಶವನ್ನು ತೆರವುಗೊಳಿಸಿದೆ. ಸನಂ 6ಕ್ಕೆ ಸಿಪಿಟಿ ನಿರ್ಮಿಸಿ ಮರು ಅರಣ್ಯೀಕರಣಕ್ಕೆ ಸೂಚಿಸಿದೆ.
ತೆರವು ಪ್ರಕ್ರಿಯೆ ವೇಳೆ ತಹಶಿಲ್ದಾರ್, ವಿಭಾಗ ಅರಣ್ಯ ಅಧಿಕಾರಿಗಳು, ತಾಲ್ಲೂಕು ಅರಣ್ಯ ಹಾಗೂ ಕಂದಾಯ ಅಧಿಕಾರಿಗಳು ಖುದ್ದು ಹಾಜರಿದ್ದು ರಕ್ಷಣಾ ಕಾರ್ಯಕ್ಕೆ ಮುಂದಾಗಿದ್ದಾರೆ.
Also read: ದೇಶದ 2ನೇ ಅತಿದೊಡ್ಡ ಹುಲಿಬನ ಕರ್ನಾಟಕ: ಈಶ್ವರ ಖಂಡ್ರೆ ಹರ್ಷ
ಪಶ್ಚಿಮ ಘಟ್ಟಗಳ ರಕ್ಷಣೆಗೆ ಶೀಘ್ರ ಗಮನ ಹರಿಸಿದ ಅರಣ್ಯ ಸಚಿವರಿಗೆ, ಸಕಾಲದಲ್ಲಿ ಸುದ್ಧಿ ಪ್ರಕಟಿಸಿದ ಮಾಧ್ಯಮಗಳಿಗೆ ಹಾಗೂ ಅರಣ್ಯ, ಕಂದಾಯ ಇಲಾಖೆಯ ಅಧಿಕಾರಿಗಳಿಗೆ ವೃಕ್ಷಲಕ್ಷ ಆಂದೋಲನ ಮತ್ತು ಪಜಾ ಟ್ರಸ್ಟ್ ಅಭಿನಂದಿಸಿದೆ.
ಶಿವಮೊಗ್ಗ ಜಿಲ್ಲೆಯ ಸೊರಬ, ಸಾಗರ, ಹೊಸನಗರ ತಾಲೂಕಿನ ಹೊಸ ಅತಿಕ್ರಮಣ, ಅರಣ್ಯ ನಾಶವನ್ನು ತಡೆಗಟ್ಟಲು ಪರಿಸರ ಕಾರ್ಯಕರ್ತ ರು ಒತ್ತಾಯಿಸುತ್ತಿದ್ದು, ಇಲಾಖೆ ಬಿಗಿಯಾದ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ.
ಸೊರಬ ತಾಲ್ಲೂಕಿನ ಬರಿಗೆ ಹಲಸಿನಕೊಪ್ಪ ಗ್ರಾಮದಲ್ಲಿಯೂ ಗ್ರಾಮಸ್ಥರು ಕಾಯ್ದಿಟ್ಟುಕೊಂಡ ಅರಣ್ಯ ಅತಿಕ್ರಮಣಕ್ಕೆ ಒಳಗಾಗಿದ್ದನ್ನ ಇಲಾಖೆಗಳ ಗಮನಕ್ಕೆ ತಂದಾಗ್ಯೂ ವಿಳಂಬವಾಗುತ್ತಿದೆ. ಕೂಡಲೆ ಅತಿಕ್ರಮಣ ಜಾಗವನ್ನು ತೆರವುಗೊಳಿಸಬೇಕು ಎಂದು ಒತ್ತಾಯಿಸಿದೆ.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post