ಕಲ್ಪ ಮೀಡಿಯಾ ಹೌಸ್ | ಸೊರಬ |
ವಿಶ್ವದಾದ್ಯಂತ ಇಂದು ಜಲದಿನ ನಡೆಯುತ್ತಿದೆ. ಯಾವುದೋ ಸಿಮೆಂಟ್ ಹಾಸಿನ ನಡುವೆ ಜಲದಿನ ಆಚರಿಸುವುದಕ್ಕಿಂತಲೂ ಗ್ರಾಮಾಂತರ ಪ್ರದೇಶದ ಜಲಮೂಲದ ಸನಿಹ ಆಚರಿಸುವ ಜಲದಿನ ಹೆಚ್ಚು ಅರ್ಥಪೂರ್ಣ ಎಂದು ಹಿರಿಯ ವಕೀಲ ಎಂ.ಆರ್. ಪಾಟೀಲ್ ಹೇಳಿದರು.
ತಾಲ್ಲೂಕು ಶಾಂತಗೆರೆ ಗ್ರಾಮದ ತಾವರೆಕೆರೆ ಅಂಗಳದಲ್ಲಿ ಗ್ರಾಮಸ್ಥರ ಜೊತೆ ಪರಿಸರ ಜಾಗೃತಿ ಟ್ರಸ್ಟ್ ಹಾಗೂ ಪರ್ಯಾವರಣ ಗತಿವಿಧಿ ಸಂಘಟನೆಗಳು ಹಮ್ಮಿಕೊಂಡಿದ್ದ ಕೆರೆಪೂಜೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಪರ್ಯಾವರಣದ ಹಾಗೂ ಪಜಾಟ್ರಸ್ಟ್ ಉಪಾಧ್ಯಕ್ಷ ಶ್ರೀಪಾದ ಬಿಚ್ಚುಗತ್ತಿ ಕೆರೆಯ ಇತಿಹಾಸದ ಬಗ್ಗೆ ವಿವರ ನೀಡಿ, ಆಚರಣೆಗಳು ಕೇವಲ ಆಚರಣೆಗಷ್ಟೆ ಸೀಮಿತವಾಗದೆ ಜೀವನದ ಮೂಲಭೂತ ಅವಶ್ಯಕತೆಗಳಲ್ಲಿ ಒಂದಾದ ಜಲಸಂರಕ್ಷಣೆ, ಜಲ ರಕ್ಷಣೆಗೆ ಪೂರಕವಾದ ಅರಣ್ಯ ರಕ್ಷಣೆಗೆ ಎಲ್ಲರೂ ಮುಂದಾಗಬೇಕು ಎಂದರು.

Also read: ರಾಮೇಶ್ವರಂ ಕೆಫೆ ಬ್ಲಾಸ್ಟ್ ಪ್ರಕರಣ | ಆರೋಪಿಗಳು ಶಿವಮೊಗ್ಗದ ತೀರ್ಥಹಳ್ಳಿ ಮೂಲದವರು!?
ವಕೀಲ ನಾಗಪ್ಪ ಮಾತನಾಡಿ, ಜೀವಜಲದ ರಕ್ಷಣೆಗೆ ಮುಂದಾಗದಿದ್ದರೆ ಶೀಘ್ರದಲ್ಲೇ ಜಲಕ್ಷಾಮ ಎದುರಿಸ ಬೇಕಾದಂತಹ ಸ್ಥಿತಿ ಬಂದೆರಗುತ್ತದೆ. ಇರುವ ಅರಣ್ಯ ರಕ್ಷಣೆಯ ಜೊತೆಗೆ ಅವಕಾಶವಿದ್ದಲ್ಲಿ ಗಿಡ ನೆಡಿ ಎಂದರು.

ಕೆರೆಪೂಜೆಯನ್ನು ಪೂಜಾರಿ ಇಂದೂಧರಸ್ವಾಮಿ ನೆರವೇರಿಸಿದರು. ಗ್ರಾಮ ಸಮಿತಿ ಅಧ್ಯಕ್ಷ ಶಿವರಾಮಪ್ಪ, ಗ್ರಾಮ ಪ್ರಮುಖ ನೇಮರಾಜ, ಉಮೇಶ್, ಕೃಷ್ಣಮೂರ್ತಿ, ಶೇಷಪ್ಪ, ಎ.ಡಿ.ಬಸವರಾಜ್, ಎಸ್.ಟಿ.ಮಹದೇವಪ್ಪ, ಕುಬೇರಪ್ಪ, ಭಾಗ್ಯಮ್ಮ ಸೊರಬ ಇನ್ನೂ ಅನೇಕ ಗ್ರಾಮಸ್ಥರು ಪಾಲ್ಗೊಂಡರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post