ಕಲ್ಪ ಮೀಡಿಯಾ ಹೌಸ್
ಸೊರಬ: ಮುಂಚೂಣಿ ಕಾರ್ಯ ಕರ್ತರ ಸಾಲಿನಲ್ಲಿರುವ ಪತ್ರಕರ್ತರು ಕೊರೋನಾ ಲಸಿಕೆ ಪಡೆಯಲು ಸಹ ಶಾಸಕರು ಮಧ್ಯೆ ಪ್ರವೇಶಸಿಬೇಕಾದ ಅನಿವಾರ್ಯತೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಇಂದು ನಿರ್ಮಾಣವಾಯಿತು.
2 ರಾಜ್ಯದಲ್ಲಿ 18ರಿಂದ 44 ವರ್ಷ – ವಯೋಮಾನದವರಲ್ಲಿ ಮುಂಚೂಣಿ ಕಾರ್ಯಕರ್ತರು ಮತ್ತು ಆದ್ಯತ ಗುಂಪುಗಳನ್ನು ಗುರುತಿಸಿ ಕೊರೋನಾ ಲಸಿಕೆ ನೀಡಬೇಕು ಎಂದು ಆರೋಗ್ಯ ಇಲಾಖೆ ಆದೇಶ ಹೊರಡಿಸಿದ ಹಿನ್ನೆಲೆ ಯಲ್ಲಿ ಕೊರೋನಾ ಲಸಿಕಾ ಕೇಂದ್ರಕ್ಕೆ ಪತ್ರಕರ್ತರು ಬೆಳಗ್ಗೆ 9ರಿಂದ ಕಾಯುತ್ತಿದ್ದರು. ಈ ವೇಳೆ ಕೊರೋನಾ ಲಸಿಕಾ ಕೇಂದ್ರದಲ್ಲಿನ ಸಿಬ್ಬಂದಿ ಪತ್ರಕರ್ತರನ್ನು • ಕಡೆಗಣಿಸಿ, ಇತರೆ ಇಲಾಖೆಯವರಿಗೆ ಮೊದಲ ಆದ್ಯತೆಯಂತೆ ಲಸಿಕೆ ನೀಡಲಾಗುವುದು, ಇದು ತಾಲ್ಲೂಕು – ಆರೋಗ್ಯಾಧಿಕಾರಿಗಳ ಆದೇಶವಾಗಿದೆ ಎಂದು ಬೇಜಾವಾಬ್ದಾರಿಯಿಂದ ವರ್ತಿಸಿದರು.
ಈ ಬಗ್ಗೆ ಸ್ಥಳೀಯ ತಾಲ್ಲೂಕು ಆರೋಗ್ಯಾಧಿಕಾರಿಗಳ ಗಮನಕ್ಕೆ ತರಲು ದೂರವಾಣಿ ಮೂಲಕ ಪ್ರಯತ್ನಿಸಿದರೆ, ಕರೆ ಸ್ವೀಕರಿಸಲಿಲ್ಲ, ಇದರಿಂದಾಗಿ ಆಸ್ಪತ್ರೆಯ ಡೆಡಿಕೇಟೆಡ್ ಕೋವಿಡ್ ಹೆಲ್ತ್ಕೇರ್ ಪರಿಶೀಲನೆಗೆ ಆಗಮಿಸಿದ ಶಾಸಕ ಎಸ್. ಕುಮಾರ್ ಬಂಗಾರಪ್ಪ ಅವರಿಗೆ ನಡೆದ ಘಟನೆಯನ್ನು ತಾಲೂಕು ಪತ್ರಕರ್ತರ ಸಂಘದ ಉಪಾಧ್ಯಕ್ಷ ಚಂದ್ರಪ್ಪ ತವನಂದಿ ವಿವರಿಸಿದರು.
ಕೂಡಲೇ ಶಾಸಕರು, ಜೀವದ ಹಂಗು ತೊರೆದು ಹಗಲು ರಾತ್ರಿ ಎನ್ನದೇ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರ ಯೋಗಕ್ಷೇಮವೂ ಸಹ ಅತಿ ಮುಖ್ಯ. ಪತ್ರಕರ್ತರ ಸಮಯ, ಅಮೂಲ್ಯವಾದದ್ದು, ಕೂಡಲೇಪತ್ರಕರ್ತರಿಗೆ ಲಸಿಕೆ ನೀಡುವಂತೆ ಸ್ಥಳದಲ್ಲಿದ್ದ ತಾಲ್ಲೂಕು ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು.
ಒಟ್ಟಾರೆ ಪತ್ರಕರ್ತರು ಕೊರೋನಾ ಲಸಿಕೆ ಪಡೆಯಲು ಮುಂಚೂಣಿ ಸಮೂಹಕ್ಕೆ ಸರ್ಕಾರವೇ ಮೊದಲ ಆದ್ಯತೆ ನೀಡಿದರೂ ಸಹ ಕರೋನಾ ಲಸಿಕಾ ಕೇಂದ್ರದಲ್ಲಿರುವ ಸಿಬ್ಬಂದಿಗಳ ನರ್ತನ ಮಾತ್ರ ಎಂಥವರನ್ನೂ ಕೆರಳಿಸು ತ್ತದೆ. ಜವಾಬ್ದಾರಿ ಸ್ಥಾನದಲ್ಲಿರುವವರ ಜೊತೆಗೆ ಈ ರೀತಿ ವರ್ತಿಸಿದರೆ, ಸಾಮಾನ್ಯ ಜನರೊಂದಿಗೆ ಇವರು ಸೌಜನ್ಯದಿಂದ ವರ್ತಿಸಲು ಸಾಧ್ಯವೇ ಎಂಬ ಪ್ರಶ್ನೆ ಮೂಡುವುದು ಖಂಡಿತ.
(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post