ಕಲ್ಪ ಮೀಡಿಯಾ ಹೌಸ್ | ಸೊರಬ |
12ನೆಯ ಶತಮಾನದಲ್ಲಿ ಸಮಾಜದಲ್ಲಿ ಜಾತಿ ವ್ಯವಸ್ಥೆಯ ಬಗ್ಗೆ ಕ್ರಾಂತಿಕಾರನ ಬದಲಾವಣೆ ತರಲು ಶ್ರಮಿಸಿದ ವಿಶ್ವಗುರು ಬಸವಣ್ಣನವರ ಫೋಟೋವನ್ನು ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಹಾಕಲು ಆದೇಶಿದಬೇಕು ಎಂದು ಸೊರಬ ತಾಲೂಕು ಶ್ರೀ ಬಸವೇಶ್ವರ ಪುತ್ಥಳಿ ನಿರ್ಮಾಣ ಸಮಿತಿ ಮನವಿ ಮಾಡಿದೆ.
ಈ ಕುರಿತಂತೆ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಪ್ರಮುಖರು, ಇಂದು ಬಸವಣ್ಣನವರ ಅನುಯಾಯಿಗಳು ಭಾರತದಲ್ಲಿ ಮಾತ್ರವಲ್ಲದೇ ಇಡೀ ವಿಶ್ವದಲ್ಲೇ ಆವರಿಸಿದ್ದಾರೆ. ಸರ್ಕಾರ ಇವರ ಭಾವಚಿತ್ರವನ್ನು ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಅಳವಡಿಸಬೇಕು ಎಂದು ಆದೇಶಿಸಿದ್ದರೂ ಕೆಲವು ಇಲಾಖೆಗಳ ಕಚೇರಿಗಳಲ್ಲಿ ಅವರ ಭಾವಚಿತ್ರವನ್ನು ಹಾಕಿರುವುದಿಲ್ಲ. ಆದಕಾರಣ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರವನ್ನು ಹಾಕಲು ಆದೇಶಿಸಬೇಕು ಎಂದು ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಮಿತಿಯ ಗೌರವಾಧ್ಯಕ್ಷ ಜಡೆಮಠದ ಡಾ. ಮಹಾಂತಸ್ವಾಮಿಗಳು ಹಾಗೂ ಅಮರೇಶ್ವರ ಸ್ವಾಮಿಗಳು, ಅಧ್ಯಕ್ಷ ಸಿ.ಪಿ. ಈರೇಶ್ ಗೌಡ , ಪ್ರಧಾನ ಕಾರ್ಯದರ್ಶಿ ಮಹೇಶ್ ಖಾರ್ವಿ, ನಾಗರಾಜ ಗುತ್ತಿ, ಮಂಜು, ಎಚ್. ಆನಂದ್, ಶಂಕರ್ ಶೇಟ್, ವಿನೋದ್ ವಾಲ್ಮೀಕಿ, ಗಂಗಾಧರ ಗೌಡ್ರು, ಮಲ್ಲೇಶ ಗೌಡ್ರು ಕುಂಸಿ, ನಾಗರಾಜ ಗೌಡ್ರು, ಕೀರ್ತಿರಾಜ್, ಸತೀಶ್ ಬೈಂದೂರು ಇತರರಿದ್ದರು.
(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post