ಕಲ್ಪ ಮೀಡಿಯಾ ಹೌಸ್ | ಸೊರಬ |
ಸಮೀಪದ ಬಸ್ತಿಕೊಪ್ಪ ಗ್ರಾಮ ಗಣಿಗಾರಿಕೆ ದುಷ್ಪರಿಣಾಮದಿಂದ ನಲುಗಿದ್ದು, ವೃಕ್ಷಲಕ್ಷ ಆಂದೋಲನ ಕರ್ನಾಟಕ ಹಾಗೂ ಪರಿಸರ ಜಾಗೃತಿ ಟ್ರಸ್ಟ್ ಸೊರಬ ಕಾಳಜಿ ವಹಿಸಿದ್ದ ಕಾರಣ ಇದೀಗ ಸಾಮಾನ್ಯ ಸ್ಥಿತಿಗೆ ಬಂದಿದೆ. ಅಲ್ಲಿನ ಸಾಮಾಜಿಕ, ಜನ, ಭೂಮಿ, ಕೃಷಿ, ಪರಿಸರದ ಆರೋಗ್ಯದ ಹಿನ್ನೆಲೆಯಲ್ಲಿ ಜೂ.30ರಂದು ಬಸ್ತಿಕೊಪ್ಪ ಗ್ರಾಮದಲ್ಲಿ ಗ್ರಾಮಾಭಿವೃದ್ಧಿ ಶಿಬಿರ ನಡೆಯಲಿದ್ದು, ಸೊರಬ ತಾಲ್ಲೂಕು ಪಂಚಾಯತ್ ನ ಜೀವವೈವಿಧ್ಯ ನಿರ್ವಹಣಾ ಸಮಿತಿ ಕಾರ್ಯಕ್ರಮ ಆಯೋಜಿಸಿದೆ.
ತಾಪಂ ಇಒ ಕುಮಾರ್ ಕಾರ್ಯಕ್ರಮ ಉದ್ಧೇಶಿಸಿ ಮಾತನಾಡಿ, ರಾಜ್ಯ ಜೀವವೈವಿಧ್ಯ ಮಂಡಳಿಯ ನಿಕಟಪೂರ್ವ ಅಧ್ಯಕ್ಷ ಅನಂತಹೆಗಡೆ ಅಶೀಸರ ನೇತೃತ್ವದಲ್ಲಿ ಕಾರ್ಯಕ್ರಮ ಜರುಗಲಿದ್ದು, ಜಿಪಂ ಸಿಒ ಆಗಮಿಸುತ್ತಾರೆ. ಅದೇರೀತಿ ಇನ್ನೂ ಅನೇಕ ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಳ್ಳುತ್ತಾರೆ. ಅಂದು ಅಲ್ಲಿನ ಶಾಲಾ ಆವರಣದಲ್ಲಿ ವನನಿರ್ಮಾಣ, ಗ್ರಾಮಸ್ಥರಿಗೆ ಸಸಿ ವಿತರಣೆ, ಆರೋಗ್ಯ ಶಿಬಿರ, ಕೃಷಿ, ತೋಟಗಾರಿಕೆ, ನೀರು, ಮಣ್ಣು ಸ್ಥಿತಿಗತಿಯ ವೀಕ್ಷಣೆ ಮತ್ತು ಪರೀಕ್ಷೆ, ರಸ್ತೆ, ಕುಡಿಯುವ ನೀರಿನ ಸೌಲಭ್ಯ ಒದಗಿಸಿಕೊಡಲು, ಕಾರ್ಯಕ್ರಮ ಯಶಸ್ವಿಯಾಗಲು ವ್ಯವಸ್ಥೆಯಾಗಬೇಕು ಎಂದು ವಿನಂತಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post