Tuesday, August 5, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ಜಿಲ್ಲೆ ಶಿವಮೊಗ್ಗ ಸೊರಬ

ಸೊರಬ: ಸಂಭ್ರಮ, ಸಡಗರದ ಭೂಮಿ ಹುಣ್ಣಿಮೆ ಸಂಪನ್ನ

October 10, 2022
in ಸೊರಬ
0 0
0
Share on facebookShare on TwitterWhatsapp
Read - 3 minutes

ಕಲ್ಪ ಮೀಡಿಯಾ ಹೌಸ್   |  ಸೊರಬ  |

ವರ್ಷದ ಆಶ್ವೀಜ ಮಾಸದ ಹುಣ್ಣಿಮೆಯಂದು ನಡೆಯುವ ಭೂಮಿ ಹುಣ್ಣಿಮೆ ಅಥವಾ ಸೀಗೆ ಹುಣ್ಣಿಮೆ ಚೊಚ್ಚಲ ಗರ್ಭಿಣಿಗೆ ಬಯಕೆ ತೀರಿಸುವ ಸಾಂಕೇತಿಕ ಆಚರಣೆಯಾಗಿದ್ದು, ಕೃಷಿ ಕುಟುಂಬಗಳು ಇಂದಿಗೂ ಇಂತಹ ಬಯಕೆ ತೀರಿಸುವ ಆಚರಣೆಗಳಿಂದ ಹಿಂದೆ ಸರಿದಿಲ್ಲ ಎಂಬುದಕ್ಕೆ ಭಾನುವಾರ ಭೂಮಣ್ಣಿ ಹಬ್ಬ ತಾಲ್ಲೂಕಿನ ಎಲ್ಲೆಡೆ ಸಂಭ್ರಮ ಸಡಗರದಿಂದ ಜರುಗಿದ್ದು ಸಾಕ್ಷಿಯಾಗಿದೆ.

ಮಲೆನಾಡ ಭಾಗದಲ್ಲಿ ದೀವರು ಅಥವಾ ಒಕ್ಕಲಿಗ ಸಮುದಾಯದವರು ಇರುವೆಡೆ ಭೂಮಿ ಹುಣ್ಣಿಮೆ ವಿಶೇಷವಾಗಿರುತ್ತದೆ. ಗರ್ಭಿಣಿಯ ಬಯಕೆ ತೀರಿಸುವ ತಿನಿಸು ತುಂಬಲು ಅಗತ್ಯವಿರುವ ಭೂಮಣ್ಣಿ ಬುಟ್ಟಿಗಳ ತಯಾರಿ ಬಳಿಕ ಹಬ್ಬದ ಹಿಂದಿನ ದಿನ ನಡುರಾತ್ರಿ ಅಥವಾ ಬೆಳಗಿನ ಮೊದಲ ಜಾವದಲ್ಲೆ ಎದ್ದು ಬಯಕೆ ತೀರಿಸುವ ಆಹಾರ ಅಥವಾ ಚರಗು ಸಿದ್ಧಗೊಳಿಸಿ, ಸೂರ್ಯೋದಯಕ್ಕೂ ಮೊದಲು, ಕೆಲವರು ಸೂರ್ಯೋದಯದ ಬಳಿಕ ತಮ್ಮ ಕೃಷಿ ಭೂಮಿಗೆ ಚರಗು ಅಥವಾ ಎಡೆ ಅರ್ಪಿಸುವ ಕಾಯಕ ಇಂದಿಗೂ ಹಸಿರಾಗಿಯೆ ಇದೆ.
ಗ್ರಾಮಾಂತರ ಪ್ರದೇಶದಲ್ಲಿ ಸಿಗುವ, ತಿನ್ನಲು ಯೋಗ್ಯವಾದ ಬಾಳೆಕಾಯಿ, ಬಸಳೆ ಸೊಪ್ಪು ಹೊರತುಪಡಿಸಿ ಇನ್ನುಳಿದ ಎಲ್ಲ ರೀತಿ ಸೊಪ್ಪು, ತರಕಾರಿ ಬೇಯಿಸಿ ಭೂಮಿ ತಾಯಿಗೆ ಅರ್ಪಿಸುವ ಪದ್ಧತಿ ಬೆಳೆಸಿಕೊಂಡು ಬಂದಿದ್ದು, ಅಮಟೆಕಾಯಿ, ಸಿಹಿ ಕುಂಬಳ, ಹಾಲು ಕುಂಬಳ, ಸೌತೆ ಕಾಯಿ, ಕುಂಬಳಕಾಯಿಗಳನ್ನು ತೀರಾ ಅಗತ್ಯವಾಗಿ ಬಳಸುತ್ತಾರೆ. ಚರಗನ್ನು ಇಡಕಲು ಮುಂದಿಟ್ಟು ಪೂಜಿಸಿ ಬಳಿಕ ಜಮೀನಿಗೆ ಭೂಮಣ್ಣಿ ಬುಟ್ಟಿಯಲ್ಲಿ ತುಂಬಿ ಹೊಲ, ಗದ್ದೆ, ತೋಟಗಳಿಗೆ ತೆರಳುತ್ತಾರೆ. ಅಲ್ಲಿ ಬತ್ತದ ಎರಡು ಸಸಿಗಳನ್ನು ಒಂದಾಗಿ ಸೇರಿಸಿ ಕಡ್ಲಾಡಿ, ಮಡ್ಲಾಡಿ ಇಟ್ಟು ಹಸಿರು ಕಣ ಅಥವಾ ಸೀರೆ ಇರಿಸಿ ಪೂಜೆಸುತ್ತಾರೆ. ಒಬ್ಬ ಹೆಣ್ಣು ಮಗಳ ಸೀಮಂತದ ಆಚರಣೆ ಹೇಗೆ ನಡೆಯುತ್ತದೆಯೊ ಅದೇ ರೀತಿ ಇಲ್ಲಿಯೂ ನಡೆಸಲಾಗುತ್ತದೆ. ಬಳಿಕ ತಂದ ಚರಗಲ್ಲಿ ಎರಡು, ಮೂರು ಕಡೆ ಎಡೆ ಇಟ್ಟು ಕಾಗೆ ಅಥವಾ ಯಾವುದೇ ಪಕ್ಷಿ ಕರೆದು ಅವು ತಿಂದ ಬಳಿಕ ಭೂಮಿಗೆ ಹಚ್ಚಂಬ್ಲಿ, ಧಾರ ಹೀರೆ ಮುಚ್ಕಂಡ್ ಉಣ್ಣೆ ಭೂಮ್ಕ್ಯವ್ವ..ಹೋ..ಹೊ..ಹೊ..ಹೋ.. ಎನ್ನುತ್ತ ಚರಗು ಬೀರುತ್ತಾರೆ. ನಂತರ ಬೋಜನದ ಸಿದ್ಧತೆ ನಡೆಯುತ್ತದೆ. ಕಾಗೆ ಬಯಸಿ ತಿಂದಿದ್ದನ್ನು ತಮ್ಮ ಪಿತೃಗಳ ಬಯಕೆಯ ಆಹಾರ ಎಂದು ಬಗೆವ ಕೃಷಿಕರು ಕಡುಬನ್ನು ಜಮೀನಿನಲ್ಲಿ ಹುಗಿದಿಡುತ್ತಾರೆ. ಇದೇ ಕಡುಬನ್ನು ಬೆಳೆಯ ಕೊಯ್ಲಿನ ವೇಳೆ ಕುಡುಗೋಲು ಪೂಜೆಯ ಸಮಯದಲ್ಲಿ ತೆಗೆದು ಪ್ರಸಾಧವನ್ನಾಗಿ ಸ್ವೀಕರಿಸುವ ಪದ್ಧತಿಯೂ ಇದೆ. ಈ ಹೊತ್ತಿಗೆ ಕಡುಬು ಎಷ್ಟು ಹಾಳಾಗಿದೆಯೋ ಅಷ್ಟು ಬೆಳೆಯಲ್ಲಿ ಹುಲುಸು ಎಂದೆ ನಂಬುವ ಪದ್ಧತಿಯೂ ಇದೆ. ಭೋಜನಾ ನಂತರ ಹಂಗನೂಲು ಕೈಗೆ ಕಟ್ಟಿ ಗದ್ದೆ ಕೊಯ್ಲಿನ ವೇಳೆ ಹಂಗನೂಲು ಬಿಚ್ಚಿ ಪೂಜಿಸುವ ವಾಡಿಕೆಯೂ ಇದೆ. ಬಳಿಕ ತಮ್ಮ ಕೃಷಿ ಭೂಮಿಯಲ್ಲಿಯೇ ಅಂದಿನ ಬೋಜನ ಸವಿಯುವ ಕೃಷಿ ಕುಟುಂಬಗಳ ಅಂದಿನ ವಿಶೇಷ ಖಾದ್ಯ ಬಾಳೆ ಎಲೆ ಬಳಸಿ ಮಾಡುವ ಕೊಟ್ಟೆ ಕಡುಬು! ಉದ್ದು, ತೆಂಗಿನ ಕಾಯಿ, ಹಸಿಮೆಣಸು, ಅಕ್ಕಿ ಬಳಸಿದ ಕಾರದ ಮತ್ತು ಸಿಹಿ ಕುಂಬಳ, ಅಕ್ಕಿ ಬಳಸಿ ತಯಾರಿಸಿದ ಸಿಹಿ ಕಡುಬು ಅಂದು ತೀರಾ ಅಚ್ಚುಮೆಚ್ಚು. ಇದರೊಂದಿಗೆ ಹೋಳಿಗೆ, ಪಾಯಸ, ಕಜ್ಜಾಯ, ಬುತ್ತಿ, ವಿವಿಧ ತರಕಾರಿ ಬಳಸಿ ಮಾಡಿರುವ ಪಲ್ಯ, ಹಣ್ಣು ಮೆಣಸಿನ ಕಾಯಿ ಚಟ್ನಿ, ಮುಂತಾದವುಗಳ ಸ್ವಾಧಿಷ್ಟ, ಸತ್ವಭರಿತ ಅಡುಗೆ ಬಳಕೆಯಾಗುತ್ತದೆ.

Also read: ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳ ಹಿನ್ನೆಲೆ ದಕ ಜಿಲ್ಲಾ ಬಿಜೆಪಿ ಸಂಭ್ರಮಾಚರಣೆ
ಅರೆ ಮಲೆನಾಡು ಪ್ರದೇಶಗಳಲ್ಲಿ ತುಸು ಭಿನ್ನ ಆಚರಣೆ ಕಂಡುಬರುತ್ತಿದ್ದು, ಭೂಮಿ ಹುಣ್ಣಿಮೆ ಬದಲಿಗೆ ಸೀಗೆ ಹುಣ್ಣಿಮೆ ಎನ್ನುತ್ತಾರೆ. ಐದು ಧಾನ್ಯದ ಸಸಿಗಳನ್ನು ಬೇರು ಸಹಿತ ಇರಿಸಿಕೊಂಡು ಅದರೊಂದಿಗೆ ಐದು ಕಲ್ಲುಗಳಿಗೆ ಸುಣ್ಣ ಹಚ್ಚಿ ಪಾಂಡವರೆಂದು ಪೂಜಿಸುತ್ತಾರೆ, ಇಲ್ಲೂ ಕೂಡ ಕಡಬು ಹುಗಿಯಲಾಗುತ್ತದೆ, ವಿವಿಧ ಧಾನ್ಯಗಳ ರೊಟ್ಟಿ ಬಳಸಲಾಗುತ್ತದೆ. ಹುರಸಲು ಬೀರುವಾಗ ಹುಲಿಗ್ಯಾ…ಹುಲಿಗ್ಯಾ ಎಂದು ಕೂಗುತ್ತ ಭೂಮಿಗೆ ಅರ್ಪಿಸಲಾಗುತ್ತದೆ. ಇನ್ನುಳಿದಂತೆ ಮಲೆನಾಡಿನ ಕೆಲ ಪದ್ಧತಿಗಳು ಕೂಡ ಬಳಕೆಯಾಗುತ್ತವೆ.

ಗಮನಿಸುವ ಸಂಗತಿ:
ಕೋರಿಯಾ ದೇಶದಲ್ಲಿ ಭೂಮಿಯ ಜೀವಾಣುಗಳನ್ನು ವೃದ್ಧಿ ಗೊಳಿಸಲು ಐಎಂಒ ಹೆಸರಿನ ಜೀವದ್ರಾವಣವನ್ನು ಬಳಸುತ್ತಾರೆ. ಈ ಜೀವದ್ರಾವಣ ಅಕ್ಕಿ ಮತ್ತು ಬೆಲ್ಲದಿಂದ ತಯಾರಾಗುತ್ತದೆ. ಈ ಭೂಮಿ ಹುಣ್ಣಿಮೆಯ ಚರಗು, ಭೂಮಿಯಲ್ಲಿ ಹುಗಿಯುವ ಕಡುಬು ಕೂಡ ಇಂತಹ ಜೀವಾಣುವನ್ನು ವೃದ್ಧಿಸಬಲ್ಲದೆ ಎಂಬುದು ಸಂಶೋಧನಾರ್ಹ ಸಂಗತಿ. ಹಾಗೂ ಮಳೆಗಾಲದ ಬಳಿಕ ಭೂಮಿಯಲ್ಲಿ ಕೃಷಿಗೆ ಪೂರಕವಾದ ಜೀವಾಣುಗಳು ಕೊರತೆಯಿರುತ್ತದೆ ಎಂಬುದನ್ನು ನೆನಪಿಸಿಕೊಳ್ಳಬೇಕಿದೆ.
ಶ್ರೀಪಾದ ಬಿಚ್ಚುಗತ್ತಿ, ಪರಿಸರ ಕಾಯಕರ್ತ

ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: Kannada News WebsiteKannadaNewsKannadaNewsLiveKannadaNewsOnlineKannadaWebsiteLatest News KannadaLocal NewsMalnad NewsNewsinKannadaNewsKannadaShimogaShivamoggaShivamogga NewsSorabaಮಲೆನಾಡು_ಸುದ್ಧಿಶಿವಮೊಗ್ಗ_ನ್ಯೂಸ್ಸೊರಬ
Previous Post

ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳ ಹಿನ್ನೆಲೆ ದಕ ಜಿಲ್ಲಾ ಬಿಜೆಪಿ ಸಂಭ್ರಮಾಚರಣೆ

Next Post

ಸಹಕಾರ ಮನೋಭಾವ ಹೊಂದಿದ್ದ ಗಣಪತಿ ಭಟ್ಟರು ಸರಳ, ಸಜ್ಜನಿಕೆಯ ವ್ಯಕ್ತಿ: ಶಿವಾನಂದ ದೀಕ್ಷಿತ್

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಸಹಕಾರ ಮನೋಭಾವ ಹೊಂದಿದ್ದ ಗಣಪತಿ ಭಟ್ಟರು ಸರಳ, ಸಜ್ಜನಿಕೆಯ ವ್ಯಕ್ತಿ: ಶಿವಾನಂದ ದೀಕ್ಷಿತ್

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

Representational File Photo Only

ಪ್ರಯಾಣಿಕರೇ ಗಮನಿಸಿ! ನಾಳೆಯಿಂದ ರಸ್ತೆಗಿಳಿಯಲ್ಲ KSRTC ಬಸ್ | ಯೋಚಿಸಿ ಜರ್ನಿ ಪ್ಲಾನ್ ಮಾಡಿ

August 4, 2025

ಕಲುಷಿತ ಭಾಷೆಯ ಶುದ್ಧೀಕರಣಕ್ಕೆ ಆದ್ಯತೆ: ರಾಘವೇಶ್ವರ ಶ್ರೀ

August 4, 2025

ನೂತನ ಶ್ರಮಿಕ ತಾತ್ಕಾಲಿಕ ವಸತಿ ಸಮುಚ್ಛಯಗಳ ಲೋಕಾರ್ಪಣೆ

August 4, 2025

ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಪಾಲಕರ ಪಾತ್ರ ಬಹುಮುಖ್ಯ: ಸಂಸದ ರಾಘವೇಂದ್ರ

August 4, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

Representational File Photo Only

ಪ್ರಯಾಣಿಕರೇ ಗಮನಿಸಿ! ನಾಳೆಯಿಂದ ರಸ್ತೆಗಿಳಿಯಲ್ಲ KSRTC ಬಸ್ | ಯೋಚಿಸಿ ಜರ್ನಿ ಪ್ಲಾನ್ ಮಾಡಿ

August 4, 2025

ಕಲುಷಿತ ಭಾಷೆಯ ಶುದ್ಧೀಕರಣಕ್ಕೆ ಆದ್ಯತೆ: ರಾಘವೇಶ್ವರ ಶ್ರೀ

August 4, 2025

ನೂತನ ಶ್ರಮಿಕ ತಾತ್ಕಾಲಿಕ ವಸತಿ ಸಮುಚ್ಛಯಗಳ ಲೋಕಾರ್ಪಣೆ

August 4, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!