No Result
View All Result
Bengaluru Sparsh Hospital Hennur Completes One Year
English Articles

When Patients Travel for Hope: How Bengaluru Is Becoming a Destination for Complex Transplant Care

by kalpa News
September 4, 2026
0

Kalpa Media House  |  Bengaluru  | Patients from different parts of India and abroad are increasingly travelling to Bengaluru in...

Read moreDetails
Railway Board hubballi-rameswaram-train-extended-9-trip

Railway Board Hubballi–Rameswaram Special Express Services Extended

September 3, 2026
Indian Railways Nepalganj Bahraich Line Upgrade 730 Crore

Indian Railways Boosts Nepal Border Connectivity With ₹730 Crore Bahraich Rail Project

September 1, 2026
RPF Mysuru Railway Theft Lost Mobile Recovered copy

RPF Mysuru Cracks Railway Property Theft, Recovers Passenger’s Lost Mobile Phone

August 31, 2026
Shikaripura National Sports Day In Kumadvathi Central School copy

KRCS Shikaripura Celebrates National Sports Day with Fervour

August 30, 2026
  • Advertise With Us
  • Grievances
  • About Us
  • Contact Us
Friday, September 4, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಶಿವಮೊಗ್ಗ ಸೊರಬ

ಸೊರಬ: ಸಂಭ್ರಮ, ಸಡಗರದ ಭೂಮಿ ಹುಣ್ಣಿಮೆ ಸಂಪನ್ನ

kalpa News by kalpa News
October 10, 2022
in ಸೊರಬ
0
ಸೊರಬ: ಸಂಭ್ರಮ, ಸಡಗರದ ಭೂಮಿ ಹುಣ್ಣಿಮೆ ಸಂಪನ್ನ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್   |  ಸೊರಬ  |

ವರ್ಷದ ಆಶ್ವೀಜ ಮಾಸದ ಹುಣ್ಣಿಮೆಯಂದು ನಡೆಯುವ ಭೂಮಿ ಹುಣ್ಣಿಮೆ ಅಥವಾ ಸೀಗೆ ಹುಣ್ಣಿಮೆ ಚೊಚ್ಚಲ ಗರ್ಭಿಣಿಗೆ ಬಯಕೆ ತೀರಿಸುವ ಸಾಂಕೇತಿಕ ಆಚರಣೆಯಾಗಿದ್ದು, ಕೃಷಿ ಕುಟುಂಬಗಳು ಇಂದಿಗೂ ಇಂತಹ ಬಯಕೆ ತೀರಿಸುವ ಆಚರಣೆಗಳಿಂದ ಹಿಂದೆ ಸರಿದಿಲ್ಲ ಎಂಬುದಕ್ಕೆ ಭಾನುವಾರ ಭೂಮಣ್ಣಿ ಹಬ್ಬ ತಾಲ್ಲೂಕಿನ ಎಲ್ಲೆಡೆ ಸಂಭ್ರಮ ಸಡಗರದಿಂದ ಜರುಗಿದ್ದು ಸಾಕ್ಷಿಯಾಗಿದೆ.

ಮಲೆನಾಡ ಭಾಗದಲ್ಲಿ ದೀವರು ಅಥವಾ ಒಕ್ಕಲಿಗ ಸಮುದಾಯದವರು ಇರುವೆಡೆ ಭೂಮಿ ಹುಣ್ಣಿಮೆ ವಿಶೇಷವಾಗಿರುತ್ತದೆ. ಗರ್ಭಿಣಿಯ ಬಯಕೆ ತೀರಿಸುವ ತಿನಿಸು ತುಂಬಲು ಅಗತ್ಯವಿರುವ ಭೂಮಣ್ಣಿ ಬುಟ್ಟಿಗಳ ತಯಾರಿ ಬಳಿಕ ಹಬ್ಬದ ಹಿಂದಿನ ದಿನ ನಡುರಾತ್ರಿ ಅಥವಾ ಬೆಳಗಿನ ಮೊದಲ ಜಾವದಲ್ಲೆ ಎದ್ದು ಬಯಕೆ ತೀರಿಸುವ ಆಹಾರ ಅಥವಾ ಚರಗು ಸಿದ್ಧಗೊಳಿಸಿ, ಸೂರ್ಯೋದಯಕ್ಕೂ ಮೊದಲು, ಕೆಲವರು ಸೂರ್ಯೋದಯದ ಬಳಿಕ ತಮ್ಮ ಕೃಷಿ ಭೂಮಿಗೆ ಚರಗು ಅಥವಾ ಎಡೆ ಅರ್ಪಿಸುವ ಕಾಯಕ ಇಂದಿಗೂ ಹಸಿರಾಗಿಯೆ ಇದೆ.
ಗ್ರಾಮಾಂತರ ಪ್ರದೇಶದಲ್ಲಿ ಸಿಗುವ, ತಿನ್ನಲು ಯೋಗ್ಯವಾದ ಬಾಳೆಕಾಯಿ, ಬಸಳೆ ಸೊಪ್ಪು ಹೊರತುಪಡಿಸಿ ಇನ್ನುಳಿದ ಎಲ್ಲ ರೀತಿ ಸೊಪ್ಪು, ತರಕಾರಿ ಬೇಯಿಸಿ ಭೂಮಿ ತಾಯಿಗೆ ಅರ್ಪಿಸುವ ಪದ್ಧತಿ ಬೆಳೆಸಿಕೊಂಡು ಬಂದಿದ್ದು, ಅಮಟೆಕಾಯಿ, ಸಿಹಿ ಕುಂಬಳ, ಹಾಲು ಕುಂಬಳ, ಸೌತೆ ಕಾಯಿ, ಕುಂಬಳಕಾಯಿಗಳನ್ನು ತೀರಾ ಅಗತ್ಯವಾಗಿ ಬಳಸುತ್ತಾರೆ. ಚರಗನ್ನು ಇಡಕಲು ಮುಂದಿಟ್ಟು ಪೂಜಿಸಿ ಬಳಿಕ ಜಮೀನಿಗೆ ಭೂಮಣ್ಣಿ ಬುಟ್ಟಿಯಲ್ಲಿ ತುಂಬಿ ಹೊಲ, ಗದ್ದೆ, ತೋಟಗಳಿಗೆ ತೆರಳುತ್ತಾರೆ. ಅಲ್ಲಿ ಬತ್ತದ ಎರಡು ಸಸಿಗಳನ್ನು ಒಂದಾಗಿ ಸೇರಿಸಿ ಕಡ್ಲಾಡಿ, ಮಡ್ಲಾಡಿ ಇಟ್ಟು ಹಸಿರು ಕಣ ಅಥವಾ ಸೀರೆ ಇರಿಸಿ ಪೂಜೆಸುತ್ತಾರೆ. ಒಬ್ಬ ಹೆಣ್ಣು ಮಗಳ ಸೀಮಂತದ ಆಚರಣೆ ಹೇಗೆ ನಡೆಯುತ್ತದೆಯೊ ಅದೇ ರೀತಿ ಇಲ್ಲಿಯೂ ನಡೆಸಲಾಗುತ್ತದೆ. ಬಳಿಕ ತಂದ ಚರಗಲ್ಲಿ ಎರಡು, ಮೂರು ಕಡೆ ಎಡೆ ಇಟ್ಟು ಕಾಗೆ ಅಥವಾ ಯಾವುದೇ ಪಕ್ಷಿ ಕರೆದು ಅವು ತಿಂದ ಬಳಿಕ ಭೂಮಿಗೆ ಹಚ್ಚಂಬ್ಲಿ, ಧಾರ ಹೀರೆ ಮುಚ್ಕಂಡ್ ಉಣ್ಣೆ ಭೂಮ್ಕ್ಯವ್ವ..ಹೋ..ಹೊ..ಹೊ..ಹೋ.. ಎನ್ನುತ್ತ ಚರಗು ಬೀರುತ್ತಾರೆ. ನಂತರ ಬೋಜನದ ಸಿದ್ಧತೆ ನಡೆಯುತ್ತದೆ. ಕಾಗೆ ಬಯಸಿ ತಿಂದಿದ್ದನ್ನು ತಮ್ಮ ಪಿತೃಗಳ ಬಯಕೆಯ ಆಹಾರ ಎಂದು ಬಗೆವ ಕೃಷಿಕರು ಕಡುಬನ್ನು ಜಮೀನಿನಲ್ಲಿ ಹುಗಿದಿಡುತ್ತಾರೆ. ಇದೇ ಕಡುಬನ್ನು ಬೆಳೆಯ ಕೊಯ್ಲಿನ ವೇಳೆ ಕುಡುಗೋಲು ಪೂಜೆಯ ಸಮಯದಲ್ಲಿ ತೆಗೆದು ಪ್ರಸಾಧವನ್ನಾಗಿ ಸ್ವೀಕರಿಸುವ ಪದ್ಧತಿಯೂ ಇದೆ. ಈ ಹೊತ್ತಿಗೆ ಕಡುಬು ಎಷ್ಟು ಹಾಳಾಗಿದೆಯೋ ಅಷ್ಟು ಬೆಳೆಯಲ್ಲಿ ಹುಲುಸು ಎಂದೆ ನಂಬುವ ಪದ್ಧತಿಯೂ ಇದೆ. ಭೋಜನಾ ನಂತರ ಹಂಗನೂಲು ಕೈಗೆ ಕಟ್ಟಿ ಗದ್ದೆ ಕೊಯ್ಲಿನ ವೇಳೆ ಹಂಗನೂಲು ಬಿಚ್ಚಿ ಪೂಜಿಸುವ ವಾಡಿಕೆಯೂ ಇದೆ. ಬಳಿಕ ತಮ್ಮ ಕೃಷಿ ಭೂಮಿಯಲ್ಲಿಯೇ ಅಂದಿನ ಬೋಜನ ಸವಿಯುವ ಕೃಷಿ ಕುಟುಂಬಗಳ ಅಂದಿನ ವಿಶೇಷ ಖಾದ್ಯ ಬಾಳೆ ಎಲೆ ಬಳಸಿ ಮಾಡುವ ಕೊಟ್ಟೆ ಕಡುಬು! ಉದ್ದು, ತೆಂಗಿನ ಕಾಯಿ, ಹಸಿಮೆಣಸು, ಅಕ್ಕಿ ಬಳಸಿದ ಕಾರದ ಮತ್ತು ಸಿಹಿ ಕುಂಬಳ, ಅಕ್ಕಿ ಬಳಸಿ ತಯಾರಿಸಿದ ಸಿಹಿ ಕಡುಬು ಅಂದು ತೀರಾ ಅಚ್ಚುಮೆಚ್ಚು. ಇದರೊಂದಿಗೆ ಹೋಳಿಗೆ, ಪಾಯಸ, ಕಜ್ಜಾಯ, ಬುತ್ತಿ, ವಿವಿಧ ತರಕಾರಿ ಬಳಸಿ ಮಾಡಿರುವ ಪಲ್ಯ, ಹಣ್ಣು ಮೆಣಸಿನ ಕಾಯಿ ಚಟ್ನಿ, ಮುಂತಾದವುಗಳ ಸ್ವಾಧಿಷ್ಟ, ಸತ್ವಭರಿತ ಅಡುಗೆ ಬಳಕೆಯಾಗುತ್ತದೆ.

Also read: ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳ ಹಿನ್ನೆಲೆ ದಕ ಜಿಲ್ಲಾ ಬಿಜೆಪಿ ಸಂಭ್ರಮಾಚರಣೆ
ಅರೆ ಮಲೆನಾಡು ಪ್ರದೇಶಗಳಲ್ಲಿ ತುಸು ಭಿನ್ನ ಆಚರಣೆ ಕಂಡುಬರುತ್ತಿದ್ದು, ಭೂಮಿ ಹುಣ್ಣಿಮೆ ಬದಲಿಗೆ ಸೀಗೆ ಹುಣ್ಣಿಮೆ ಎನ್ನುತ್ತಾರೆ. ಐದು ಧಾನ್ಯದ ಸಸಿಗಳನ್ನು ಬೇರು ಸಹಿತ ಇರಿಸಿಕೊಂಡು ಅದರೊಂದಿಗೆ ಐದು ಕಲ್ಲುಗಳಿಗೆ ಸುಣ್ಣ ಹಚ್ಚಿ ಪಾಂಡವರೆಂದು ಪೂಜಿಸುತ್ತಾರೆ, ಇಲ್ಲೂ ಕೂಡ ಕಡಬು ಹುಗಿಯಲಾಗುತ್ತದೆ, ವಿವಿಧ ಧಾನ್ಯಗಳ ರೊಟ್ಟಿ ಬಳಸಲಾಗುತ್ತದೆ. ಹುರಸಲು ಬೀರುವಾಗ ಹುಲಿಗ್ಯಾ…ಹುಲಿಗ್ಯಾ ಎಂದು ಕೂಗುತ್ತ ಭೂಮಿಗೆ ಅರ್ಪಿಸಲಾಗುತ್ತದೆ. ಇನ್ನುಳಿದಂತೆ ಮಲೆನಾಡಿನ ಕೆಲ ಪದ್ಧತಿಗಳು ಕೂಡ ಬಳಕೆಯಾಗುತ್ತವೆ.

ಗಮನಿಸುವ ಸಂಗತಿ:
ಕೋರಿಯಾ ದೇಶದಲ್ಲಿ ಭೂಮಿಯ ಜೀವಾಣುಗಳನ್ನು ವೃದ್ಧಿ ಗೊಳಿಸಲು ಐಎಂಒ ಹೆಸರಿನ ಜೀವದ್ರಾವಣವನ್ನು ಬಳಸುತ್ತಾರೆ. ಈ ಜೀವದ್ರಾವಣ ಅಕ್ಕಿ ಮತ್ತು ಬೆಲ್ಲದಿಂದ ತಯಾರಾಗುತ್ತದೆ. ಈ ಭೂಮಿ ಹುಣ್ಣಿಮೆಯ ಚರಗು, ಭೂಮಿಯಲ್ಲಿ ಹುಗಿಯುವ ಕಡುಬು ಕೂಡ ಇಂತಹ ಜೀವಾಣುವನ್ನು ವೃದ್ಧಿಸಬಲ್ಲದೆ ಎಂಬುದು ಸಂಶೋಧನಾರ್ಹ ಸಂಗತಿ. ಹಾಗೂ ಮಳೆಗಾಲದ ಬಳಿಕ ಭೂಮಿಯಲ್ಲಿ ಕೃಷಿಗೆ ಪೂರಕವಾದ ಜೀವಾಣುಗಳು ಕೊರತೆಯಿರುತ್ತದೆ ಎಂಬುದನ್ನು ನೆನಪಿಸಿಕೊಳ್ಳಬೇಕಿದೆ.
ಶ್ರೀಪಾದ ಬಿಚ್ಚುಗತ್ತಿ, ಪರಿಸರ ಕಾಯಕರ್ತ

ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: Kannada News WebsiteKannadaNewsKannadaNewsLiveKannadaNewsOnlineKannadaWebsiteLatest News KannadaLocal NewsMalnad NewsNewsinKannadaNewsKannadaShimogaShivamoggaShivamogga NewsSorabaಮಲೆನಾಡು_ಸುದ್ಧಿಶಿವಮೊಗ್ಗ_ನ್ಯೂಸ್ಸೊರಬ
Share212Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳ ಹಿನ್ನೆಲೆ ದಕ ಜಿಲ್ಲಾ ಬಿಜೆಪಿ ಸಂಭ್ರಮಾಚರಣೆ

Next Post

ಸಹಕಾರ ಮನೋಭಾವ ಹೊಂದಿದ್ದ ಗಣಪತಿ ಭಟ್ಟರು ಸರಳ, ಸಜ್ಜನಿಕೆಯ ವ್ಯಕ್ತಿ: ಶಿವಾನಂದ ದೀಕ್ಷಿತ್

kalpa News

kalpa News

Next Post
ಸಹಕಾರ ಮನೋಭಾವ ಹೊಂದಿದ್ದ ಗಣಪತಿ ಭಟ್ಟರು ಸರಳ, ಸಜ್ಜನಿಕೆಯ ವ್ಯಕ್ತಿ: ಶಿವಾನಂದ ದೀಕ್ಷಿತ್

ಸಹಕಾರ ಮನೋಭಾವ ಹೊಂದಿದ್ದ ಗಣಪತಿ ಭಟ್ಟರು ಸರಳ, ಸಜ್ಜನಿಕೆಯ ವ್ಯಕ್ತಿ: ಶಿವಾನಂದ ದೀಕ್ಷಿತ್

Leave a Reply Cancel reply

Your email address will not be published. Required fields are marked *

No Result
View All Result
Bengaluru Sparsh Hospital Hennur Completes One Year
English Articles

When Patients Travel for Hope: How Bengaluru Is Becoming a Destination for Complex Transplant Care

by kalpa News
September 4, 2026
0

Kalpa Media House  |  Bengaluru  | Patients from different parts of India and abroad are increasingly travelling to Bengaluru in...

Read moreDetails
Railway Board hubballi-rameswaram-train-extended-9-trip

Railway Board Hubballi–Rameswaram Special Express Services Extended

September 3, 2026
Indian Railways Nepalganj Bahraich Line Upgrade 730 Crore

Indian Railways Boosts Nepal Border Connectivity With ₹730 Crore Bahraich Rail Project

September 1, 2026
RPF Mysuru Railway Theft Lost Mobile Recovered copy

RPF Mysuru Cracks Railway Property Theft, Recovers Passenger’s Lost Mobile Phone

August 31, 2026
Shikaripura National Sports Day In Kumadvathi Central School copy

KRCS Shikaripura Celebrates National Sports Day with Fervour

August 30, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL