ಕಲ್ಪ ಮೀಡಿಯಾ ಹೌಸ್ | ಸೊರಬ |
ಕನ್ನಡ ಸಾಹಿತ್ಯ ಪರಿಷತ್ ಚಟುವಟಿಕೆಗಳು ಗ್ರಾಮೀಣ ಪ್ರದೇಶಗಳಲ್ಲಿ ಹಮ್ಮಿಕೊಳ್ಳುವ ಮೂಲಕ ಕನ್ನಡತನವನ್ನು ಇನ್ನಷ್ಟು ಗಟ್ಟಿಗೊಳಿಸಲು ಅವಕಾಶವಿದೆ ಎಂದು ಯಲಸಿ ಗ್ರಾಮಸಮಿತಿ ಅಧ್ಯಕ್ಷ ಬಿ. ಲೋಕೇಶ್ ಹೇಳಿದರು.
ತಾಲ್ಲೂಕು ಯಲಸಿ ಗ್ರಾಮದಲ್ಲಿ ಕಸಾಪ ಏರ್ಪಡಿಸಿದ್ದ ಬೆಳದಿಂಗಳ ಸಾಹಿತ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜನಪದ ಸಂಸ್ಕೃತಿ ಇನ್ನೂ ಹಳ್ಳಿಗಳಲ್ಲಿ ಜೀವಂತವಾಗಿದೆ. ಕಲಾವಿದರನ್ನು ಪ್ರೋತ್ಸಾಹಿಸುವ ಮನೋಭಾವ ಕೂಡ ನೈಜವಾಗಿದ್ದು ನಮ್ಮ ಗ್ರಾಮದಲ್ಲಿ ಬೆಳದಿಂಗಳ ಸಾಹಿತ್ಯ ಏರ್ಪಡಿಸಿದ್ದು ಸಂತಸದಾಯಕ ಸಂಗತಿ ಎಂದರು.
ಮುಖ್ಯ ಅತಿಥಿ ರಾಜು ಹಿರಿಯಾವಲಿ ಮಾತನಾಡಿ, ಒಂದು ಕಾಲದಲ್ಲಿ ಬಯಲುನಾಡಿನ ಕಥೆಯಾದ ಸಂಗ್ಯಬಾಳ್ಯ ನಾಟಕ ಮಲೆನಾಡಿನಲ್ಲಿ ಜನಪ್ರಿಯತೆ ಪಡೆದಿತ್ತು, ಇಂತಹ ನಾಟಕ ಪುನಃ ನಮ್ಮ ತಾಲ್ಲೂಕು ಹವ್ಯಾಸಿ ಕಲಾವಿದರಿಂದ ಅನಾವರಣಗೊಳ್ಳುತ್ತಿರುವುದು ಶ್ಲಾಘನೀಯ ಎಂದರು.
ಅತಿಥಿಗಳಾದ ಪರಶುರಾಮ ಸಣ್ಣಬೈಲ್, ಬಣ್ಣದಬಾಬು, ವಿ.ಜಾನಕಪ್ಪ, ಪ್ರಾಸ್ತಾವಿಕವಾಗಿ ಶ್ರೀಪಾದ ಬಿಚ್ಚುಗತ್ತಿ, ಆಶಯನುಡಿಗಳನ್ನು ಹೆಚ್.ಎಂ.ಪ್ರಶಾಂತ್, ರಂಗಕಲಾವಿದರ ಪರಿಚಯವನ್ನು ಸುಬ್ರಹ್ಮಣ್ಯ ಗುಡಿಗಾರ್ ಪ್ರಸ್ತುತಗೊಳಿಸಿದರು.
ನಾಡಿನ ಸಾಹಿತಿ ಚಂದ್ರಶೇಖರ ಕಂಬಾರರ ಕುರಿತು ಉಪನ್ಯಾಸಕ ವಿಜಯಕುಮಾರ್ ದಟ್ಟೇರ್ ಮಾತನಾಡಿದರು. ತಾಲ್ಲೂಕು ಕಸಾಪ ಅಧ್ಯಕ್ಷ ಷಣ್ಮುಖಾಚಾರ್ ಅಧ್ಯಕ್ಷತೆ ವಹಿಸಿದ್ದರು.
ಸಂಗ್ಯಾ – ಬಾಳ್ಯಾ ನಾಟಕ ತಂಡದ ಹಿಮ್ಮೇಳನದಲ್ಲಿ ಭಾಗವತರರಾಗಿ ಹೆಚ್.ಎಂ. ಪ್ರಶಾಂತ, ಸಾವಿತ್ರಿ, ರೋಹಿಣಿ ಕಕ್ಕರಸಿ, ರಾಘವೇಂದ್ರ, ಈರಪ್ಪ ಶಿಕ್ಷಕರು, ಪೂರ್ಣಪ್ರಜ್ಞ ಬೆಳೆಯೂರು, ಸಂದೇಶ್ ಮಳಲಗದ್ದೆ ಮುಮ್ಮೇಳದಲ್ಲಿ ರೇವಣಪ್ಪ ಬಿದರಗೇರಿ, ಹಷ೯ ಹೆಗಡೆ, ಸುಬ್ರಹ್ಮಣ್ಯ ಎಸ್ ಗುಡಿಗಾರ್, ರೇಣುಕಮ್ಮ ಕಪ್ಪಗಳಲೆ, ಗೋಪಾಲ ವಕೀಲ ಹೆಗ್ಗೋಡು, ಸುಶೀಲಮ್ಮ ಸೊರಬ, ಡಾಕಪ್ಪ ವಕೀಲರು, ಲಕ್ಷ್ಮಣಪ್ಪ ಶಿಕ್ಷಕರು ಪಾಲ್ಗೊಂಡು ಯಶಸ್ವಿ ಪ್ರದರ್ಶನ ನೀಡಿದರು.
ಕಸಾಪ ಬಳಗದ ಕೆ.ಲಿಂಗರಾಜಗೌಡ, ಮಂಚಿ ರಮೇಶ್, ವಿಶ್ವನಾಥ್ ಹೆಚ್ಚೆ ಸೇರಿದಂತೆ ಪದಾಧಿಕಾರಿಗಳು ಸದಸ್ಯರು, ಕೆಳದಿ ಸೀಮೆ ಭಾರತಿ ಕಲಾವಿದರ ತಂಡ, ಗ್ರಾಮಸ್ಥರಿದ್ದರು.
(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post