ಕಲ್ಪ ಮೀಡಿಯಾ ಹೌಸ್
ಸೊರಬ: ತಾಲ್ಲೂಕಿನ ಗಡಿ ಪ್ರದೇಶದಲ್ಲಿ ಕೊರೋನಾ ನಿಯಂತ್ರಣ ಪ್ರಯುಕ್ತ ಗಡಿ ಕಾಯಲು ಸಿಬ್ಬಂದಿಯನ್ನು ನೇಮಿಸಿದ್ದು, ಮಳೆ ಬೀಳುತ್ತಿರುವುದರಿಂದ ಮುಜುಗರ ಪಡುವಂತಾಗಿದೆ.
ಒಂದೆಡೆ ಮಳೆ, ಈ ಮಧ್ಯೆ ಹೇಗಾದ್ರೂ ಮಾಡಿ ಗಡಿ ದಾಟಲೆ ಬೇಕು ಎನ್ನುವ ಪಡ್ಡೆಗಳ ನಿಯಂತ್ರಣಕ್ಕೆ ಹರಸಾಹಸ ಪಡುವಂತಾಗಿದೆ. ಗಡಿ ಕಾಯುವವರಿಗೆ ಸಮಯಕ್ಕೆ ಸರಿಯಾಗಿ ಊಟೋಪಚಾರವೂ ಆಗಿರುವುದಿಲ್ಲ. ಹಸಿವೊಂದೆಡೆ ಹೀಗೆ ಲಕ್ಷ್ಮಣ ರೇಖೆ ದಾಟುವ ಕಾನೂನು ಮುರುಕರು, ಇಲ್ಲದ ಸುಳ್ಳು ನೆಪವೊಡ್ಡಿ ದಾಟುವ ಸುಳ್ಳು ಬುರುಕರಿಗೆ ಪೊಲೀಸ್ ಲಾಠಿ ಯ ರುಚಿಯೆ ಸೂಕ್ತವೇನೊ ಎಂದು ರೈತ ಪ್ರಮುಖ ಸೋಮಶೇಖರಯ್ಯ ಸುತ್ತೂರುಮಠ ಅಭಿಪ್ರಾಯ ಪಟ್ಟಿದ್ದಾರೆ.
ವಿಶೇಷವಾಗಿ ಬಯಲು ನಾಡು ಪ್ರದೇಶಗಳಿಗೆ ತಾಗಿಕೊಂಡಿರುವ ತಾಲ್ಲೂಕಿನ ಭಾರಂಗಿ, ಗೋಂದಿ ಮುಂತಾದ ಕಡೆ ಕೊರೋನಾ ತೀವ್ರತೆ ಯ ಅರಿವಿಲ್ಲದೆ ಬೇಕಾಬಿಟ್ಟಿ ಕಾನೂನು ಉಲ್ಲಂಘಿಸುತ್ತಿದ್ದಾರೆ. ಗಡಿ ಭದ್ರತೆಯಲ್ಲಿ ಸ್ಥಳೀಯರೆ ಇರುವುದರಿಂದ ಗಡಿ ಉಲ್ಲಂಘನೆ ತುಸು ಕಷ್ಡದಾಯಕ ಅದರ ಬದಲಿಗೆ ಪ್ಯಾರಾ ಮಿಲ್ಟ್ರಿ ರಕ್ಷಣೆ ಹಾಕುವುದು ಸೂಕ್ತ. ಜೊತೆಗೆ ಪ್ರಾಮಾಣಿಕ ವಾಗಿ ಕಾರ್ಯನಿರ್ವಹಿಸುತ್ತಿರುವ ಇಂತಹ ಕೋವಿಡ್ ವಾರಿಯರ್ಸ್ಗೆ ಸಾರ್ವಜನಿಕವಾಗಿ ಸಹಕರಿಸಬೇಕು. ಸಾಧ್ಯವಾದರೆ ನಾಗರೀಕರು ಬೆಳೆದ ಎಳನೀರು, ಹಣ್ಣು ಹಂಪಲು ನೀಡಿ ಗೌರವಿಸಿ. ಕಾನೂನು ಉಲ್ಲಂಘಿಸಬೇಡಿ ಎಂದಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post