ಕಲ್ಪ ಮೀಡಿಯಾ ಹೌಸ್ | ಸೊರಬ |
ಸಾಗರದಲ್ಲಿ ಭಜರಂಗದಳದ ಕಾರ್ಯಕರ್ತನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದವರ ವಿರುದ್ಧ ಕಾನೂನಾತ್ಮಕ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿ ಸೊರಬ ವಿಶ್ವ ಹಿಂದೂ ಪರಿಷತ್ ಭಜರಂಗದಳ ಪ್ರಖಂಡ ತಹಶೀಲ್ದಾರ್ಗೆ ಮನವಿ ಸಲ್ಲಿಸಿದೆ.
ಮಲೆನಾಡು ಪ್ರಾಂತ್ಯದಲ್ಲಿ ದಿನೇ ದಿನೇ ಅನ್ಯ ಕೋಮಿನವರಿಂದ ಮತಾಂಧ ಚಟುವಟಿಕೆಗಳು ಹೆಚ್ಚಾಗುತ್ತಿದ್ದು, ಸಾಗರದ ಭಜರಂಗದಳ ಸಹ ಸಂಚಾಲಕ ಸುನೀಲ್ ಎಂಬುವರ ಮೇಲೆ ನಡು ರಸ್ತೆಯಲ್ಲಿಯೇ ಅನ್ಯ ಕೋಮಿನ ವ್ಯಕ್ತಿಯಿಂದ ಮಾರಣಾಂತಿಕ ಹಲ್ಲೆ ಮಾಡಿರುವುದು ಖಂಡನೀಯ. ಹಾಗೂ ಇಂತಹ ಚಟುವಟಿಕೆಗಳು ಸೊರಬದಲ್ಲೂ ಘಟಿಸಬಹುದು. ಈ ಹಿನ್ನೆಲೆಯಲ್ಲಿ ಕಾನೂನಾತ್ಮಕವಾಗಿ ಹಾಗೂ ರಕ್ಷಣಾತ್ಮಕವಾಗಿ ಸಂಬಂಧಿಸಿದರಿಗೆ ಮಾರ್ಗದರ್ಶನ ಮಾಡಿ ಕಾನೂನು ಸುವ್ಯವಸ್ಥೆ ಹಾಗೂ ಕೋಮುಸೌಹಾರ್ಧತೆಯನ್ನು ಕಾಪಾಡಿ ಬಹು ಸಂಖ್ಯಾ ಹಿಂದೂ ಬಾಂಧವರಿಗೆ ರಕ್ಷಣೆ ನೀಡಬೇಕಾಗಿ ಸಂಘಟನೆ ಆಗ್ರಹಿಸಿದೆ.
Also read: ಪೊಲೀಸ್ ಅಧಿಕಾರಿಗಳ ಪದಕ ಪ್ರದಾನ ಸಮಾರಂಭದಲ್ಲಿ ತಂದೆ ಜೊತೆ ಮಿಂಚಿದ ಕಾಂತಾರ ಬೆಡಗಿ!
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
.
Discussion about this post