ಕಲ್ಪ ಮೀಡಿಯಾ ಹೌಸ್ | ಸೊರಬ |
ತಾಲೂಕಿನ ದುಗ್ಲಿ ಗ್ರಾಮದ ಶ್ರೀಮದ್ ರಂಭಾಪುರಿ ಶಾಖಾ ಶ್ರೀ ಗುರು ರೇವಣಸಿದ್ಧೇಶ್ವರ ಸುಕ್ಷೇತ್ರದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮನೋತ್ಸವದ ಪ್ರಯುಕ್ತ ಶ್ರೀ ಜಗದ್ಗುರು ರೇವಣಸಿದ್ಧೇಶ್ವರ ರಥೋತ್ಸವ, ಮುರುಘೇಂದ್ರ ಸ್ವಾಮಿಗಳವರ 6ನೇ ವರ್ಷದ ಪುಣ್ಯಾರಾಧನೆ. ಶ್ರೀಮಠದ 50ನೇ ವರ್ಷದ ಸುವರ್ಣ ಮಹೋತ್ಸವದ ಅಂಗವಾಗಿ ಲಿಂಗೈಕ್ಯ ಪೂಜ್ಯರ ಗದ್ದುಗೆ-ಸಭಾಭವನ-ರಥದ ಮನೆ ಉದ್ಘಾಟನೆ ಜರುಗುವುದು ಎಂದು ಶ್ರೀ ಮಠದ ಶ್ರೀ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಮಂಗಳವಾರ ಪಟ್ಟಣದ ಹೊಸಪೇಟೆ ಬಡಾವಣೆಯ ಗಿರಿಜಾ ಶಂಕರ ಸಭಾಭವನದಲ್ಲಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಶ್ರೀ ಮಠದಲ್ಲಿ ಮಾ.30ರಿಂದ ಏ.6ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಮಾ30ರಂದು ಬೆಳಗ್ಗೆ ಶ್ರೀ ಮಠದಲ್ಲಿ ಶ್ರೀ ವೀರಭದ್ರೇಶ್ವರ ಸ್ವಾಮಿ ಶಿಲಾಮೂರ್ತಿ ಹಾಗೂ ಲಿಂ. ಮುರುಘೇಂದ್ರ ಸ್ವಾಮಿಗಳವರ ಗದ್ದುಗೆ ಮೇಲೆ ಶಿಲಾಮೂರ್ತಿ ಪ್ರಾಣ ಪ್ರತಿಷ್ಠಾಪನೆ. ಮಾ. 31ರಂದು ಬೆಳಗ್ಗೆ ಶ್ರೀ ರೇವಣ ಸಿದ್ಧೇಶ್ವರರ ಪಲ್ಲಕ್ಕಿ ಉತ್ಸವ, ಬೆಳಗ್ಗೆ 9ಕ್ಕೆ ಕಾಳಸರ್ಪದೋಷ ನಿವಾರಣೆಗಾಗಿ ಸರ್ಪಶಾಂತಿ ಹೋಮ, ಸಂಜೆ ರಥೋತ್ಸವ ಹಾಗೂ ಮಹಾ ಮೃತ್ಯುಂಜಯ ಯಾಗ ಶಾಲೆ ಪ್ರವೇಶ ಮತ್ತು ಶಾಂತಿ ಪೂಜೆ ನಡೆಯಲಿದೆ ನಂತರ ರಾತ್ರಿ 9ಕ್ಕೆ ಭರತನಾಟ್ಯ ಪ್ರದರ್ಶನ ನಡೆಯಲಿದೆ ಎಂದರು.
ಏ.1ರಂದು ಒಂದು ಲಕ್ಷ ಮಹಾಮೃತ್ಯುಂಜಯ ಜಪಯಜ್ಞ ಸಂಜೆ ಜಾನಪದ ಜೋಗತಿ ನೃತ್ಯ ಹಾಸ್ಯ ಕಾರ್ಯಕ್ರಮ, ಏ. 2ರಂದು ಮಹಾಮೃತ್ಯುಂಜಯ ಜಪಯಜ್ಞ ಮತ್ತು ಧರ್ಮ ಸಮಾರಂಭ, ರಾತ್ರಿ ಗ್ರೂಪ್ ಡ್ಯಾನ್ಸ್, ಏ.3ರಂದು ಧರ್ಮ ಸಂಸ್ಕೃತಿ ಕುರಿತು ಜಿಂಚನ ಮಂಥನ ಸಮಾರಂಭ, ರಾತ್ರಿ ಹಾಸ್ಯ ಸಂಭ್ರಮ, ಏ.4ರಂದು ಶಿವಾದ್ವೇತ ಸಿದ್ಧಾಂತ ವಿಚಾರ ಚಿಂತನ ಸಮಾರಂಭ, ರಾತ್ರಿ ಜಾನಪದ ಸಂಭ್ರಮ, 5ರಂದು ಸಮಾಜೋಸಾಂಸ್ಕೃತಿಕ ಭಾವೈಕ್ಯತಾ ಸಮಾರಂಭ, ರಾತ್ರಿ 9ಕ್ಕೆ ಶಿವಮೊಗ್ಗ ಮತ್ತು ಕಾರವಾರ ಜಿಲ್ಲಾ ಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ನಡೆಯಲಿದೆ ಎಂದರು.
Also read: ರಾಜ್ಯದ ಇತಿಹಾಸದಲ್ಲೇ ದಾಖಲೆ ಪ್ರಮಾಣದಲ್ಲಿ ಹೆಚ್ಚಾದ ವಿದ್ಯುತ್ ಬೇಡಿಕೆ
ಏ.6ರಂದು ಬೆಳಗ್ಗೆ 11ಕ್ಕೆ ಶ್ರೀ ರೇವಣ ಸಿದ್ಧೇಶ್ವರ ಸ್ವಾಮೀಜಿಯವರ ದ್ವಾದಶ ಪಟ್ಟಾಧೀಕಾರ ಮಹೋತ್ಸವ ಮತ್ತು ಧರ್ಮ ಜಾಗೃತಿ ಸಮಾರಂಭ ಸಮಾರಂಭ ನಡೆಯಲಿದ್ದು, ಬಾಳೆಹೊನ್ನೂರು ರಂಭಾಪುರಿ ಪೀಠದ ಶ್ರೀಮದ್ ಪ್ರಸನ್ನ ರೇಣಿಕಾ ಡಾ. ವೀರಸೋಮೆಶ್ವರ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆಯಲಿದೆ. ಈ ನಡುವೆ ಏ.5ರಂದು ಉಚಿತ ಆರೋಗ್ಯ ತಪಾಸಣೆ, 6ರಂದು ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವ ಮತ್ತು ಅದ್ದೂರಿ ಸಂಗೀತ ಸೌರಭ ನಡೆಯಲಿದೆ. ಕಾರ್ಯಕ್ರಮಗಳಲ್ಲಿ ವಿವಿಧ ಪಕ್ಷಗಳ ಮುಖಂಡರು, ವಿವಿಧ ಮಠಾಧೀಶರು ಪಾಲ್ಗೊಳ್ಳಲಿದ್ದಾರೆ. ಹೆಚ್ಚಿನ ಮಾಹಿತಿಗೆ 8762087446 ಅಥವಾ 7019109487 ಮತ್ತು 8310859200ಗೆ ಸಂಪರ್ಕಿಸಬಹುದು ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಡಾ.ಎಚ್.ಇ. ಜ್ಞಾನೇಶ್, ವಿಜೇಂದ್ರಗೌಡ ತಲಗುಂದ, ಗುರುಪ್ರಸನ್ನಗೌಡ ಬಾಸೂರು, ಪ್ರಕಾಶ್ ಅಗಸನಹಳ್ಳಿ, ಚಂದ್ರಪ್ಪ ಗಂಗೊಳ್ಳಿ, ಜಗದೀಶಗೌಡ ತ್ಯಾವಗೋಡು, ಗಂಗಾಧರಗೌಡ ಗುಡುವಿ, ವಿಶ್ವನಾಥ ಗೌಡ, ಸಂತೀಶ್ ಗುಂಜನೂರು, ಚಂದ್ರಶೇಖರ ನಿಜಗುಣ, ಗಂಗಾಧರ, ನಾಗರಾಜ ಗುತ್ತಿ, ಸುರೇಂದ್ರಗೌಡ, ಡಿ. ಶಿವಯೋಗಿ, ಸಂದೀಪ ಯಲವಳ್ಳಿ, ವಿನಯ ಮಾವಲಿ, ರೇಣುಕಮ್ಮ ಗೌಳಿ, ಗುರುನಾಥ ಗೌಡ ಕಾಸರಗುಪ್ಪೆ ಸೇರಿದಂತೆ ಇತರರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post