ಕಲ್ಪ ಮೀಡಿಯಾ ಹೌಸ್ | ಸೊರಬ |
ತಾಲೂಕಿನ ಉರುಗನಹಳ್ಳಿ ಗ್ರಾಮದ ವಿ. ಧನಂಜಯ ಅವರ ಮನೆಯಲ್ಲಿ ವಿದ್ಯುತ್ ಶಾಕ್ ತಗುಲಿ ಅಪಾಯ ಸ್ಥಿತಿಯಲ್ಲಿದ್ದ ಧನುಷ್ ಎಂಬ ಬಾಲಕನ್ನು ಆತನ ಅಕ್ಕ ಪ್ರಾರ್ಥನ ರಕ್ಷಿಸಿ ಹಲವರ ಪ್ರಶಂಸೆಗೆ ಪಾತ್ರಳಾಗಿದ್ದಾಳೆ.
ಈ ಮಕ್ಕಳು ಉರುಗನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದು ಧನುಷ್ 3ನೇ ತರಗತಿ ಪ್ರಾರ್ಥನಾ 5ನೇ ತರಗತಿ ಓದುತ್ತಿದ್ದಾಳೆ.
ಘಟನೆ ಹಿನ್ನೆಲೆ:
ವಿ. ಧನಂಜಯ್ ಹಾಗೂ ನೀಲಾವತಿ ದಂಪತಿಗಳ ಪುತ್ರ ಧನುಷ್ಗೆ ಮನೆಯಲ್ಲಿ ಟಿವಿಗೆ ಅಳವಡಿಸಿದ ವೈರ್ ತಗುಲಿ ವಿದ್ಯುತ್ ಶಾಕ್ ಹೊಡೆದಿದ್ದು, ನರಳುತ್ತಿದ್ದ ತಮ್ಮನನ್ನು ನೋಡಿ ಓಡಿದ ಪ್ರಾರ್ಥನ ಆತನನ್ನು ಮುಟ್ಟದೆ ಅವನ ಅಂಗಿಯ ಕಾಲರ್ ಹಿಡಿದೆಳೆದು ಶಾಕ್ ತಪ್ಪಿಸಿದ್ದಾಳೆ. ಬಾಲಕನ ಕೈಗೆ ಶಾಕ್ ತಗುಲಿ ಸಣ್ಣಪುಟ್ಟ ಗಾಯಗಳಾಗಿ ಚಿಕಿತ್ಸೆ ಪಡೆದಿದ್ದಾನೆ.
ಸಮಯ ಪ್ರಜ್ಞೆ:
ಈಚೆಗಷ್ಟೆ ಶಾಲೆಯಲ್ಲಿ ಮಕ್ಕಳಿಗೆ ಅವಘಡಗಳ ಕುರಿತು ತಿಳಿಸುತ್ತ, ಆ ವೇಳೆ ಅನುಸರಿಸಬಹುದಾದ ಸುರಕ್ಷತೆ ಬಗ್ಗೆ ಶಿಕ್ಷಕರು ಜಾಗೃತಿ ಮೂಡಿಸಿದ್ದನ್ನ ಅನುಸರಿಸಿದ ಬಾಲಕಿ ಪ್ರಾಣ ಉಳಿಸಿದ್ದಾಳೆ. ಬಾಲಕೀಯ ಸಾಹಸಕ್ಕೆ ಹಲವರ ಪ್ರಶಂಸನೆಯ ಮಹಾಪೂರವೆ ಹರಿದಿದ್ದು, ಶೌರ್ಯ ಪ್ರಶಸ್ತಿಗೆ ಒತ್ತಾಯಿಸಿದ್ದಾರೆ.
ಮುನ್ನೆಚ್ಚರಿಕೆ:
ಮಕ್ಕಳಿಗೆ ಹೀಗೆ ಜಾಗೃತಿ ಮೂಡಿಸುವ ಮೂಲಕ ಅವಘಡಗಳಿಂದ ಪಾರಾಗಿದ್ದುದು ಹೆಮ್ಮೆಯ ಸಂಗತಿ, ಇದಕ್ಕೆ ಕಾರಣೀಕರ್ತರಾದ ಶಿಕ್ಷಕರು ಹಾಗೂ ಇನ್ನಿತರರಿಗೆ ನಾನು ಆಭಾರಿ. ಮನೆಯಲ್ಲಿ ಎಚ್ಚರ ತಪ್ಪದೆ ವಿದ್ಯುತ್ ಸಂಪರ್ಕದಲ್ಲಿ ಸುರಕ್ಷತೆ ಅನುಸರಿಸಬೇಕು. ತಜ್ಞರು ಶಿಫಾರಸ್ಸು ಮಾಡಿದ ಗುಣಮಟ್ಟದ ವೈರಿಂಗ್, ಸಮರ್ಪಕ ಗ್ರೌಂಡಿಂಗ್ ವ್ಯವಸ್ಥೆಯ ಬಗ್ಗೆ ಗಮನಹರಿಸಿ ವಿದ್ಯುತ್ ಅಳವಡಿಸಿಕೊಳ್ಳಬೇಕು ಎಂದು ಸಾರ್ವಜನಿಕರಿಗೆ ಮೆಸ್ಕಾಂ ಎಇಇ ಲೋಹಿತ್ ಮುನ್ನೆಚ್ಚರಿಕೆ ಸೂಚಿಸಿದ್ದಾರೆ.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post