No Result
View All Result
b-y-raghavendra-freedom-fighters-independence-day
English Articles

Remembering Freedom Fighters Is the Duty of Every Indian: MP B.Y. Raghavendra

by kalpa News
August 17, 2026
0

Kalpa Media House  | SHIKARIPURA  | Remembering the freedom fighters who fought against British rule, made immense sacrifices and secured...

Read moreDetails
Indriya - Krithi Shetty - Brand Ambassador

Indriya announces Krithi Shetty as Brand Ambassador for Southern Markets

August 14, 2026
Mysuru Ninada Griha Sangeet Concert On August 16th

Mysuru to Host Hindustani Classical Vocal Concert on August 16

August 11, 2026
Hubballi drucc meeting passenger friendly initiatives

41st DRUCC Meeting Held at Hubballi; Division Applauded for Passenger-Friendly Initiatives

August 10, 2026
World Padel League august 16 Scores Big Brand Support

World Padel League Secures Strong Brand Backing Ahead of Its Biggest Season Yet

August 8, 2026
  • Advertise With Us
  • Grievances
  • About Us
  • Contact Us
Saturday, August 22, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಅಂಕಣ ಸಚಿನ್ ಪಾರ್ಶ್ವನಾಥ್

ಜಗತ್ತನ್ನು ಅಹಿಂಸೆಯಿಂದ ಆಳಿದ ಮಹಾಪ್ರಭು ಭಗವಾನ್ ಮಹಾವೀರರ ಜನುಮ ದಿನ

ಏಪ್ರಿಲ್ 25 ಮಹಾವೀರ ಜಯಂತಿ

kalpa News by kalpa News
March 17, 2022
in ಸಚಿನ್ ಪಾರ್ಶ್ವನಾಥ್
0
Lord Mahaveera's Birthday

Lord Mahaveera's Birthday

Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್

ಸ್ವರ್ಗ ಸದೃಶ ಅರಮನೆ, ಅಲ್ಲಿ ಅಂದೇನೋ ಸಡಗರ. ಅರಮನೆಯ ಒಡತಿ ಗರ್ಭವತಿ ಆಗಿದ್ದರು. ಅಂದು ಪ್ರಸವದ ಸೂಚನೆ ಸಿಕ್ಕಿತ್ತು. ಎಲ್ಲೆಡೆಯೂ ಧಾವಂತ, ಸಂಭ್ರಮ. ಮುದ್ದಾದ ಗಂಡು ಮಗು, ಅನಂತ ಸಾಮ್ರಾಜ್ಯವನ್ನು ಆಳಲು ರಾಜ ಕುವರನ ಆಗಮನ. ದೇಶದ ತುಂಬೆಲ್ಲಾ ಹರ್ಷೋಲ್ಲಾಸ. ಅಂದು ಜಗತ್ತಿನ ಅಹಿಂಸೆಯ ದೇವರು ಭುವಿಗೆ ಬಂದಿದ್ದ. ಆ ಕಂದನ ಮೊದಲ ಉಸಿರ ಕೇಳಿ ಮೋಕ್ಷ ಪಡೆದವರು ಎಷ್ಟೋ? ಅದರ ಸನಿಹ ಬಯಸಿ ಹರಕೆ ಹೊತ್ತವರೆಷ್ಟೋ? ಮೊದಲ ದನಿಯಲಿ ಬೆರೆತು ಸನ್ಮಾರ್ಗ ಹಿಡಿದವರೆಷ್ಟೋ? ಸ್ವರ್ಣವರ್ಣದ ಚಂದದ ಕಂದ. ಎಷ್ಟು ಅಂದದ ಮಗು ಅಂದರೆ ಬೆಳಕಿನ ಕಿರಣಗಳಿಗೆ ಮಿನುಗುವ ವದನ, ಆ ವದನ ಒಂದು ಪ್ರಶಾಂತ ಸಾಗರದಂತೆ. ಅವನ ಚಂದವನ್ನು ಸವಿಯುವುದೇ ಒಂದು ಖುಷಿಯ ಸಂಗತಿ ಆಗಿತ್ತು.

ಕಂದನ ಮೊದಲ ದರ್ಶನ ಪಡೆಯಲು ದೇವತೆಗಳ ದಂಡು ಅರಮನೆಯ ಅಂಗಳದಲ್ಲಿ ನೆರೆದಿತ್ತು. ಎಲ್ಲೆಲ್ಲೂ ಪುಷ್ಪ ವೃಷ್ಠಿ, ದಿವ್ಯ ವಾದ್ಯಗಳ ನಿನಾದ. ಜಗತ್ತಿನ ಪ್ರತಿಯೊಂದು ಜೀವವೂ ಅಂದು ಮನದುಂಬಿ ನಿಂತಿತ್ತು. ಮಹಾಮಾತೆ ತ್ರಿಶಲಾ ದೇವಿಯ ಪುಣ್ಯಗರ್ಭದಲ್ಲಿ ಭಗವಾನರು ಜನ್ಮ ತಾಳಿದ್ದರು.

ಅಂದು ಚೈತ್ರ ಶುಕ್ಲ ತ್ರಯೋದಶಿ (ಕ್ರಿ.ಪೂ. 598 ಮಾರ್ಚ್ 29) ಈಗಿನ ಬಿಹಾರದ ಕುಂದಲಪುರದಲ್ಲಿ ಮಹಾರಾಜ ಸಿದ್ಧಾರ್ಥ ಮತ್ತು ಮಹಾರಾಣಿ ತ್ರಿಶಲಾದೇವಿಯರ ಸುಪುತ್ರನಾಗಿ ಜನುಮ ತಾಳಿದರು. ಮೊದಲೇ ರಾಜ ಪರಂಪರೆ, ಹುಟ್ಟಿರುವುದು ಯುವರಾಜ. ಹಾಗಾಗಿ ವೃದ್ಧಿ ಮತ್ತು ಯಶಸ್ಸೈಶ್ವರ್ಯಗಳ ಸಂಕೇತವಾಗಿ ವರ್ಧಮಾನ ಎಂಬ ಜನ್ಮನಾಮ ಇಡಲಾಯಿತು. ಬಾಲ್ಯದಲ್ಲಿ ವೀರರು ಮತ್ತು ಅಷ್ಟೇ ಕರುಣಾಮಯಿಯಾಗಿದ್ದ ವರ್ಧಮಾನರು ಖ್ಯಾತಿಯನ್ನು ದೇವಲೋಕದಲ್ಲಿಯೂ ಹೊಂದಿದ್ದರು. ಒಮ್ಮೆ ಹೀಗೆ ದೇವರಾಜ ಇಂದ್ರ ವರ್ಧಮಾನರ ಶೌರ್ಯವನ್ನು ಹೊಗಳಿ, ಬಾಲ್ಯದಲ್ಲೇ ಈ ರಾಜಕುವರ ತುಂಬಾ ವೀರ ಎಂದು ಹೇಳುತ್ತಾನೆ. ಆಗ ಎಂಟು ವರ್ಷದ ಈ ಬಾಲಕನನ್ನು ಪರೀಕ್ಷೆ ಮಾಡಲು ದೇವನೊಬ್ಬ ಸರ್ಪದ ವೇಷದಲ್ಲಿ ಬಂದು ಆಟವಾಡುತ್ತಿದ್ದ ಯುವ ವರ್ಧಮಾನರ ಎದುರು ನಿಲ್ಲುತ್ತಾನೆ. ಆಗ ಕಿಂಚಿತ್ತೂ ಅಂಜದೆ ಭಯಂಕರ ಸರ್ಪವನ್ನು ದೂರ ಎಸೆದು ಮತ್ತೆ ಆಟದಲ್ಲಿ ತೊಡಗಿಕೊಳ್ಳುತ್ತಾರೆ.

ವರ್ಧಮಾನ ಬರೀ ಶೌರ್ಯದಲ್ಲಿ ಮಾತ್ರವಲ್ಲ, ದಯೆ, ಧರ್ಮ ಮತ್ತು ಅಹಿಂಸೆಯ ವಿಷಯದಲ್ಲೂ ಮುಂಚೂಣಿಯಲ್ಲಿ ನಿಂತುಕೊಂಡಿದ್ದರು. ಅಲ್ಲದೆ ರಾಜ್ಯದ ಸಾರಥ್ಯ ವಹಿಸಿ ಸರಿ ಸುಮಾರು ಹತ್ತು ವರ್ಷಗಳ ಕಾಲ ಯುವರಾಜನಾಗಿ ಆಡಳಿತ ನಡೆಸಿದರು. ಹದಿನೆಂಟನೆಯ ವಯಸ್ಸಿನಲ್ಲಿ ವರ್ಧಮಾನರ ವಿವಾಹ ಸಮರವೀರ ಪುತ್ರಿ ಯಶೋದೆಯೊಂದಿಗೆ ಜರುಗಿತು. ರಾಜ ದಂಪತಿಗಳ ಪುತ್ರಿ ಪ್ರಿಯದರ್ಶಿನಿ. ವಿವಾಹ ಜೀವನ ಸುಮಧುರವಾಗಿತ್ತು.

ಕ್ರಿ.ಪೂ. 569 ನೆಯ ಇಸವಿ, ಮಾರ್ಗಶಿರ ಮಾಸದ ಕೃಷ್ಣಪಕ್ಷದ ದಶಮಿ, ಮೂವತ್ತರ ಹರೆಯದ ಇಕ್ಷ್ವಾಕು ವಂಶದ ಅರಸ ಮೋಕ್ಷ ಹುಡುಕಿಕೊಂಡು ಹೊರಟರು. ಸುಮಾರು ಹನ್ನೆರಡು ವರ್ಷಗಳ ನಿರಂತರ ಸಾಧನೆಯ ಫಲವಾಗಿ ಬಿಹಾರದ ಜೃಂಬಿಕದಲ್ಲಿ ವರ್ಧಮಾನರಿಗೆ ಲೋಕವನ್ನು ಅರಿಯುವ ಕೇವಲಜ್ಞಾನ ಪ್ರಾಪ್ತವಾಯಿತು. ತ್ರಿಶಲಾಪುತ್ರ ಮಹಾವೀರರಾದರು. ಲೋಕದ ಆಡುಭಾಷೆ ಪ್ರಾಕೃತದಲ್ಲಿ ತಮ್ಮ ಬೋಧನೆಗಳ ನೀಡಿದರು. ಅವರ ಮೋಕ್ಷ ಮಾರ್ಗವು ತುಂಬಾ ಸರಳವಾಗಿತ್ತು. ಅಹಿಂಸೆ, ಸತ್ಯ, ಆಸ್ತೆಯಾ (ನಿರ್ವಂಚಕ), ಅಪರಿಗ್ರಹ (ನಶ್ವರ) ಮತ್ತು ಬ್ರಹ್ಮಚರ್ಯ. ಈ ಪದಗಳೇ ಹೇಳುತ್ತವೆ, ಮೋಕ್ಷದ ಮಾರ್ಗ ತುಂಬಾ ಸರಳವಾಗಿ ಅನುಯಾಯಿ ಆದವರು ಆಚರಿಸಬಹುದು.

ಆತ್ಮಪರಿಶೋಧನೆಯ ಹಾದಿಯಲ್ಲಿ ಪರಮಾರ್ಥ ಇದೆ ಎಂಬುದು ಮಹಾವೀರರ ಬೋಧನೆಯ ಸಾರ. ಅಹಿಂಸೆಯ ಮಹತ್ವವನ್ನು ಸಾರಲೆಂದೇ ಮಹಾವೀರರ ಜನ್ಮ ಕಲ್ಯಾಣವಾಯಿತೇನೋ ಅನ್ನಿಸುತ್ತದೆ. ದೇಶವನ್ನು ಅಷ್ಟೇ ಅಲ್ಲದೆ, ಆ ಕಾಲದಲ್ಲಿಯೇ ಜೈನ ಧರ್ಮ ಜಗತ್ತಿನ ತುಂಬಾ ಪಸರಿಸಿತು. ಮಹಾವೀರ ಭಗವಾನರ ಪ್ರತಿ ಬೋಧನೆಯು ವೈಜ್ಞಾನಿಕ ಆಧಾರವನ್ನು ಹೊಂದಿದ್ದವು.

ಮಹಾವೀರ ಭಗವಾನರು ತಮ್ಮ 72 ರ ಹರೆಯದಲ್ಲಿ ಅನ್ನ ಆಹಾರಗಳ ಸಂಪೂರ್ಣ ತ್ಯಜಿಸಿ ಧ್ಯಾನದಲ್ಲಿ ಮುಳುಗಿದರು. ಕ್ರಿ. ಪೂ. 527 ರ ಕಾರ್ತಿಕ ಮಾಸದ ಕೃಷ್ಣಪಕ್ಷದ ಚತುರ್ದಶಿಯ ರಾತ್ರಿಯಂದು ಅವರು ಮೋಕ್ಷ ಪದವಿ ಪಡೆದರು. ಬಿಹಾರದ ಪಾವಪೂರಿಯಲ್ಲಿ ಅವರ ನಿರ್ವಾಣವಾಯಿತು. ಎಷ್ಟೋ ಶತಮಾನಗಳೇ ಕಳೆದರೂ ಇಂದಿಗೂ ಅವರ ಅನುಯಾಯಿಗಳು, ಆಚರಣೆಗಳು ಮತ್ತು ಅವರ ಬೋಧನೆಗಳು ಜೀವಂತವಾಗಿ ಉಳಿದಿವೆ. ಇದಿಷ್ಟು ತುಂಬಾ ಸಂಕ್ಷಿಪ್ತವಾಗಿ ಮಹಾವೀರರ ಜೀವನ ಚರಿತ್ರೆ. ಬರೆಯಲು ಬಹಳಷ್ಟಿದೆ. ಆದರೆ ಅವರ ಜೀವನವೊಂದು ಅನಂತ ಅಧ್ಯಾಯ.

ಇಂದು ಜಗತ್ತನ್ನು ಅಹಿಂಸೆಯಿಂದ ಆಳಿದ ಮಹಾಪ್ರಭುವಿನ ಜನುಮ ದಿನ. ಜೈನರು ಇಂದು ಬಸದಿಗಳಿಗೆ ತೆರಳಿ ಪೂಜೆ ಸಲ್ಲಿಸಿ, ಮೆರವಣಿಗೆ ನಡೆಸಿ ನಂತರ ದಾನ ಧರ್ಮಗಳಲ್ಲಿ ತೊಡಗುವುದು ವಾಡಿಕೆ. ಆದರೆ ಕಳೆದ ಬಾರಿಯಂತೆ ಈ ಬಾರಿಯೂ ಕೊರೋನ ರೋಗದ ಕಾರಣ ಯಾವುದೇ ಗುಂಪು ಪೂಜೆ ಇಲ್ಲದೆ ಶಾಂತ ರೀತಿಯಲ್ಲಿ ಮನೆಗಳಲ್ಲಿ ಪೂಜೆ ಸಲ್ಲಿಸಿ ಪುನೀತರಾಗುತ್ತಾರೆ. ಮೊದಲಿಂದಲೂ ತಮ್ಮ ಶಾಂತ ಸ್ವಭಾವಕ್ಕೆ ಹೆಸರುವಾಸಿಯಾದ ಜೈನ ಧರ್ಮ ಬಾಂಧವರು, ಮಹಾವೀರ ಜಯಂತಿಯ ಆಚರಣೆಯಲ್ಲೂ ತಮ್ಮ ಅನುಕರಣೀಯ ಶೈಲಿಯನ್ನು ತೋರಿಸಿದ್ದಾರೆ.

ಕೊಲ್ಲೆನ್ನದ ಧಮ್ಮ ಯಾವುದಯ್ಯ
ಆತ್ಮ ಶುದ್ಧಿಯ ಮಾರ್ಗ ಎಲ್ಲಿಹುದಯ್ಯ
ಮಿಥ್ಯೆಗೆ ಅಲ್ಲಿ ತಾವೇ ಇಲ್ಲವಯ್ಯ
ಅದು ಮೋಕ್ಷವೀರ ಮಹಾವೀರರ ಪಂಥ ಕಾಣ ಜಿನನಾಥ

ಮಹಾವೀರ ಭಗವಾನ್ ಕಿ ಜೈ
ಅಹಿಂಸೋ ಪರಮೋ‌ಧರ್ಮ

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

Tags: Kannada News WebsiteKannada_NewsKannadaNewsKannadaNewsLiveKannadaNewsOnlineKannadaWebsiteLatest News KannadaMahaveera JayanthiNewsinKannadaNewsKannadaSachin Parshwanathಮಹಾವೀರ ಜಯಂತಿ
Share210Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಶಿವಮೊಗ್ಗದಲ್ಲಿಂದು 314 ಪಾಸಿಟಿವ್, 2ನೆಯ ಸ್ಥಾನದಲ್ಲಿರುವ ಭದ್ರಾವತಿಯಲ್ಲಿ ಎಷ್ಟು ಪ್ರಕರಣ?

Next Post

ಬಳ್ಳಾರಿ: ಕೊರೋನಾ ತಡೆಯಲು ಮುಂಜಾಗ್ರತಾ ಕ್ರಮ: ಸಚಿವ ಅನಂದ್ ಸಿಂಗ್ ತುರ್ತು ಸಭೆ

kalpa News

kalpa News

Next Post
ಬಳ್ಳಾರಿ: ಕೊರೋನಾ ತಡೆಯಲು ಮುಂಜಾಗ್ರತಾ ಕ್ರಮ: ಸಚಿವ ಅನಂದ್ ಸಿಂಗ್ ತುರ್ತು ಸಭೆ

ಬಳ್ಳಾರಿ: ಕೊರೋನಾ ತಡೆಯಲು ಮುಂಜಾಗ್ರತಾ ಕ್ರಮ: ಸಚಿವ ಅನಂದ್ ಸಿಂಗ್ ತುರ್ತು ಸಭೆ

Leave a Reply Cancel reply

Your email address will not be published. Required fields are marked *

No Result
View All Result
b-y-raghavendra-freedom-fighters-independence-day
English Articles

Remembering Freedom Fighters Is the Duty of Every Indian: MP B.Y. Raghavendra

by kalpa News
August 17, 2026
0

Kalpa Media House  | SHIKARIPURA  | Remembering the freedom fighters who fought against British rule, made immense sacrifices and secured...

Read moreDetails
Indriya - Krithi Shetty - Brand Ambassador

Indriya announces Krithi Shetty as Brand Ambassador for Southern Markets

August 14, 2026
Mysuru Ninada Griha Sangeet Concert On August 16th

Mysuru to Host Hindustani Classical Vocal Concert on August 16

August 11, 2026
Hubballi drucc meeting passenger friendly initiatives

41st DRUCC Meeting Held at Hubballi; Division Applauded for Passenger-Friendly Initiatives

August 10, 2026
World Padel League august 16 Scores Big Brand Support

World Padel League Secures Strong Brand Backing Ahead of Its Biggest Season Yet

August 8, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL