No Result
View All Result
ಡಯಾಲಿಸಿಸ್ ಅಂತಿಮವಲ್ಲ | ಮೃತ ದಾನಿದಾರ ಕಿಡ್ನಿಯಿಂದ ರೋಗಿಗೆ ಹೊಸ ಬದುಕು
English Articles

A Second Chance at Life Through Deceased Organ Donation

by ಕಲ್ಪ ನ್ಯೂಸ್
February 3, 2026
0

Kalpa Media House  |  Bengaluru, Whitefield  | For 48-year-old Unnikrishnan, life for several years revolved around dialysis sessions, medications, and...

Read moreDetails
Bhaskara Parva: Generations of Journalism Students Reunite to Honour a Teacher Who Shaped Their Lives

Bhaskara Parva: Generations of Journalism Students Reunite to Honour a Teacher Who Shaped Their Lives

February 2, 2026
NITK Surathkal Inaugurates First Annual Sports Festival- ‘Endeavor 2026’

NITK Surathkal Inaugurates First Annual Sports Festival- ‘Endeavor 2026’

February 1, 2026
Samsung Sets Two Guinness World Records with its India

Samsung Sets Two Guinness World Records with its India

January 31, 2026
ಮೈಸೂರು | ಮಹಾರಾಣಿ ಮಹಿಳಾ ವಿದ್ಯಾರ್ಥಿನಿಯರಿಗೆ ಆಹಾರ ಹಾಗು ಆತಿಥ್ಯೋದ್ಯಮ ಕೌಶಲ್ಯ ತರಬೇತಿ

Maharani’s Science College Collaboration Empowers Students with Industry-Ready Skills

January 31, 2026
  • Advertise With Us
  • Grievances
  • About Us
  • Contact Us
Friday, February 6, 2026
Follow Us
kalpa.news
">
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಅಂಕಣ

ಹಿಡಿ ಬೆಳಕನ್ನು ಕೈಗಿತ್ತು ದಾರಿ ತೋರಿಸಿದ, ಸನ್ನಡತೆಯ ಸರಳ ಗುಟ್ಟನ್ನು ಹೇಳಿಕೊಟ್ಟ, ನೀನಿಲ್ಲದೆ ನಾನೆಲ್ಲಿ ಗುರುವೆ…

ಇಂದು ಅತ್ಯಂತ ಮಹತ್ವದ ದಿನ: ಗುರುಪೂರ್ಣಿಮೆ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
March 17, 2022
in ಅಂಕಣ
0
Gurupoornima

Gurupoornima

Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್

ಇಂದು ಅತ್ಯಂತ ಮಹತ್ವದ ದಿನ. ಹಿಡಿ ಬೆಳಕನ್ನು ಕೈಗಿತ್ತು ದಾರಿ ತೋರಿಸಿದ, ಸನ್ನಡತೆಯ ಸರಳ ಗುಟ್ಟನ್ನು ಹೇಳಿಕೊಟ್ಟ, ಮನುಷ್ಯತ್ವದ ಸಾರವನ್ನು ಎದೆಯಲ್ಲಿ ಬಿತ್ತಿದ ಗುರುವೆಂಬ ಗುರುವನ್ನು ಪ್ರೀತಿಯಿಂದ ನೆನೆಯುವ ದಿನ. ಆತನಿಗೊಂದು ಶ್ರೇಷ್ಠ ನಮನ ಸಲ್ಲಿಸುವ ದಿನ. ʼನೀನಿಲ್ಲದೆ ನಾನೆಲ್ಲಿ ಗುರುವೆʼ ಎಂದು ಮನದಲ್ಲೇ ಭಕ್ತಿಪೂರ್ವಕ ಪ್ರಣಾಮಗಳನ್ನು ಹೇಳುವ ದಿನ. ಅದೇ ಗುರುಪೂರ್ಣಿಮೆ.

ಗುರು ಶಿಷ್ಯರ ಸಂಬಂಧ ಎಂಥದ್ದು ಎಂಬುದನ್ನು ತಿಳಿಸಲು ಇಂದು ನಾವು ನಿಮಗೊಂದು ಅದ್ಭುತ ಕಥೆ ಹೇಳುತ್ತೇವೆ.
ಒಬ್ಬ ಶಿಷ್ಯ ಇರುತ್ತಾನೆ. ಜಗತ್ತಿನ ಎಲ್ಲಾ ಶಿಷ್ಯರಂತೆ ಆತನಿಗೂ ಒಂದು ಮಹದಾಸೆ ಇರುತ್ತದೆ. ನೀರಿನ ಮೇಲೆ ನಡೆಯಬೇಕು ಅನ್ನೋದೆ ಆ ಮಹದಾಸೆ. ಗುರುವಿನ ಕಾಲಿಗೆ ಬಿದ್ದು ದೀನನಾಗಿ ಬೇಡಿಕೊಳ್ಳುತ್ತಾನೆ. ʼಗುರುವೇ ನೀರಿನ ಮೇಲೆ ನಾನು ನಡೆಯಬೇಕು. ಅದಕ್ಕಾಗಿ ಯಾವುದಾದರೂ ದಿವ್ಯ ಮಂತ್ರವಿದ್ದರೆ ನನಗೆ ಹೇಳಿಕೊಡಿ.ʼ ಗುರು ನಗುತ್ತಾನೆ. ನೀರಿನ ಮೇಲೆ ನಡೆಯಲು ದಿವ್ಯಮಂತ್ರವೇ?  ಗುರುವಿಗೆ ಗೊತ್ತಿತ್ತು ಶಿಷ್ಯನ ಶ್ರದ್ಧೆ, ಭಕ್ತಿ, ನಂಬಿಕೆ ಏನು ಅಂತ. ಯಾಕೆಂದ್ರೆ ಅದೇ ಗುರುವಿನ ಬಳಿ ಆ ಶಿಷ್ಯ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ. ಶಿಷ್ಯನ ಅಂತರಂಗದ ಅರಿವು ಗುರುವಿಗೆ ಆಗದೆ ಇರುತ್ತದೆಯೇ?
ಒಂದು ಎಲೆ ತೆಗೆದುಕೊಂಡು ಅದನ್ನು ಸುರುಳಿಸುರುಳಿಯಾಗಿ ಚಿಕ್ಕದಾಗುವತನಕ ಮಡಚಿ ಅದನ್ನು ಶಿಷ್ಯನ ಕೈಗಿತ್ತು ಹೇಳಿದ. ʼನೋಡು ಈ ಎಲೆಯ ಮಡಿಕೆಯ ಒಳಗಡೆ ದಿವ್ಯ ಮಂತ್ರವಿದೆ. ಅದು ರಹಸ್ಯ ಮಂತ್ರ. ಇದರ ನೆರವಿನಿಂದ ನೀನು ನೀರಿನ ಮೇಲೆ ನಡೆಯುತ್ತೀಯ. ಆದರೆ ಯಾವುದೇ ಕಾರಣಕ್ಕೂ ಈ ಸುರಳಿ ಎಲೆಯನ್ನು ಬಿಚ್ಚಿ ನೀನು ನೋಡಬಾರದುʼ. ಶಿಷ್ಯನ ಎದೆಯಲ್ಲಿ ಪರಮಾನಂದ.
ಗುರುವಿಗೆ ನಮಿಸಿ ಎದೆಯಲ್ಲಿ ಸಾವಿರ ವೋಲ್ಟೇಜ್‌ ಆತ್ಮವಿಶ್ವಾಸ ತುಂಬಿಕೊಂಡು ನೀರಿನ ಮೇಲೆ ನಡೆಯಲು ಹೊರಟ. ಪರಮಾಶ್ಚರ್ಯವೆನಿಸುವಂತೆ ನೀರಿನ ಮೇಲೆ ಸರಾಗವಾಗಿ ನಡೆದು ಇನ್ನೇನು ನದಿ ದಾಟಬೇಕು. ಕೈಯಲ್ಲಿ ಗುರು ಕೊಟ್ಟಿದ್ದ ಸುರುಳಿಸುರುಳಿಯಾದ ಮಡಚಿದ ಎಲೆ ನೆನಪಾಯ್ತು.

ಏನಿರಬಹುದು ಈ ಸುರುಳಿ ಎಲೆಯಲ್ಲಿ? ರಹಸ್ಯ ಮಂತ್ರ ಇದೆಯಾ? ಅಥವಾ ಗುರು ಯಾವುದಾದರೂ ಪುಡಿಯನ್ನೋ ಕಲ್ಲನ್ನೋ ಮಂತ್ರಿಸಿ ಈ ಎಲೆಯ ಸುರುಳಿಯಲ್ಲಿ ತುಂಬಿರಬಹುದಾ? ಅದರಿಂದಲೇ ನಾನು ನೀರಿನ ಮೇಲೆ ನಡೆಯುತ್ತಿದ್ದೇನಾ? ಗುರುವಿಗೆ ಎಲ್ಲಿ ಸಿಕ್ಕಿದ್ದಿರಬಹುದು ಈ ಅದ್ಭುತವಾದ ಶಕ್ತಿ? ಥಟ್ಟನೆ ನೀರಿನ ಮೇಲೆ ನಿಂತು ಪರಮ ಕುತೂಹಲದಿಂದ ಮಡಚಿದ ಎಲೆಯನ್ನು ಜೋಪಾನವಾಗಿ ತೆರೆದ. ಎಲ್ಲಿ ಒಳಗಿರುವ ಮಂತ್ರ ಶಕ್ತಿ ಹಾರಿಹೋಗುತ್ತೋ, ದಿವ್ಯ ಶಕ್ತಿಯ ಪುಡಿ ಇದ್ದರೆ ಚೆಲ್ಲಿಹೋಗುತ್ತೋ ಅನ್ನೋ ಆತಂಕ. ಭಯ. ನಿಧಾನಕ್ಕೆ ಎಲೆಯ ಒಂದೊಂದೇ ಮಡಿಕೆಯನ್ನು ಬಿಡಿಸಿದ. ಬಿಡಿಸುತ್ತಲೇ ನೀರಿನ ಮೇಲೆ ನಡೆಯುತ್ತಿದ್ದವನು ಥಟ್ಟಂತ ಮುಳುಗಿದ. ಇನ್ನೇನು ಕೊಚ್ಚಿಕೊಂಡು ಹೋಗುವುದರಲ್ಲಿದ್ದ. ಆಗ ಬಿದ್ದಿತು ಅವನ ಕಣ್ಣಿಗೆ ಗುರು ಕೊಟ್ಟಿದ್ದ ಎಲೆಯೊಳಗಿನ ರಹಸ್ಯ.
ಎಲೆಯೊಳಗೆ ಸರಳವಾಗಿ ʼನಂಬಿಕೆʼ ಅನ್ನೋ ಮೂರಕ್ಷರ ಬರೆದಿತ್ತಷ್ಟೆ.

ಶಿಷ್ಯನಿಗೆ ಗುರುವಿನ ಬಲ ಏನೆಂದು ಅರ್ಥವಾಗಿತ್ತು. ಗುರುವಿನ ಮೇಲೆ ತಾನಿಟ್ಟ ನಂಬಿಕೆ ಏನು ಎಂದು ಅರ್ಥವಾಗಿತ್ತು. ನಮ್ಮ ಬದುಕಿನಲ್ಲಿ ಯಾವುದೇ ಪವಾಡಗಳು ಜರುಗಲು ಗುರುವಿನ ಯಾವ ಮಂತ್ರ ಶಕ್ತಿಯೂ ಬೇಕಾಗಿಲ್ಲ. ಆತನ ಮೇಲೆ ನಾವಿಟ್ಟಿರುವ ಬಲವಾದ ನಂಬಿಕೆ ಅಷ್ಟೇ ಸಾಕು. ನಮ್ಮನ್ನ ದಡ ಸೇರಿಸುತ್ತದೆ.

ನಿಮಗೆಲ್ಲಾ ಗುರು ಪೂರ್ಣಿಮೆಯ ಶುಭಾಶಯಗಳು…


-ಶಬರೀಶ್ ಕಣ್ಣನ್, ಶಿವಮೊಗ್ಗ

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: Guru PoornimeKannada NewsKannada News LiveKannada News OnlineKannada News WebsiteKannada WebsiteLatest News KannadaNews in KannadaNews Kannadaಗುರುಪೂರ್ಣಿಮೆ
Share197Tweet123Send
Previous Post

ಹೈಕಮಾಂಡ್ ಯಾವುದೇ ನಿರ್ಧಾರ ಕೈಗೊಂಡರೂ ಅದಕ್ಕೆ ಬದ್ದ: ಸಚಿವ ಮುರುಗೇಶ್ ನಿರಾಣಿ

Next Post

ಕನ್ನಡ ಚಿತ್ರರಂಗದ ಹಿರಿಯ ನಟಿ ಜಯಂತಿ ಇನ್ನಿಲ್ಲ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಕನ್ನಡ ಚಿತ್ರರಂಗದ ಹಿರಿಯ ನಟಿ ಜಯಂತಿ ಇನ್ನಿಲ್ಲ

ಕನ್ನಡ ಚಿತ್ರರಂಗದ ಹಿರಿಯ ನಟಿ ಜಯಂತಿ ಇನ್ನಿಲ್ಲ

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ಶಿವಮೊಗ್ಗ | ಮೈಮೇಲೆ ಹರಿದ ಲಾರಿ | ಯುವಕ ಸ್ಥಳದಲ್ಲೇ ಸಾವು

ಶಿವಮೊಗ್ಗ | ಮೈಮೇಲೆ ಹರಿದ ಲಾರಿ | ಯುವಕ ಸ್ಥಳದಲ್ಲೇ ಸಾವು

January 12, 2026
ಗದಗ-ಧಾರವಾಡ ಪ್ಯಾಸೆಂಜರ್ ರೈಲು ಪುನಾರಂಭ? ಕೇಂದ್ರ ಸಚಿವ ಜೋಶಿ ಹೇಳಿದ್ದೇನು?

ಸಾಗರ ಮಾರಿಕಾಂಬಾ ಜಾತ್ರೆಗೆ ಯಶವಂತಪುರ-ತಾಳಗುಪ್ಪ 2 ಸ್ಪೆಷಲ್ ರೈಲುಗಳು | ಹೀಗಿದೆ ಡೀಟೇಲ್ಸ್

January 31, 2026
ಗಮನಿಸಿ! ಜ.21-22ರಂದು ಶಿವಮೊಗ್ಗ ನಗರ, ಗ್ರಾಮಾಂತರದ ಈ ಬಡಾವಣೆಗಳಲ್ಲಿ ಕರೆಂಟ್ ಇರಲ್ಲ

ಗಮನಿಸಿ! ಫೆ.7ರಂದು ಶಿವಮೊಗ್ಗ ನಗರದ ಹಲವು ಬಡಾವಣೆಗಳಲ್ಲಿ ಕರೆಂಟ್ ಇರಲ್ಲ

February 6, 2026
ಅಭಿನಯ ಶಾರದೆ, ತುಳುನಾಡಿನ ಕುವರಿ, ಡ್ರಾಮಾ ಜೂನಿಯರ್ಸ್ ವಿಜೇತೆ ರಿಷಿಕಾ ಕುಂದೇಶ್ವರ!

ಅಭಿನಯ ಶಾರದೆ, ತುಳುನಾಡಿನ ಕುವರಿ, ಡ್ರಾಮಾ ಜೂನಿಯರ್ಸ್ ವಿಜೇತೆ ರಿಷಿಕಾ ಕುಂದೇಶ್ವರ!

February 6, 2026
ಇಂಡಿಯನ್ ರೇಸಿಂಗ್ ಫೆಸ್ಟಿವಲ್ ಗೆ ಸಜ್ಜಾದ ಜಾನ್ ಅಬ್ರಹಾಂ ತಂಡ!

ಇಂಡಿಯನ್ ರೇಸಿಂಗ್ ಫೆಸ್ಟಿವಲ್ ಗೆ ಸಜ್ಜಾದ ಜಾನ್ ಅಬ್ರಹಾಂ ತಂಡ!

February 6, 2026
ಮೂಢನಂಬಿಕೆ, ಜಾತಿ ಪದ್ಧತಿ ವಿರುದ್ಧ ಜಾಗೃತಿ ಮೂಡಿಸುವಲ್ಲಿ ಶರಣರ ಕೊಡುಗೆ ಅಪಾರ: ಪ್ರಶಾಂತ್

ಮೂಢನಂಬಿಕೆ, ಜಾತಿ ಪದ್ಧತಿ ವಿರುದ್ಧ ಜಾಗೃತಿ ಮೂಡಿಸುವಲ್ಲಿ ಶರಣರ ಕೊಡುಗೆ ಅಪಾರ: ಪ್ರಶಾಂತ್

February 6, 2026
ಮತ್ತೊಂದು ದುರಂತ | ನೆಲಮಂಗಲ ಬಳಿ ಹೊತ್ತಿ ಉರಿದ ಖಾಸಗಿ ಬಸ್ | 40 ಪ್ರಯಾಣಿಕರು ಪಾರು

ಮತ್ತೊಂದು ದುರಂತ | ನೆಲಮಂಗಲ ಬಳಿ ಹೊತ್ತಿ ಉರಿದ ಖಾಸಗಿ ಬಸ್ | 40 ಪ್ರಯಾಣಿಕರು ಪಾರು

February 6, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL