No Result
View All Result
ನೈಋತ್ಯ ರೈಲ್ವೆ ಹುಬ್ಬಳ್ಳಿ ವಿಭಾಗದ ಪಿಆರ್‌ಓ ಪ್ರವೀಣ್ ಅಧಿಕಾರ ಸ್ವೀಕಾರ
English Articles

South Western Railway | Praveen Takes Charge as Hubballi Divisional Public Relations Officer

by ಕಲ್ಪ ನ್ಯೂಸ್
March 28, 2026
0

Kalpa Media House  |  Hubballi | S.P. Praveen, an officer of the Indian Railway Service of Signal Engineers (IRSSE), 2015...

Read moreDetails
26 ವರ್ಷದ ಯುವಕನಿಗೆ ಮರುಜೀವ ಕೊಟ್ಟ ಮೆಡಿಕವರ್ ಆಸ್ಪತ್ರೆ | ಏನಾಗಿತ್ತು ಯುವಕನಿಗೆ?

Critical Condition Turned Around with Timely Medical Intervention

March 27, 2026
Yogada Satsang Society brings out Kannada version on Kriya Yoga today

Yogada Satsang Society brings out Kannada version on Kriya Yoga today

March 25, 2026
Sagara Engulfed In The Ocean of Music

Sagara Engulfed In The Ocean of Music

March 23, 2026
MAHE Introduces ‘MAGIC’ to Power AI-Driven Academic and Administrative Transformation

MAHE Introduces ‘MAGIC’ to Power AI-Driven Academic and Administrative Transformation

March 23, 2026
  • Advertise With Us
  • Grievances
  • About Us
  • Contact Us
Monday, March 30, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಮರೆಯಾಗುತ್ತಿದೆ ಮಲೆನಾಡಿನ ಪರಿಸರದೊಳಗೆ ಈ ಗಾಂಧಾರಿ ಮೆಣಸು ..!

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
July 29, 2025
in Special Articles
0
ಮರೆಯಾಗುತ್ತಿದೆ ಮಲೆನಾಡಿನ ಪರಿಸರದೊಳಗೆ ಈ ಗಾಂಧಾರಿ ಮೆಣಸು ..!
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ವಿಶೇಷ ಲೇಖನ  |

ಹತ್ತು ಹಲವು ಔಷಧೀಯ ಗುಣಗಳೊಂದಿಗೆ ಗಾಂಧಾರಿ ಮೆಣಸಿನಕಾಯಿ #Gandhari Chilly ಎಂದೇ ನಾಟಿ ಔಷಧಿಯ ಪದ್ಧತಿಯಲ್ಲಿ ಹೆಸರು ಪಡೆದಿರುವುದು ನಮ್ಮ ಈ ಜೀರಿಗೆ ಮೆಣಸಿನ ಕಾಯಿ.

ಬಡವರ ಬಂಧು ಎಂದೇ ಕರೆಸಿಕೊಳ್ಳುತ್ತಿದ್ದ ಹಾಗೂ ತಾವು ವಾಸಿಸುವ ಪರಿಸರದಲ್ಲಿ ಉಚಿತವಾಗಿ ನೈಸರ್ಗಿಕವಾದ ಉಡುಗೊರೆಯಂತೆ ದೊರೆಯುತ್ತಿದ್ದ ಹಲಸಿನ ಹಣ್ಣು. ಕೆಸುವಿನ ಸೊಪ್ಪು. ಹರಬೇ ಸೊಪ್ಪು. ಅಣಬೆ. ಹಾರು ಮೀನು. ಗದ್ದೆ ಏಡಿ. ಹೇಳ್ಳಿಕಾಯಿ. ಕಂಚಿ ಕಾಯಿ. ಚಕೋತ. ಕಿತ್ತಲೆ ಹಣ್ಣು . ನಾಟಿ ಮಾವಿನ ಹಣ್ಣು. ಜೋಪಲು ಹಣ್ಣು. ಕವಳಿ ಹಣ್ಣು. ಚೊಟ್ಟೆಹಣ್ಣು. ಕುಂಬಳಕಾಯಿ. ಚೇಣಿ ಕಾಯಿ. ಚಪ್ಪರದ ಅವರೆಕಾಯಿ. ಸೌತೆಕಾಯಿ. ಪುದಿನ. ಬಸಳೆ ಸೊಪ್ಪು. ಆಲೆ ಹಣ್ಣು ಹೀಗೆ ಒಂದೇ ಎರಡೇ ನೈಸರ್ಗಿಕವಾಗಿ ಮಲೆನಾಡಿನ ಪ್ರತಿ ಮನೆಯ ಹಿತ್ತಲುಗಳಲ್ಲಿ, ಅಲ್ಲಿನ ಗದ್ದೆ ತೋಟ ಕಾಡುಗಳಲ್ಲಿ ಎಲ್ಲೆಂದರಲ್ಲಿ ಹಕ್ಕಿಪಕ್ಷಿ ಮಂಗ ಇತರೆ ಜೀವಸಂಕುಲಗಳು ತಿಂದು ಹಾಕಿದ ಇಕ್ಕೇಯಿಂದ ಪಸರಿಸುತ್ತಿದ್ದ ಬೀಜಗಳು ಸಹಜವಾದ ನಿಸರ್ಗದತ್ತವಾಗಿ ಎಲ್ಲೆಂದರಲ್ಲಿ ಸೋಜಿಗದಂತೆ ಬೆಳೆದು ನಿಂತು ಋತುಮಾನಕ್ಕೆ ತಕ್ಕಂತೆ ಫಲ ನೀಡುತ್ತಿದ್ದವು.
ಕೆಲವೊಂದು ಬೀಜಗಳನ್ನು ನಮ್ಮ ಹಳ್ಳಿಗರು ಸಂರಕ್ಷಣೆ ಮಾಡಿ ಇಟ್ಟುಕೊಂಡು ಮುಂಗಾರು ಮಳೆಯ ಆರಂಭಕ್ಕೆ ಮುಂಚೆ ಬಿಸಿ ಮಣ್ಣಿಗೆ ಬಿತ್ತನೆ ಮಾಡುತ್ತಿದ್ದರು.

ಅಡುಗೆ ಮನೆಯ ಔಷಧಿಯಂತಿದ್ದ, ಮಲೆನಾಡಿನ ಮನೆಗಳ ಹಿತ್ತಲಿನ ಮದ್ದಿನಂತಿದ್ದ ಈ ಎಲ್ಲವು ಆಧುನಿಕ ಕೃಷಿ ಪದ್ಧತಿಯ ಭರಾಟೆಯಲ್ಲಿ ದಿನಕಳದಂತೆ ಒಂದೊಂದೇ ನಾಶವಾಗುತ್ತಾ ಹೋಗುತ್ತಿದ್ದಾವೆ.

ನಮ್ಮ ಹಿಂದಿನ ತಲೆಮಾರಿನ ಕೆಲವರು ಲೀಟರ್ ಗಟ್ಟಲೆ ಶರಾಯಿ, ಬಟ್ಟಿ ಮತ್ತು ಕಟ್ಟುಗಟ್ಟಲೆ ಬೀಡಿಗಳನ್ನು ಸೇದಿ ಸೇದಿ ಬಿಸಾಡುತ್ತಿದ್ದರು ಕೂಡ, ಅವರ ಆರೋಗ್ಯದಲ್ಲಿ ಏರುಪೇರು ಕಂಡುಬಂದದ್ದು ಬಹಳ ಕಡಿಮೆ ಮತ್ತು ಬಹುತೇಕ ಇವರೆಲ್ಲ ಶತಮಾನದಂಚಿಗೆ ಬಂದು, ಶತಮಾನವನ್ನು ದಾಟಿ , ಬಹುತೇಕ ಹೆಚ್ಚಿನ ರೀತಿಯಲ್ಲಿ ಆಸ್ಪತ್ರೆಯ ಮೆಟ್ಟಿಲನ್ನು ಹತ್ತದೇ ಬಾಳಿ ಬದುಕಿದವರು.
ಇಂತಹ ಆರೋಗ್ಯಕ್ಕೆ ಬಹು ಮುಖ್ಯವಾದ ಕಾರಣ, ಅಂದು ಋತುಮಾನಗಳಿಗೆ ತಕ್ಕಂತೆ ನೈಸರ್ಗಿಕವಾಗಿ ದೊರೆಯುತ್ತಿದ್ದ ಮನೆಯ ಮದ್ದಿನಂತಿದ್ದ , ಊಟವೇ ಔಷಧಿಯಂತಿದ್ದ ಆಹಾರ ಪದ್ಧತಿ ಮತ್ತು ಮೈ ಬೆವರಿಳಿಸಿ ದುಡಿಯುತ್ತಿದ್ದ ಜೀವನ ಪದ್ಧತಿ ಎನ್ನಬಹುದು.

ಇಂದು ನಾವು ಬಿಸಿಲಿಗೆ ಹೋಗಿರುವುದಿಲ್ಲ ನೆರಳನ್ನು ಬಯಸುತ್ತೇವೆ, ದುಡಿದು ಬೆವರಿಳಿಸಿರುವುದಿಲ್ಲ, ವಿಶ್ರಾಂತಿ ಬೇಕು ಎಂದು ಹಂಬಲಿಸುತ್ತೇವೆ. ಈ ರೀತಿ ಸುಖಕ್ಕೆ ಜೋತುಬಿದ್ದು ಒಂದು ಸಂತೋಷವನ್ನು ಕಳೆದುಕೊಳ್ಳುತ್ತಿದ್ದೇವೆ. ಇಲ್ಲಿ ನಾವುಗಳು “ಸುಖವೇ ಬೇರೆ ಸಂತೋಷವೇ” ಬೇರೆ ಎಂಬುದನ್ನುಸರಿಯಾಗಿ ಅರ್ಥೈಸಿಕೊಳ್ಳಬೇಕಾಗಿದೆ.

ಇಂದು ನಾನು ಮಾತನಾಡಲು ಹೊರಟಿರುವುದು ಮಲೆನಾಡಿನ ತೋಟದ ತುಂಬೆಲ್ಲ ತನಗೆ ತಾನೇ ಎಲ್ಲೆಂದರಲ್ಲಿ, ಕೆಲವೇಡೆ ಕಲ್ಲಿನ ಬಂಡೆಕಲ್ಲಿನ ಮೇಲೂ ಕೂಡ ಬೆಳೆದು ನಿಂತು ಬಡವರ ಬಂಧು ಎನಿಸಿಕೊಂಡಿದ್ದ ಸೋಜಿಗದ ಸೂಜಿ ಮೆಣಸು ಅಥವಾ ಜೀರಿಗೆ ಮೆಣಸು. ಇದನ್ನು ನಾನು ಈಗಾಗಲೇ ಹೇಳಿದಂತೆ ಗಾಂಧಾರಿ ಮೆಣಸಿನ ಗಿಡ ಎಂದು ಕರೆಯುವುದು ಉಂಟು.

ಈ ಜೀರಿಗೆ ಮೆಣಸಿನ ಗಿಡವನ್ನು ನಾವು ನೆಡಬೇಕೆಂದಿಲ್ಲ. ಪಕ್ಷಿಗಳ ಹಿಕ್ಕೆಯಿಂದ ತೋಟದ ತುಂಬಾ ಬೆಳೆಯುತ್ತವೆ. ನಾವು ಕಳೆ ತೆಗೆಯುವಾಗ ಜಾಗ್ರತೆವಹಿಸಬೇಕಷ್ಟೇ. ಯಾವುದೇ ನಿರ್ವಹಣೆ ಬೇಕಿಲ್ಲ.
ಈ ಜೀರಿಗೆ ಮೆಣಸಿನ ಗಿಡದ ವಿಶೇಷತೆ ಎಂದರೆ, ಇತರೆ ಮೆಣಸಿನಕಾಯಿಗಳು ನೆಲ ನೋಡುತ್ತಾ ಬೆಳೆದರೆ ಇದು ಆಕಾಶ ನೋಡುತ್ತಾ ಬೆಳೆಯುತ್ತದೆ. ಅಂದರೆ ಗಿಡದಲ್ಲೂ ನೆಟ್ಟಗೆ ನಿಂತಿರುತ್ತದೆ ಈ ಮೆಣಸಿನಕಾಯಿ,ಪರಿಶುದ್ಧ ನೈಸರ್ಗಿಕ ಗಿಡವಾದ ಇದನ್ನು ನೆಟ್ಟು ಬೆಳೆಸಿದರೆ ಅಷ್ಟೊಂದು ಚಂದವಾಗಿ ಬೆಳೆಯುವುದಿಲ್ಲ ಅನ್ನುತ್ತಾರೆ,

ನವಿಲು ಮತ್ತು ಕಾಗೆಗಳಿಗೆ ಅತೀ ಹೆಚ್ಚು ಪ್ರಿಯವಾದ ಈ ಜೀರಿಗೆ ಮೆಣಸಿನ ಕಾಯಿಯನ್ನು, ನವಿಲು ಕಾಗಿಲೆಗಳು ಅದರ ಹಣ್ಣನ್ನು ತಿಂದು ತಾವು ಹಾಕುವ ಇಕ್ಕೆಗಳ ಮೂಲಕ ಇದರ ಬೀಜ ಪ್ರಸರಣವನ್ನು ಮಾಡುತ್ತವೆ.

ಚಿತ್ರದಲ್ಲಿರುವ ಗಿಡ ಸುಮಾರು ನಾಲ್ಕು ವರ್ಷಗಳಿಂದ ಸತತವಾಗಿ ಕಾಯಿ ಬಿಡುತ್ತಿದೆ. ಈ ರೀತಿ ಒಂದೆರಡು ಗಾಂಧಾರಿ ಅಥವ ಮುಗಿಲು ಮೆಣಸಿನ ಕಾಯಿ ಗಿಡವಿದ್ದರೆ ಹಸಿಮೆಣಸಿನಕಾಯಿ ಖರೀದಿಸುವ ಪ್ರಮೇಯವೇ ಬರುವುದಿಲ್ಲ.

ಬೇಸಿಗೆ ದಿನಗಳಲ್ಲಿ ಈ ಗಾಂಧಾರಿ ಮೆಣಸಿನ ಕಾಯಿಯ ಹಣ್ಣನ್ನು ಬಿಡಿಸಿ ಒಣಗಿಸಿ ಪುಡಿ ಮಾಡಿ ಇಟ್ಟುಕೊಂಡು, ಉಪ್ಪಿನಕಾಯಿಗೆ ಬೆರೆಸಿ ಹಾಕಿದರೆ ಮಳೆಗಾಲದಲ್ಲಿ ಆ ಉಪ್ಪಿನಕಾಯಿ ಕೆಡುವುದಿಲ್ಲ, ಕಪ್ಪಾಗುವುದಿಲ್ಲ, ಬೂಸ್ಟ್ ಕೂಡ ಬರುವುದಿಲ್ಲ. ಹಾಗೂ ಇದರ ಸೇವನೆಯಿಂದ ಅಸಿಡಿಟಿ ಕೂಡ ಆಗುವುದಿಲ್ಲ.
ಮಲೆನಾಡಿನಲ್ಲಿ ಸಿಗುವ ಕೆಸುವಿನ ಸೊಪ್ಪು, ಅಮಟೆಕಾಯಿ, ಕಳಲೆ ಪಲ್ಯ, ಏಡಿ ಹುಳಿ , ಹಪ್ಪಳ ಸೆಂಡಿಗೆಗೆ ಹಾಕಿ ಉಪಯೋಗಿಸಿದರೆ ಅದರ ಸ್ವಾದವೆ ಬೇರೆ ಎನ್ನುತ್ತಾರೆ ನಮ್ಮ ಹಳ್ಳಿಯ ಹಿರಿಕರು.

ಹಿತ್ತಲ ಗಿಡ ಮದ್ದಲ್ಲ, ದೂರದ ಬೆಟ್ಟ ನುಣ್ಣಗೆ ಎನ್ನುವ ನಮ್ಮ ಮನೋಭಾವನೆಯಿಂದ, ಈ ಜೀರಿಗೆ ಮೆಣಸಿನ ಕಾಯಿಯ ಮಹತ್ವ ಮತ್ತು ಮೌಲ್ಯ ಅರಿಯದೆ, ಕಾಫಿ ತೋಟಗಳಿಗೆ ಕಳೆನಾಶಕ ಸಿಂಪಡಿಸುತ್ತಾ ಹಾಗೂ ವೀಡ್ ಕಟರ್ ನಲ್ಲಿ ಕಳೆ ಹೊಡೆಯುತ್ತಿರುವ ಪರಿಣಾಮ ಈ ಗಿಡದ ತಳಿಯೇ ಕಣ್ಣರೆಯಾಗುತ್ತಾ ಹೋಗುತ್ತಿದೆ.

ಅಂದಹಾಗೆ ಇಂದು ಬಹಳಷ್ಟು ಜನರನ್ನು ಯೌವನದ ದಿನಗಳಲ್ಲಿಯೇ ನಿತ್ಯ ಬಾಧಿಸುತ್ತಿರುವ ಕೊಲಸ್ಟ್ರಾಲ್, ರಕ್ತದೊತ್ತಡ, ಗ್ಯಾಸ್ಟ್ರಿಕ್ ಮುಂತಾದ ರೋಗಗಳಿಗೆ ರಾಮಬಾಣದಂತಿರುವ ಈ ಜೀರಿಗೆ ಮೆಣಸಿನ ಕಾಯಿಗೆ ಅಂಗಡಿಗಳಲ್ಲಿ ಒಂದು ಕೆಜಿ ಗೆ ರೂಪಾಯಿ 1200 ರಿಂದ 2,000 ದವರೆಗೂ ಬೆಲೆ ಇದೆ. ಒಂದು ಗಿಡ ವರ್ಷಕ್ಕೆ ಸರಾಸರಿ 5 ಕೆ.ಜಿ ಹಣ್ಣು ಕೊಡುತ್ತದೆ ಎಂಬ ಅಂದಾಜಿದೆ.

ತೇಜಸ್ವಿಯವರ ಕರ್ವಾಲೊ ಕಾದಂಬರಿಯಲ್ಲಿ ಬರುವ ಹಾವಾಡಿಗ ವೆಂಕಟನು, ಹಾವಿನಿಂದ ಕಡೆಸಿಕೊಂಡವರಿಗೆ ಈ ಜೀರಿಗೆ ಮೆಣಸಿನ ಕಾಯಿಯನ್ನು ತಿನ್ನಲು ಕೊಡುತ್ತಿದ್ದದದ್ದು ನನಗೆ ಇನ್ನೂ ನೆನಪಿದೆ.
ಅನೇಕ ಔಷಧೀಯ ಗುಣಗಳು ಇರುವುದರಿಂದ, ಈ ಗಾಂಧರಿಯನ್ನು ಒಣಗಿಸಿ,ಕೇರಳದಿಂದ ದುಬೈಗೆ ಎಕ್ಸ್ಪೋರ್ಟ್ ಮಾಡುತ್ತಿದ್ದು , ವಿದೇಶಗಳಲ್ಲಿ ಬಹಳ ಬೇಡಿಕೆ ಈ ಜೀರಿಗೆ ಮೆಣಸಿನ ಕಾಯಿಗೆ ಇದೆ.

ಮಲೆನಾಡಿನ ಪರಿಸರದೊಳಗೆ ಸಂಪ್ರದಾಯ ಮತ್ತು ಪರಂಪರೆಯ ಭಾಗವಾಗಿ, ಆಹಾರ ಪದ್ಧತಿಯಲ್ಲಿ ನಿತ್ಯ ಬಳಕೆಯಾಗುತ್ತಿದ್ದ ಈ ಜೀರಿಗೆ ಮೆಣಸಿನ ಕಾಯಿಯ ಬಳಕೆ ಮತ್ತು ಬೆಳೆಯುವಿಕೆ ಬಗ್ಗೆ ಮಹತ್ವ ಕೊಡುವುದು ಪರಿಸರ ಹಾಗೂ ಆರೋಗ್ಯದ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ ಎಂಬುದು ನ್ಯೂಸ್ ಕಿಂಗ್ ಅಭಿಪ್ರಾಯ.

ಆರೋಗ್ಯವೇ ಭಾಗ್ಯ ಎಂಬುದು ಗೊತ್ತಾಗುವುದು ನಮ್ಮ ನಮ್ಮ ಆರೋಗ್ಯ ಕಳೆದು ಹೋದಾಗ ಮಾತ್ರ. ಅಲ್ಲಿಯವರೆಗೆ ಆರೋಗ್ಯದ ಮಹತ್ವ ನಮಗೆ ತಿಳಿಯುವುದಿಲ್ಲ. ಒಂದು ಒಳ್ಳೆಯ ಆರೋಗ್ಯ ಜೀವನಕ್ಕಾಗಿ ಜೀರಿಗೆ ಮೆಣಸಿನ ಕಾಯಿಯನ್ನು ಸೇವಿಸೋಣ, ಆ ಸಂತತಿಯನ್ನು ಕಾಪಾಡುವ ಮೂಲಕ ಹಿತ್ತಲ ಸಂಸ್ಕೃತಿಯನ್ನು ಉಳಿಸಿಕೊಳ್ಳೋಣ.

ಲೇಖನ: ಡಿ.ಎಂ. ಮಂಜುನಾಥಸ್ವಾಮಿ, ಚಿಕ್ಕಮಗಳೂರು       

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news     

http://kalpa.news/wp-content/uploads/2024/04/VID-20240426-WA0008.mp4

Tags: Gandhari ChillyKannada News WebsiteKannada_NewsKannada_News_LiveKannada_News_OnlineKannada_WebsiteLatest News KannadaNews_in_KannadaNews_KannadaSpecial Articleಗಾಂಧಾರಿ ಮೆಣಸಿನಕಾಯಿವಿಶೇಷ ಲೇಖನ
Share197Tweet123Send
Previous Post

ಪೃಥು ಪಿ ಅದ್ವೈತ್ ಗೆ ವಾಮನ ಪ್ರಿಯ ಪ್ರಶಸ್ತಿ

Next Post

ಶಟಲ್ ಬ್ಯಾಡ್ಮಿಂಟನ್‌ | ಕ್ರೈಸ್ಟ್‌ಕಿಂಗ್  ವಿದ್ಯಾರ್ಥಿಗಳ ತಂಡ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಶಟಲ್ ಬ್ಯಾಡ್ಮಿಂಟನ್‌ | ಕ್ರೈಸ್ಟ್‌ಕಿಂಗ್  ವಿದ್ಯಾರ್ಥಿಗಳ ತಂಡ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಶಟಲ್ ಬ್ಯಾಡ್ಮಿಂಟನ್‌ | ಕ್ರೈಸ್ಟ್‌ಕಿಂಗ್  ವಿದ್ಯಾರ್ಥಿಗಳ ತಂಡ ಜಿಲ್ಲಾ ಮಟ್ಟಕ್ಕೆ ಆಯ್ಕೆ

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

March 12, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

February 12, 2026
A Memorable Violin Concert By Nadavallabha Vid VV Ravi

A Memorable Violin Concert By Nadavallabha Vid VV Ravi

March 29, 2026
ನೈರುತ್ಯ ರೈಲ್ವೆ ದಿವ್ಯಾಂಗಜನ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷರಾಗಿ ಕಿರಣ್ ಬಿ. ಚಿನ್ನಾರಾಥೋಡ್ ಮರು ಆಯ್ಕೆ

ನೈರುತ್ಯ ರೈಲ್ವೆ ದಿವ್ಯಾಂಗಜನ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷರಾಗಿ ಕಿರಣ್ ಬಿ. ಚಿನ್ನಾರಾಥೋಡ್ ಮರು ಆಯ್ಕೆ

March 29, 2026
ಶಿರಸಿ | ಪ್ರವಾಸಿಗರಿಗೆ ಸೇವೆ ನೀಡಲು ‘ಎಸೆನ್ಷಿಯಾ ರೆಸಾರ್ಟ್ ಮತ್ತು ಸ್ಪಾ’ ಸಜ್ಜು

ಶಿರಸಿ | ಪ್ರವಾಸಿಗರಿಗೆ ಸೇವೆ ನೀಡಲು ‘ಎಸೆನ್ಷಿಯಾ ರೆಸಾರ್ಟ್ ಮತ್ತು ಸ್ಪಾ’ ಸಜ್ಜು

March 29, 2026
ಶಿವಮೊಗ್ಗ | ತೋಟದಲ್ಲಿ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾದ ಉಪನ್ಯಾಸಕ | ಎಸ್’ಪಿ ನಿಖಿಲ್ ಹೇಳಿದ್ದೇನು?

ಶಿವಮೊಗ್ಗ | ತೋಟದಲ್ಲಿ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾದ ಉಪನ್ಯಾಸಕ | ಎಸ್’ಪಿ ನಿಖಿಲ್ ಹೇಳಿದ್ದೇನು?

March 29, 2026
ಲೋಕಕಲ್ಯಾಣರ್ಥ ಮಾ.30ರಂದು ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ

ಎಲ್ಲಾ ರೋಗಗಳಿಗೆ ಮಹಾ ಔಷಧ | ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ

March 29, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL