ಭದ್ರಾವತಿ: 2018-19 ನೆಯ ಸಾಲಿನ ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ನಗರದ ನ್ಯೂಟೌನ್ ಎಸ್ಎವಿ ಶಾಲೆಯ ವಿದ್ಯಾರ್ಥಿನಿ ಎಂ. ದಿವ್ಯಾ ಮತ್ತು ಲೋಯರ್ ಹುತ್ತಾ ಪೂರ್ಣಪ್ರಜ್ಞಾ ಶಾಲೆಯ ವಿದ್ಯಾರ್ಥಿನಿ ಪ್ರತಿಕ್ಷಾ ಇಬ್ಬರು 625 ಕ್ಕೆ 619 ಅಂಕಗಳನ್ನು ಪಡೆದು ಶೇ. 99.04 ಫಲಿತಾಂಶ ತಮ್ಮದಾಗಿಸಿಕೊಂಡಿರುವ ತಾಲೂಕಿನ ಟಾಪರ್ ವಿದ್ಯಾರ್ಥಿಗಳಾಗಿ ಹೊರಹೊಮ್ಮಿದ್ದು, ಭದ್ರಾವತಿಗೆ ಕೀರ್ತಿ ತಂದಿದ್ದಾರೆ.
ಎಸ್’ಎವಿ ಶಾಲೆ:
ಒಟ್ಟು 114 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ ಶೇ. 100 ಫಲಿತಾಂಶ ತನ್ನದಾಗಿಸಿಕೊಂಡಿದೆ. ವಿದ್ಯಾರ್ಥಿನಿ ಎಂ. ದಿವ್ಯಾ 619 ಶೇ. 99.04 ಅಂಕಗಳನ್ನು ಗಳಿಸಿ ಟಾಪರ್ ಆದರೆ 45 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 43 ಎ ಗ್ರೇಡ್, 22 ಬಿ ಪ್ಲಸ್ ಹಾಗೂ 4 ವಿದ್ಯಾರ್ಥಿಗಳು ಬಿ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.
ಎ.ಎಚ್. ರಾಫೆ 617 ಅಂಕ ಶೇ.98.72, ಆರ್. ವರುಣ್ 611 ಶೇ.97.76, ಎನ್.ಇ. ಪ್ರೀತಮ್ 609, ಎಸ್.ಧನುಶ್ರೀ 607, ಎಸ್. ಲಾವಣ್ಯ 607, ಎಸ್. ಪ್ರೇರಣಾ 603, ಎಸ್. ಸಿಂಚನ 603, ಕೆ. ನಿಸರ್ಗ 600, ಡಿ. ಸುಪ್ರಿಯ 600, ಆರ್. ಚಿನ್ಮಯಾನಂದ 600 ಅಂಕಗಳನ್ನು ಪಡೆದು ವಿದ್ಯಾಸಂಸ್ಥೆಯ 600 ಕ್ಕಿಂತ ಹೆಚ್ಚ ಅಂಕ ಪಡೆದ ವಿದ್ಯಾರ್ಥಿಗಳಾಗಿದ್ದಾರೆ. ಇನ್ನುಳಿದಂತೆ ಗುಣಾತ್ಮಕವಾಗಿ ಅತ್ಯುತ್ತಮ ಶ್ರೇಣಿ ಪಡೆದುಕೊಂಡಿದೆ. ಆಡಳಿತಾಧಿಕಾರಿ ಜಗದೀಶ್ ಮತ್ತು ಪ್ರಾಂಶುಪಾಲ ಗಿರೀಶ್ ಹಾಗೂ ಡಾ.ಹರಿಣಾಕ್ಷಿ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕ ವೃಂದಕ್ಕೆ ಅಭಿಂದಿಸಿದ್ದಾರೆ.
ಪೂರ್ಣಪ್ರಜ್ಞಾ ವಿದ್ಯಾಸಂಸ್ಥೆ, ಲೋಯರ್ ಹುತ್ತಾ:
ಒಟ್ಟು 93 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ ಶೇ. 100 ಫಲಿತಾಂಶ ತನ್ನದಾಗಿಸಿಕೊಂಡಿದೆ. ವಿದ್ಯಾರ್ಥಿನಿ ಪ್ರತಿಕ್ಷಾ 619 ಅಂಕಗಳನ್ನು ಪಡೆದುಕೊಂಡರೆ, ಸಾತ್ವಿಕ್ ಕಾಮತ್ 618, ವಿಕ್ರಂ ಪಟೆಲ್ ಹಾಗೂ ಸಿಂಚನ ಹೆಬ್ಬಂಡಿ ದಯಾನಂದ್ ತಲಾ 617 ಅಂಕಗಳನ್ನು ಪಡೆದುಕೊಂಡಿದ್ದಾರೆ. 74 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 19 ವಿದ್ಯಾರ್ಥಿಗಳು ಎ ಗ್ರೇಡ್ನಲ್ಲಿ ಹಾಗೂ 24 ವಿದ್ಯಾರ್ಥಿಗಳು 600 ಕ್ಕಿಂತ ಹೆಚ್ಚು ಅಂಕ ಪಡೆದಿದ್ದಾರೆ.
ಅಕ್ಕಮಹಾದೇವಿ ವಿದ್ಯಾಸಂಸ್ಥೆ, ಹೊಸಮನೆ:
36 ವಿದ್ಯಾರ್ಥಿಗಳ ಪೈಕಿ 35 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ ಶೇ. 97 ಫಲಿತಾಂಶ ಪಡೆದುಕೊಂಡಿದೆ. ವಿದ್ಯಾರ್ಥಿ ಸಾದುಲ್ಲಾ 594 ಅಂಕ ಶೇ. 95 ಪಡೆದು ಶಾಲೆಯ ಟಾಪರ್ ವಿದ್ಯಾರ್ಥಿಯಾಗಿದ್ದಾನೆ. ಬಿ. ಮನೋಜ್ 564, ಬಿ.ಎಸ್. ಉಷಾ 546, ಆರ್. ಮೇಘನಾ 539, ಡಿ.ಎಸ್. ಹರ್ಷಿತಾ 537, ಬಿ.ಎಚ್. ಜಯಂತ್ 536 ಅಂಕಗಳನ್ನು ಪಡೆದು ಡಿಸ್ಟಿಂಕ್ಷನ್ ಸಾಧಿಸಿದ ವಿದ್ಯಾರ್ಥಿಗಳಾಗಿದ್ದಾರೆ.
ಜವಾಹರಲಾಲ್ ನೆಹರೂ ಆಂಗ್ಲ ಪ್ರೌಢಶಾಲೆ, ಹಳೇನಗರ
ಎಸ್ಎಸ್ಎಲ್ಸಿ ಫಲಿತಾಂಶವು ಶೇ. 98 ಪಡೆದುಕೊಂಡಿದೆ. ಪರೀಕ್ಷೆಗೆ ಹಾಜರಾದ 100 ಮಂದಿ ವಿದ್ಯಾರ್ಥಿಗಳ ಪೈಕಿ 16 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಸಾಧಿಸಿದ್ದಾರೆ. ವಿದ್ಯಾರ್ಥಿ ನೇಹಾ 578 ಶೇ. 92.04 ಅಂಕಪಡೆದು ಶಾಲೆಯ ಟಾಪರ್ ವಿದ್ಯಾರ್ಥಿ ಎನಿಸಿಕೊಂಡಿದ್ದಾರೆ. ವಿದ್ಯಾಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಎಸ್.ಎಲ್. ಲಕ್ಷ್ಮಣ ಅವರ ಮೊಮ್ಮಗಳು ಎಸ್.ಎಲ್. ವೈಷ್ಣವಿ 556, ಸಿದ್ದರಾಮೇಶ್ವರ 555, ಯುವರಾಜ್ 554, ಶಶಾಂಕ್ ಬಾರದ್ವಾಜ್ 538, ಅಮೃತ 537, ದೀಕ್ಷಾ 530, ಷಿಫಾ 526, ವಿನಂತ್ ಪಾಟೀಲ್ 522, ಪಿ. ಜೀವನ್ 519, ಮಂಜುನಾಥ್ 516, ಪ್ರೀತಿ ವರ್ಧನ 516, ಐಶ್ವರ್ಯ 513, ಆರ್. ಸಂಜನಾ 509, ಸಾನಿಯ ತಸ್ಲಿಂ 506, ಆರ್.ಸಂಜನಾ 502 ಅಂಕಗಳನ್ನು ಪಡೆದ ಡಿಸ್ಟಿಂಕ್ಷನ್ ಸಾಧಿಸಿದ ವಿದ್ಯಾರ್ಥಿಗಳಾಗಿದ್ದಾರೆ.
ಎಂಪಿಎಂ ಆಂಗ್ಲ ಪ್ರೌಢಶಾಲೆ, ಕಾಗದ ನಗರ:
ಒಟ್ಟು 49 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ ಶೇ. 84 ಫಲಿತಾಂಶ ತನ್ನದಾಗಿಸಿಕೊಂಡಿದೆ. 12 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಸಾಧಿಸಿದ್ದಾರೆ. ಅವರಲ್ಲಿ ವಿದ್ಯಾರ್ಥಿಗಳಾದ ಡಿ.ಎಸ್. ವಿಶಾಲ್ 608, ಕೆ. ಬಾಲಾಜಿ 583 ಹಾಗೂ ಭೂಮಿಕಾ ಪಿ.ಕುಂಠೆ 582 ಅತಿಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಾಗಿದ್ದಾರೆ.
ರಾಜ್ಯ ಸರಕಾರಿ ನೌಕರರ ಸಂಘದ ಆಶ್ರಯದಲ್ಲಿ ನಡೆಯುವ ವಿಶ್ವೇಶ್ವರಾಯ ವಿದ್ಯಾಸಂಸ್ಥೆ:
ಎಸ್ಎಸ್ಎಲ್ಸಿ ಕನ್ನಡ ವಿಭಾಗದಲ್ಲಿ ಶೇ. 72.50 ಫಲಿತಾಂಶ ಪಡೆದುಕೊಂಡಿದೆ. 40 ವಿದ್ಯಾಥಿಗಳ ಪೈಕಿ 29 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಯು. ಸಹಾನ 535, ಬಿ. ಪವಿತ್ರ 530, ಮಹಮದ್ ಕೈಫ್ 476 ಅಂಕಗಳನ್ನು ಪಡೆದು ಡಿಸ್ಟಿಂಕ್ಷನ್ ಸಾಧಿಸಿದ್ದರೆ ಆಂಗ್ಲ ವಿಭಾಗವು ಶೇ. 87.03 ಫಲಿತಾಂಶ ಪಡೆದುಕೊಂಡಿದೆ. ಒಟ್ಟು 54 ವಿದ್ಯಾರ್ಥಿಗಳ ಪೈಕಿ 47 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. 3 ಮಂದಿ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 33 ಪ್ರಥಮ ಹಾಗೂ 11 ದ್ವಿತೀಯ ಸ್ಥಾನದಲ್ಲಿ ಪಾಸಾಗಿದ್ದಾರೆ. ವಿದ್ಯಾರ್ಥಿನಿ ಅರ್ಪಿತ 563, ಪಿ.ಮೇಘನ 549, ಮಹಮದ್ ಶೋಯಬ್ 534 ಅಂಕಗಳನ್ನು ಪಡೆದು ಡಿಸ್ಟಿಂಕ್ಷನ್ ಸಾಧಿಸಿದ್ದಾರೆ.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post