No Result
View All Result
Hero Motocorp Glamour x Integrated ABS
English Articles

Hero Motocorp Launches Glamour x With Integrated-ABS

by kalpa News
September 12, 2026
0

Kalpa Media House  |  Bengaluru  | Hero MotoCorp, the world's largest manufacturer of motorcycles and scooters, today announced the launch...

Read moreDetails
Bengaluru Banaswadi MEMU Shed GM Inspection

SWR : GM Reviews MEMU Operations and Infrastructure at Banaswadi

September 12, 2026
SWR hubballi-railway-fire-safety-training-emergency

Fire Safety Training Held for Railway Officials and Staff in Hubballi

September 11, 2026
Carnatic Music Intriguing Festival of Raga Tana Pallavi copy

RTP | An intriguing festival of Raga-Tana-Pallavi

September 9, 2026
Anak Krakatau Eeruption Disrupts Flights Indonesia-Singapore

Singapore Issues Travel Advisory as Mount Anak Krakatau Eruption Disrupts 2.3K Flights in Indonesia

September 8, 2026
  • Advertise With Us
  • Grievances
  • About Us
  • Contact Us
Saturday, September 12, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಶಿವಮೊಗ್ಗ ಸಾಗರ

ಸಾಗರ ರೈಲು ನಿಲ್ದಾಣದಲ್ಲಿ ಸ್ಟೇಷನ್ ಮಹೋತ್ಸವ | ಏನಿದು ಆಚರಣೆ?

kalpa News by kalpa News
December 24, 2025
in ಸಾಗರ
0
ಸಾಗರ ರೈಲು ನಿಲ್ದಾಣದಲ್ಲಿ ಸ್ಟೇಷನ್ ಮಹೋತ್ಸವ | ಏನಿದು ಆಚರಣೆ?
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಸಾಗರ  |

ಮಲೆನಾಡು ಪ್ರದೇಶದ ಇತಿಹಾಸ ಮತ್ತು ಅಭಿವೃದ್ಧಿಯ ಹೆಮ್ಮೆಯ ಸಂಕೇತವಾದ ಸಾಗರ ಜಂಬಗಾರು ರೈಲು ನಿಲ್ದಾಣದಲ್ಲಿ ಸ್ಟೇಷನ್ ಮಹೋತ್ಸವವನ್ನು ಆಚರಿಸಲಾಯಿತು.

ರೈಲ್ವೆ ಇಲಾಖೆಯ ಅಧಿಕೃತ ದಾಖಲೆಗಳ ಪ್ರಕಾರ, ಈ ನಿಲ್ದಾಣವು 1938-39ರಲ್ಲಿ ಸ್ಥಾಪನೆಯಾಗಿ ಹಲವು ದಶಕಗಳನ್ನು ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಸ್ಟೇಷನ್ ಮಹೋತ್ಸವವು ಭಾರತೀಯ ರೈಲ್ವೆಯ ಮಹತ್ವದ ಉಪಕ್ರಮವಾಗಿದ್ದು, ರೈಲು ನಿಲ್ದಾಣಗಳ ಇತಿಹಾಸ, ಪರಂಪರೆ, ಅಭಿವೃದ್ಧಿ ಹಾಗೂ ಸಾರ್ವಜನಿಕ ಸೇವೆಯ ಪಾತ್ರವನ್ನು ಜನರಿಗೆ ಪರಿಚಯಿಸುವುದು ಇದರ ಉದ್ದೇಶವಾಗಿದೆ. ವಿಶೇಷವಾಗಿ ಶಾಲಾ ಮಕ್ಕಳನ್ನು ಒಳಗೊಂಡಂತೆ ಯುವ ಪೀಳಿಗೆಗೆ ರಾಷ್ಟ್ರ ನಿರ್ಮಾಣದಲ್ಲಿ ರೈಲ್ವೆಯ ಮಹತ್ವವನ್ನು ಅರಿವುಗೊಳಿಸುವುದಕ್ಕೆ ಇದು ಸಹಕಾರಿಯಾಗಿದೆ.

ಭಾರತೀಯ ರೈಲ್ವೆ ದಾಖಲೆಗಳಲ್ಲಿ ಸಾಗರವನ್ನು ಅಧಿಕೃತವಾಗಿ ಸಾಗರ ಜಂಬಗಾರು ಎಂದು ದಾಖಲಿಸಲಾಗಿದೆ. ಸಾಗರಕ್ಕೆ ಸೇವೆ ನೀಡಿದ ಮೊದಲ ರೈಲು ನಿಲ್ದಾಣವು ಬಸವನ ಹೊಳೆ ಅತ್ತ ಇರುವ ಜಂಬಗಾರು ಗ್ರಾಮದಲ್ಲಿ ಸ್ಥಾಪಿತವಾಗಿತ್ತು. ಮೀಟರ್ ಗೇಜ್ ಅವಧಿಯಲ್ಲಿ ಸಾಗರ ಜಂಬಗಾರು ನಿಲ್ದಾಣವನ್ನು ಎಸ್’ಆರ್’ಎಫ್ ಕೋಡ್’ನಿಂದ ಗುರುತಿಸಲಾಗುತ್ತಿದ್ದು, ತಾಳಗುಪ್ಪ ನಿಲ್ದಾಣಕ್ಕೆ ಟಿಎಲ್’ಜಿಪಿ ಕೋಡ್ ಇತ್ತು.

ಪ್ರಾರಂಭದಲ್ಲಿ ಮಲೆನಾಡಿನ ಪರ್ವತ ಪ್ರದೇಶದ ಸಂಪನ್ಮೂಲಗಳನ್ನು ಆರ್ಥಿಕವಾಗಿ ಬಳಸುವ ಉದ್ದೇಶದಿಂದ ಈ ಮೀಟರ್ ಗೇಜ್ ಮಾರ್ಗವನ್ನು ನಿರ್ಮಿಸಲಾಯಿತಾದರೂ, ನಂತರ ಲಿಂಗನಮಕ್ಕಿ ಅಣೆಕಟ್ಟಿನ ನಿರ್ಮಾಣ ಕಾರ್ಯಗಳಿಗೆ ಇದು ಮಹತ್ವದ ಪಾತ್ರ ವಹಿಸಿತು.
ಈ ನಿಲ್ದಾಣವನ್ನು 1938ರಲ್ಲಿ ಮೈಸೂರು ರಾಜ್ಯ ರೈಲ್ವೆಯವರು ನಿರ್ಮಿಸಿದ್ದು, ಸರ್ ಮಿರ್ಜಾ ಇಸ್ಮಾಯಿಲ್ ಅವರು ಸಾಗರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಆನಂದಪುರದಿಂದ ಸಾಗರವರೆಗೆ ರೈಲು ಮಾರ್ಗವನ್ನು ವಿಸ್ತರಿಸಲಾಯಿತು. 1949ರಲ್ಲಿ ಮಹಾರಾಜ ಶ್ರೀ ಚಾಮರಾಜ ಒಡೆಯರ್ ಅವರು ಮಹಾತ್ಮ ಗಾಂಧಿ ವಿದ್ಯುತ್ ಸ್ಥಾವರದ ಉದ್ಘಾಟನೆಗಾಗಿ ಸಾಗರಕ್ಕೆ ರೈಲಿನಲ್ಲಿ ಆಗಮಿಸಿ ಜೋಗ ಜಲಪಾತಕ್ಕೂ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಅವರು ಪ್ರಯಾಣಿಸಿದ ವಿಶೇಷ ಹಳದಿ ಬಣ್ಣದ ರೈಲನ್ನು ಸಾರ್ವಜನಿಕರ ವೀಕ್ಷಣೆಗೆ ಅವಕಾಶ ನೀಡಲಾಗಿತ್ತು.

ಹಲವಾರು ದಶಕಗಳ ಕಾಲ ಬೆಂಗಳೂರು ಸೇರಿದಂತೆ ವಿವಿಧ ಸ್ಥಳಗಳಿಂದ ವಾರ್ತಾಪತ್ರಿಕೆಗಳು, ಅಂಚೆ ಪತ್ರಗಳು ಹಾಗೂ ದೈನಂದಿನ ಅಗತ್ಯ ವಸ್ತುಗಳು ರೈಲಿನ ಮೂಲಕ ಸಾಗರಕ್ಕೆ ಬರುತ್ತಿದ್ದವು. ಈ ಕಾರಣದಿಂದ ರೈಲು ನಿಲ್ದಾಣವು ಈ ಪ್ರದೇಶದ ಜೀವನಾಡಿಯಾಗಿ ಕಾರ್ಯನಿರ್ವಹಿಸಿತು. ಡಾ. ರಾಜಕುಮಾರ್, ಬಸವರಾಜ ಕಟ್ಟಿಮನಿ, ಅನಕೃ ಸೇರಿದಂತೆ ಅನೇಕ ಗಣ್ಯರು ತಮ್ಮ ಭೇಟಿಯ ಸಂದರ್ಭದಲ್ಲಿ ಈ ನಿಲ್ದಾಣದ ಅತಿಥಿ ಗೃಹದಲ್ಲಿ ತಂಗಿದ್ದರು.ಇತಿಹಾಸದಲ್ಲಿ ಈ ನಿಲ್ದಾಣದ ಮುಂಭಾಗದಲ್ಲಿ ಸುಂದರವಾದ ಗುಲಾಬಿ ಹೂಗಳ ತೋಟವಿದ್ದು, ಆ ಕಾಲಕ್ಕೆ ಇದು ಮಾದರಿ ರೈಲು ನಿಲ್ದಾಣವೆಂದು ಪರಿಗಣಿಸಲ್ಪಟ್ಟಿತ್ತು. ಶಿವಮೊಗ್ಗ-ತಾಳಗುಪ್ಪ ವಿಭಾಗದಲ್ಲಿ ನೂರಾರು ರೈಲ್ವೆ ಸಿಬ್ಬಂದಿಗಳು ಸೇವೆ ಸಲ್ಲಿಸುತ್ತಿದ್ದು, ರೈಲು ಕಾರ್ಯಾಚರಣೆಗೆ ಮಹತ್ವದ ಕೊಡುಗೆ ನೀಡಿದರು.

1994ರಲ್ಲಿ ಗೇಜ್ ಪರಿವರ್ತನೆಯ ಹಿನ್ನೆಲೆಯಲ್ಲಿ ಮೀಟರ್ ಗೇಜ್ ಸೇವೆಯನ್ನು ಸ್ಥಗಿತಗೊಳಿಸಿ, ಎರಡು ಬೋಗಿಗಳ ರೈಲ್ ಬಸ್ ಸೇವೆಯನ್ನು ಆರಂಭಿಸಲಾಯಿತು. ನಂತರ 1995-96ರಲ್ಲಿ ಶ್ರೀ ಎನ್. ಡಿಸೋಜಾ ಅವರ ನೇತೃತ್ವದಲ್ಲಿ ಬ್ರಾಡ್ ಗೇಜ್ ಸಮಿತಿ ರಚನೆಯಾಗಿ ನಿರಂತರ ಹೋರಾಟ ನಡೆಯಿತು. ಈ ಪ್ರಯತ್ನಗಳ ಫಲವಾಗಿ 2011ರಲ್ಲಿ ಮೈಸೂರು-ಸಾಗರ ಇಂಟರ್ಸಿಟಿ ಬ್ರಾಡ್ ಗೇಜ್ ರೈಲು ಸೇವೆ ಆರಂಭವಾಯಿತು. ಪ್ರಸ್ತುತ ಈ ಮಾರ್ಗದಲ್ಲಿ ಹತ್ತು ರೈಲುಗಳು ಸಂಚರಿಸುತ್ತಿವೆ.
ಈ ರೈಲು ಮಾರ್ಗವು ಸಾಗರ ಮಾತ್ರವಲ್ಲದೆ ಶಿರಸಿ, ಸಿದ್ಧಾಪುರ, ಹೊಸನಗರ, ಸೊರಬ, ಕುಮಟಾ, ಹೊನ್ನಾವರ ಮತ್ತು ಭಟ್ಕಳ ಮೊದಲಾದ ನೆರೆಯ ತಾಲ್ಲೂಕುಗಳ ಪ್ರಯಾಣಿಕರಿಗೆ ಸಹ ಸೇವೆ ನೀಡುತ್ತಿದ್ದು, ರೈಲ್ವೆ ಮತ್ತು ಮಲೆನಾಡಿನ ಜನರ ನಡುವಿನ ಆಳವಾದ ಸಂಬಂಧವನ್ನು ಪ್ರತಿಬಿಂಬಿಸುತ್ತದೆ.

ಈ ಸಂದರ್ಭದಲ್ಲಿ ಖ್ಯಾತ ಜನಪದ ಹಾಗೂ ಚಲನಚಿತ್ರ ಕಲಾವಿದೆ ಲಕ್ಷ್ಮೀ ರಾಮಪ್ಪ ಗಡೇಮನೆ ಮತ್ತು ನಿವೃತ್ತ ರೈಲ್ವೆ ನೌಕರರಾದ ರಾಮದಾಸ್ ಪಿ.ಡಿ. ಅವರನ್ನು ಅವರ ಸೇವೆಗೆ ಗೌರವಿಸಿ ಸನ್ಮಾನಿಸಲಾಯಿತು. ನಿರ್ಮಲಾ ಬಾಲಕಿಯರ ಪ್ರೌಢಶಾಲೆ, ಸಾಗರದ ವಿದ್ಯಾರ್ಥಿನಿಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು.

ಈ ಕಾರ್ಯಕ್ರಮಕ್ಕೆ ಶಿವಮೊಗ್ಗ ಎಡಿಇಎನ್ ಹರಿರಾಮ್ ಮೀನಾ, ಎಡಿಎಂಇ ರಾಮೋದ್ ಕುಮಾರ್, ಸ್ಟೇಷನ್ ಕನ್ಸಾಲಿಡೇಟೆಡ್ ಸಮಿತಿಯ ಸದಸ್ಯರಾದ ರವಿ ಕೈತೋಟ, ರೈಲ್ವೆ ಸಿಬ್ಬಂದಿ, ನಿರ್ಮಲಾ ಬಾಲಕಿಯರ ಪ್ರೌಢಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು, ನಿವೃತ್ತ ರೈಲ್ವೆ ನೌಕರರು, ಕಲಾವಿದರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಂತ್ಯದಲ್ಲಿ ಸಾಗರ ಜಂಬಗಾರು ರೈಲು ನಿಲ್ದಾಣದ ಶ್ರೀಮಂತ ಪರಂಪರೆಯನ್ನು ಸಂರಕ್ಷಿಸಿ, ಅದರ ಇತಿಹಾಸವನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವದಾಗಿ ತಿಳಿಸಲಾಯಿತು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news     

https://kalpa.news/wp-content/uploads/2024/04/VID-20240426-WA0008.mp4

Tags: Indian RailwayIRCTCKannada News WebsiteLatest News KannadaMeter gaugeRailway StationSagar JambagaruShimogaShivamoggaShivamogga NewsStation Mahotsavಭಾರತೀಯ ರೈಲ್ವೆಮೀಟರ್ ಗೇಜ್ರೈಲು ನಿಲ್ದಾಣಲಿಂಗನಮಕ್ಕಿಸಾಗರಸಾಗರ ಜಂಬಗಾರುಸ್ಟೇಷನ್ ಮಹೋತ್ಸವ
Share198Tweet124Send
Aniruddha Vasishta S R

Aniruddha Vasishta S R

Editor-in-Chief

Previous Post

ಡಿ.25 ರಿಂದ 28 ದ್ವಿತೀಯ ಆಯುರ್ವೇದ ವಿಶ್ವ ಸಮ್ಮೇಳನ

Next Post

ರೋಗಬಾಧಿತರಿಗೆ ಭರವಸೆಯ ಕಿರಣ | ನೆಮ್ಮದಿ ಉಪಶಾಮಕ ಆರೈಕೆ ಕೇಂದ್ರ

kalpa News

kalpa News

Next Post
ರೋಗಬಾಧಿತರಿಗೆ ಭರವಸೆಯ ಕಿರಣ | ನೆಮ್ಮದಿ ಉಪಶಾಮಕ ಆರೈಕೆ ಕೇಂದ್ರ

ರೋಗಬಾಧಿತರಿಗೆ ಭರವಸೆಯ ಕಿರಣ | ನೆಮ್ಮದಿ ಉಪಶಾಮಕ ಆರೈಕೆ ಕೇಂದ್ರ

Leave a Reply Cancel reply

Your email address will not be published. Required fields are marked *

No Result
View All Result
Hero Motocorp Glamour x Integrated ABS
English Articles

Hero Motocorp Launches Glamour x With Integrated-ABS

by kalpa News
September 12, 2026
0

Kalpa Media House  |  Bengaluru  | Hero MotoCorp, the world's largest manufacturer of motorcycles and scooters, today announced the launch...

Read moreDetails
Bengaluru Banaswadi MEMU Shed GM Inspection

SWR : GM Reviews MEMU Operations and Infrastructure at Banaswadi

September 12, 2026
SWR hubballi-railway-fire-safety-training-emergency

Fire Safety Training Held for Railway Officials and Staff in Hubballi

September 11, 2026
Carnatic Music Intriguing Festival of Raga Tana Pallavi copy

RTP | An intriguing festival of Raga-Tana-Pallavi

September 9, 2026
Anak Krakatau Eeruption Disrupts Flights Indonesia-Singapore

Singapore Issues Travel Advisory as Mount Anak Krakatau Eruption Disrupts 2.3K Flights in Indonesia

September 8, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL