ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಲೀಡ್ ಬ್ಯಾಂಕ್ ಜಿಲ್ಲಾ ವಿಭಾಗಿಯ ಮ್ಯಾನೇಜರ್ ಎಂ.ಡಿ. ಯತೀಶ್ ಅವರನ್ನು ಕರ್ನಾಟಕ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಚನ್ನವೀರಪ್ಪ ಗಾಮನಗಟ್ಟಿ ಭೇಟಿ ಮಾಡಿ ಸ್ವನಿಧಿ ಆತ್ಮನಿರ್ಭರ್ ಅಡಿಯಲ್ಲಿ ಜಿಲ್ಲೆಯಲ್ಲಿ ಎಷ್ಟು ಫಲಾನುಭವಿಗಳಿಗೆ ಕಿರು ಸಾಲ ನೀಡಿರುವಿರಿ ಎಂದು ಮಾಹಿತಿ ಕೇಳಲಾಯಿತು.
ಮ್ಯಾನೇಜರ್ ಯತೀಶ್ ಮಾತನಾಡಿ, ಒಟ್ಟು ಜಿಲ್ಲೆಗಳಲ್ಲಿ 3552 ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಿರುವರು, ಅದರಲ್ಲಿ ಕೆಲವರು ಸರ್ಕಾರಿ ನೌಕರರು, ಇನ್ನೂ ಕೆಲವರು ಆರ್ಥಿಕವಾಗಿ ಪ್ರಬಲರು ಅರ್ಜಿ ಸಲ್ಲಿಸಿದ್ದಾರೆ. ಅವರಿಗೆ ಸ್ವನಿಧಿ ಆಡಿಯಲ್ಲಿ ಸಾಲ ನೀಡಲು ಬರುವುದಿಲ್ಲ ಎಂದರು.
ಸಿವಿಲ್ ಸ್ಕೋರ್ ಇಲ್ಲದವರು, ಈ ಮೊದಲು ಇತರೆ ಬ್ಯಾಂಕ್ಗಳಲ್ಲಿ ಸಾಲ ಪಡೆದು ತಿರಿಸದೆ ಇರುವವರಿಗೆ ಸಾಲ ನೀಡಿಲ್ಲ, ಕೆಲವರು ಅರ್ಜಿ ಸಲ್ಲಿಸಿ ಇದುವರೆಗೂ ಬ್ಯಾಂಕ್ ಕಡೆ ಬಂದಿರುವುದಿಲ್ಲ ಎಂದು ವಿವರಿಸಿದರು.
ಜಿಲ್ಲೆಯಲ್ಲಿ 2689 ಜನರಿಗೆ ಸಾಲ ನೀಡಿದ್ದು ಇನ್ನೂ 863 ಜನರು ಬಾಕಿ ಉಳಿದಂತೆ ಇದೆ ಹೀಗಾಗಿ ರಾಜ್ಯದಲ್ಲಿ ಫಲಾನುಭವಿಗಳಿಗೆ ಕಿರು ಸಾಲ ವಿತರಣೆಯಲ್ಲಿ ಎಂಟನೇ ಸ್ಥಾನದಲ್ಲಿ ಇದ್ದೇವೆ. ನಿಜವಾದ ಫಲಾನುಭವಿಗಳಿಗೆ ಸಾಲ ವಿತರಿಸಿ ಶಿವಮೊಗ್ಗ ಜಿಲ್ಲೆ ಕಿರು ಸಾಲ ನೀಡುವುದರಲ್ಲಿ ಮೊದಲನೇ ಸ್ಥಾನದತ್ತ ದಾಪುಗಾಲು ಇಡಲು ಪ್ರಯತ್ನಿಸುತ್ತಿದೆ ಎಂದು ತಿಳಿಸಿದರು.
ಶಿವಮೊಗ್ಗ ಮಹಾನಗರ ಪಾಲಿಕೆ ವತಿಯಿಂದ ಕಿರು ಸಾಲಕ್ಕೆ ಅರ್ಜಿ ಸಲ್ಲಿಸಿದವರು ಬ್ಯಾಂಕ್ಗೆ ಹೋಗಿ ಸಾಲ ಪಡೆಯಲು ಮತ್ತೊಮ್ಮೆ ಆಟೋ ಪ್ರಚಾರಕ್ಕೂ ಸಿದ್ದವಾಗಿದೆ ಎನ್ನಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post