ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಸಾಗರ: ವಿಭಾಗೀಯ ಆಸ್ಪತ್ರೆಯಲ್ಲಿ ಯಾವುದೇ ರೋಗಿಗಳಿಗೆ ತೊಂದರೆಯಾಗದಂತೆ ಚಿಕಿತ್ಸೆ ದೊರೆಯಲು ಕ್ರಮಕೈಗೊಳ್ಳಿ ಎಂದು ಶಾಸಕ ಹಾಲಪ್ಪ ಸೂಚಿಸಿದರು.
ಸಾಗರದ ಉಪ ವಿಭಾಗೀಯ ಆಸ್ಪತ್ರೆಯಲ್ಲಿ ನಡೆದ ಆರೋಗ್ಯ ರಕ್ಷಾ ಸಮಿತಿ ವಾರ್ಷಿಕ ಮಹಾಸಭೆಯಲ್ಲಿ ಪಾಲ್ಗೊಂಡು, ಆಸ್ಪತ್ರೆಯ ಮೂಲ ಸೌಕರ್ಯಗಳ ಬಗ್ಗೆ, ಕೊರೋನಾ ಕಾಯಿಲೆ ನಿಯಂತ್ರಣ, ರೋಗಿಗಳಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಚರ್ಚಿಸಿದರು.
ಎಂಎಸ್’ಐಎಲ್ ಅಧ್ಯಕ್ಷರಾಗಿ ನೇಮಕಗೊಂಡ ಶಾಸಕರನ್ನು ಆಸ್ಪತ್ರೆ ವತಿಯಿಂದ ಸನ್ಮಾನಿಸಲಾಯಿತು.
ಉಪ ವಿಭಾಗಾಧಿಕಾರಿಗಳು, ಪೌರಾಯುಕ್ತರು, ಟಿಎಚ್’ಒ ಡಾ.ಮೋಹನ್, ಡಾ.ಪ್ರಕಾಶ್ ಭೋಸ್ಲೆ, ಇಒ, ಸಿಪಿಐ, ಟಿ.ಡಿ. ಮೇಘರಾಜ್, ಸಂತೋಷ್ ಶೇಟ್, ರೇವಪ್ಪ ಹೊಸಕೊಪ್ಪ, ಅಕ್ಷರ ಚಿಪ್ಳಿ, ಬಿ.ಟಿ. ರವೀಂದ್ರ, ಮಾ.ಸ. ನಂಜುಂಡಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು
ಜುವಾರಿ ಸಿಮೆಂಟ್ ಕಂಪನಿ ವತಿಯಿಂದ ನಗರಸಭೆ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಪೌರಕರ್ಮಿಕರಿಗೆ ಪಡಿತರ ಕಿಟ್ ವಿತರಣಾ ಕಾರ್ಯಕ್ರಮಕ್ಕೆ ಶಾಸಕರು ಚಾಲನೆ ನೀಡಿದರು.
ಟಿ.ಡಿ. ಮೇಘರಾಜ್, ಪೌರಾಯುಕ್ತರಾದ ನಾಗಪ್ಪನವರು, ಕಿರಣ್ ಏಜೆನ್ಸಿಸ್ ಮಾಲೀಕರಾದ ಸುನಿಲ್ ಗಾಯ್ತೊಂಡೆ, ನಗರಸಭೆ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.
ಸಾಗರದ ಇಂಡಸ್ಟ್ರಿಯಲ್ ಏರಿಯಾದಲ್ಲಿ ವಿದ್ಯುತ್ ಲೈನ್ ದುರಸ್ಥಿ ಕಾರ್ಯದ ವೇಳೆ ವಿದ್ಯುತ್ ಅವಘಡದಿಂದ ಮೃತಪಟ್ಟ ಸಾಗರ ತಾ. ನೀಚಡಿ ಗ್ರಾಮದ ಕಿರಣ ಅವರ ಮನೆಗೆ ಶಾಸಕ ಎಚ್. ಹಾಲಪ್ಪ ನವರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ವೈಯಕ್ತಿಕ ಧನಸಹಾಯ ಮಾಡಿದರು. ಟಿ.ಡಿ. ಮೇಘರಾಜ್, ಚೇತನ್ ರಾಜ್ ಕಣ್ಣೂರು, ರೇವಪ್ಪ ಹೊಸಕೊಪ್ಪ, ಶ್ರೀಧರ್ ಸಂಪಳ್ಳಿ, ಗಣಪತಿ ಕಳ್ಳಿಮಟ್ಟಿ ಹಾಗೂ ಮೆಸ್ಕಾಂ ಅಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.
Get In Touch With Us info@kalpa.news Whatsapp: 9481252093
Discussion about this post