ಆತ್ಮೀಯರೇ,
ವಿವೇಕ ಶಿಕ್ಷಣ ವಾಹಿನಿಯು ಹಿಂದವಿ ಸ್ವರಾಜ್ಯ ಸ್ಥಾಪನಾ ದಿವಸ (ಛತ್ರಪತಿ ಶಿವಾಜಿ ಮಹಾರಾಜರ ಪಟ್ಟಾಭಿಷೇಕ ದಿವಸ ಅಥವಾ ಶಿವ ರಾಜ್ಯಾಭಿಷೇಕ ದಿವಸ) ದ ಪ್ರಯುಕ್ತ ಸಾರ್ವಜನಿಕರಿಗಾಗಿ ರಾಮಕೃಷ್ಣ ಆಶ್ರಮದ ಪೂಜ್ಯ ಸ್ವಾಮಿ ಹರ್ಷಾನಂದಜೀ ಮಹಾರಾಜ್ ರವರ ಪ್ರಶ್ನೋತ್ತರ ರೂಪದಲ್ಲಿ ಹಿಂದು ಧರ್ಮ ಎಂಬ ಪುಸ್ತಕವನ್ನಾಧರಿಸಿ ಸನಾತನಂ – The Construction Of Spiritual Minds! ಎಂಬ 100 ಅಂಕಗಳ ಲಿಖಿತ ಪರೀಕ್ಷೆಯನ್ನು ಆಯೋಜಿಸಿದೆ. ಅದರ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.
1. ಕನ್ನಡ ಭಾಷೆಯನ್ನು ಓದಿ ಬರೆಯಬಲ್ಲ, 12 ವರ್ಷ ಮೇಲ್ಪಟ್ಟ ಯಾವುದೇ ವ್ಯಕ್ತಿ ಈ ಪರೀಕ್ಷೆಯನ್ನು ತೆಗೆದುಕೊಳ್ಳಬಹುದು. ಈ ಪರೀಕ್ಷೆ ತೆಗೆದುಕೊಳ್ಳಲು ಯಾವುದೇ ಜಾತಿ, ಮತ, ಪಂಥ, ವರ್ಗ, ಲಿಂಗ ಬೇಧ ಇರುವುದಿಲ್ಲ.
2. ಪರೀಕ್ಷಾರ್ಥಿಯು ಮೊದಲು ಪರೀಕ್ಷಾ ಶುಲ್ಕ 108 ರೂಗಳನ್ನು ವಾಹಿನಿಯ ಬ್ಯಾಂಕ್ ಅಥವಾ ಪೇಟಿಎಮ್ ಅಕೌಂಟಿಗೆ ಜಮೆ ಮಾಡಬೇಕು. ನಂತರ ಶುಲ್ಕ ಪಾವತಿಸಿದ ದಾಖಲೆಯೊಂದಿಗೆ ತಮ್ಮ ಪೂರ್ಣ ಅಂಚೆ ವಿಳಾಸವನ್ನು ದಿನಾಂಕ 31 ಜೂನ್ 2018 ರೊಳಗಾಗಿ ನಮ್ಮ ದೂರವಾಣಿ ಸಂಖ್ಯೆಗೆ (9880649290) ವಾಟ್ಸಾಪ್ ಅಥವಾ ಎಸ್ ಎಮ್ ಎಸ್ ರೂಪದಲ್ಲಿ ಕಳುಹಿಸತಕ್ಕದ್ದು.
3. ಜುಲೈ ಮೊದಲ ವಾರದಲ್ಲಿ ಪರೀಕ್ಷಾರ್ಥಿಯ ವಿಳಾಸಕ್ಕೆ ನಾವು ಪ್ರಶ್ನೋತ್ತರ ರೂಪದಲ್ಲಿ ಹಿಂದು ಧರ್ಮ ಕಿರು ಪುಸ್ತಕ ಮತ್ತು ಪ್ರಶ್ನೆ ಪತ್ರಿಕೆಯನ್ನು ರಿಜಿಸ್ಟರ್ಡ್ ಅಂಚೆ ಮೂಲಕ ಕಳುಹಿಸಿಕೊಡುತ್ತೇವೆ.
4. ಪರೀಕ್ಷಾರ್ಥಿಯು ಪುಸ್ತಕವನ್ನು ಚೆನ್ನಾಗಿ ಅಧ್ಯಯನ ಮಾಡಿದ ನಂತರ ಪುಸ್ತಕವನ್ನು ನೋಡಿಕೊಂಡೇ ಪ್ರಶ್ನೆ ಪತ್ರಿಕೆಯಲ್ಲೇ ಉತ್ತರ ಬರೆದು ಅದನ್ನು ದಿನಾಂಕ 31 ಜುಲೈ 2018 ರೊಳಗಾಗಿ ನಮಗೆ ತಲುಪುವಂತೆ ಕೊರಿಯರ್ ಅಥವಾ ಅಂಚೆ ಮಾಡಬೇಕು.
5. ಉತ್ತರ ಬರೆಯಲು ಪ್ರಶ್ನೆ ಪತ್ರಿಕೆಯಲ್ಲೇ ಅವಕಾಶವಿರುವುದರಿಂದ ಬೇರೆ ಕಾಗದ ಬಳಸುವ ಅವಶ್ಯಕತೆಯಿರುವುದಿಲ್ಲ. ಇನ್ನೂ ಹೆಚ್ಚಿಗೆ ಬರೆಯಬೇಕೆನಿಸಿದವರು ಹೆಚ್ಚಿನ ಹಾಳೆಗಳನ್ನು ಬಳಸಬಹುದು.
6. ನೀವು ಕಳುಹಿಸಿದ ಉತ್ತರ ಪತ್ರಿಕೆಯನ್ನು ಮೌಲ್ಯಮಾಪನ ಮಾಡಿದ ನಂತರ ನೀವು ಪಡೆದ ಅಂಕಗಳನ್ನು ಆಧರಿಸಿ ಅ+ ಶ್ರೇಣಿ, ಅ ಶ್ರೇಣಿ, ಆ ಶ್ರೇಣಿಗಳೆಂಬ ಸ್ಥಾನಗಳನ್ನು ನಿರ್ಧರಿಸಲಾಗುವುದು.
7. ಭಾಗವಹಿಸಿದ ಪರೀಕ್ಷಾರ್ಥಿಗಳಲ್ಲಿ ಅ+ ಶ್ರೇಣಿ ಪಡೆದವರಿಗೆ 2 ಕಿರುಪುಸ್ತಕಗಳು ಮತ್ತು ಪ್ರಮಾಣ ಪತ್ರ, ಅ ಶ್ರೇಣಿ ಪಡೆದವರಿಗೆ 1 ಕಿರುಪುಸ್ತಕ ಮತ್ತು ಪ್ರಮಾಣ ಪತ್ರ ಹಾಗೂ ಆ ಶ್ರೇಣಿಯವರಿಗೆ ಕೇವಲ ಪ್ರಮಾಣ ಪತ್ರವನ್ನು ಬಹುಮಾನವಾಗಿ ನೀಡಿ ನಿಮ್ಮ ವಿಳಾಸಕ್ಕೆ ರಿಜಿಸ್ಟರ್ಡ್ ಅಂಚೆ ಮಾಡಲಾಗುವುದು.
8. ಪರೀಕ್ಷಾ ಶುಲ್ಕ : ಪ್ರಶ್ನೋತ್ತರ ರೂಪದಲ್ಲಿ ಹಿಂದು ಧರ್ಮ ಎಂಬ ಕಿರು ಪುಸ್ತಕ + ಪ್ರಶ್ನೆ ಪತ್ರಿಕೆ + ಇವೆರಡನ್ನು ಕಳುಹಿಸಲು ಪೋಸ್ಟಲ್ ಚಾರ್ಜ್ + ಪ್ರಮಾಣಪತ್ರ + ಬಹುಮಾನಗಳು + ಇವೆರಡನ್ನು ಕಳುಹಿಸಲು ಪೋಸ್ಟಲ್ ಚಾರ್ಜ್ + ಇತರೆ ಖರ್ಚುಗಳು. ಎಲ್ಲವನ್ನೂ ಸೇರಿಸಿ ಒಬ್ಬರಿಗೆ ಒಟ್ಟು 108 ರೂಪಾಯಿಗಳು.
9. ಪರೀಕ್ಷಾ ಶುಲ್ಕವನ್ನು ಕಳುಹಿಸಬೇಕಾದ ಅಕೌಂಟ್ ವಿವರ :
Name : Keshava M P
Bank : SBI Koppa, Mandya District
Account Number : 64130274206
IFSC Code : SBIN 0040846
10. ಶುಲ್ಕವನ್ನು ಪೇಟಿಎಂ ಮೂಲಕವೂ ಕಳುಹಿಸಬಹುದು. ಪೇಟಿಎಂ ನಂಬರ್: 9880649290
11. ಪರೀಕ್ಷಾ ಶುಲ್ಕ ಪಾವತಿಸಿದ ನಂತರ ಕಡ್ಡಾಯವಾಗಿ ನಮಗೆ ವಾಟ್ಸಾಪ್ ಅಥವಾ ಎಸ್ ಎಮ್ ಎಸ್ ಮೂಲಕ ನಿಮ್ಮ ಪೂರ್ಣ ವಿಳಾಸವನ್ನು ಕಳುಹಿಸಿ ನಿಮ್ಮ ನೋಂದಣಿ ಸಂಖ್ಯೆಯನ್ನು ಪಡೆಯತಕ್ಕದ್ದು.
12. ಈ ಯೋಜನೆಯನ್ನು ನಡೆಸಲು ಪರೀಕ್ಷಾ ಶುಲ್ಕವನ್ನು ಪಡೆದಾಗ್ಯೂ ಸಂಸ್ಥೆಗೆ ಹಣದ ಕೊರತೆ ಬೀಳುವ ಸಾಧ್ಯತೆ ಇರುವುದರಿಂದ (ಹಿಂದಿನ ನಿರ್ಮಾಣಂ ಯೋಜನೆಯ ಅನುಭವದ ಆಧಾರದ ಮೇಲೆ ಯೋಚಿಸಿದ ಹಾಗೆ) ದಾನಿಗಳು ಸಹಕಾರ ನೀಡುವ ಮನಸ್ಸು ಮಾಡಿದಲ್ಲಿ ಕೃತಜ್ಞತಾ ಪೂರ್ವಕವಾಗಿ ನಿಮ್ಮ ಸಹಾಯವನ್ನು ಸ್ವೀಕರಿಸಲಾಗುವುದು. ಒಂದು ವೇಳೆ ಸಾಕಷ್ಟು ದಾನ ದೊರೆಯದಿದ್ದಲ್ಲಿಯೂ ಕೆಲಸ ನಿಲ್ಲಿಸುವ ಪ್ರಶ್ನೆಯೇ ಇಲ್ಲ, ಅದು ಬೇರೆ ಮಾತು!
13. ಈ ಪರೀಕ್ಷೆಯನ್ನು ಛತ್ರಪತಿ ಶಿವಾಜಿ ಮಹಾರಾಜರ ಪಟ್ಟಾಭಿಷೇಕ ದಿನದ ಪ್ರಯುಕ್ತ ಏರ್ಪಡಿಸಿರುವುದರಿಂದ ಪರೀಕ್ಷೆಯನ್ನು ಅತ್ಯಂತ ಚೆನ್ನಾಗಿ ಬರೆದಿರುವ ಆಯ್ದ ಕೆಲವು ಜನರಿಗೆ ಶಿವಾಜಿ ಮಹಾರಾಜರ ಅಪರೂಪದ ಜೀವನ ಚರಿತ್ರೆ (ಯುಗಾವತಾರ – ಲೇಖಕರು ಹೂ ವೆ ಶೇಷಾದ್ರಿ) ಯನ್ನು ಕೊಡಲು ದಾನಿಗಳು ಸಹಕಾರ ನೀಡಬಹುದು.
14. ಸಂಯೋಜಕರಾಗಿ ಭಾಗವಹಿಸುವವರು ಒಟ್ಟಿಗೆ ಹಲವು ಜನರಿಗೆ (ಕನಿಷ್ಠ 10 ಜನರಿಗೆ) ಪರೀಕ್ಷೆ ಬರೆಸಬಹುದು. ಇದರಿಂದ ನಮಗೆ ಪೋಸ್ಟಲ್ ಚಾರ್ಜ್ ಉಳಿತಾಯವಾಗುತ್ತದೆ. ಹೀಗಾಗಿ ಸಂಯೋಜಕರಿಗೆ ಅವರು ಪರೀಕ್ಷೆ ಬರೆಸಿದ ಜನರ ಸಂಖ್ಯೆಗನುಗುಣವಾಗಿ ಪುಸ್ತಕರೂಪದ ಉಡುಗೊರೆಗಳನ್ನು ನೀಡಲಾಗುತ್ತದೆ.
15. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : ವಿವೇಕ ಶಿಕ್ಷಣ ವಾಹಿನಿ – 9880649290
(ಏನಿದು ಸನಾತನಂ? ಏತಕ್ಕಾಗಿ ಇದು ಬೇಕು? : ನಾಳಿನ ಲೇಖನದಲ್ಲಿ ಕುತೂಹಲಕಾರಿ ಮಾಹಿತಿ ನಿರೀಕ್ಷಿಸಿ)
Discussion about this post